Republic Day Speeches

Republic Day is a significant event in India, celebrated on 26th January every year. It marks the day when India became a republic and adopted its Constitution in 1950. Students and parents often search for Republic Day speeches to understand its importance, learn about the sacrifices of freedom fighters, and reflect on the values of democracy, equality, and justice. Republic Day inspires everyone to be proud of India's rich heritage and to contribute positively to the nation's growth. The day also emphasizes the importance of unity, respect for the Constitution, and the responsibilities of every citizen in making India a better place.


Republic Day Speeches for Different Classes

Table of Contents:

Speech for 1st to 3rd Standard

Good morning, respected teachers and my dear friends,

Happy Republic Day! Today, we celebrate the day when India became a republic. This means India got its own rules and the power to make decisions. Our Constitution, written by Dr. B.R. Ambedkar, helps us live happily and safely.

On this day, we remember our leaders who worked hard for our freedom. They fought for us, and now we live in a free country.

Let us be kind, helpful, and respectful to everyone. Jai Hind!

Speech for 5th Standard

Good morning, respected teachers and my dear friends,

Today, we celebrate Republic Day. On this day, 26th January, in the year 1950, India became a republic. This means that we got our own Constitution, and we started making our own rules. Our Constitution was written by Dr. B.R. Ambedkar and it tells us how to live together in peace and harmony.

Republic Day is very special because it reminds us of the struggles our freedom fighters faced. Leaders like Mahatma Gandhi, Jawaharlal Nehru, and Subhas Chandra Bose worked hard to make India free from British rule.

On this day, we also remember that we should be good citizens, follow the rules, and help others. Let us promise to be honest and work hard to make India a better place.

Jai Hind!

Speech for 7th Standard

Good morning, respected teachers and my dear friends,

Today, we celebrate Republic Day, a day that marks the importance of our Constitution and our country’s independence. On 26th January 1950, India became a republic, and our Constitution came into effect. Dr. B.R. Ambedkar and other leaders worked tirelessly to create a fair and just system for all Indians.

Republic Day is not just about the grand parade in New Delhi, but also about remembering the sacrifices made by freedom fighters. Leaders like Sardar Patel, Jawaharlal Nehru, and Bhagat Singh fought for our freedom so that we can live in a democracy. They gave their lives for us to have the right to live in a free and fair society.

As students, it is our duty to contribute to our country’s growth. We must study hard, respect others, and work for the betterment of society. Let us take pride in being Indians and work to make our country stronger and more united.

Jai Hind!

Speech for High School Students

Good morning, respected teachers and my dear friends,

Today, we gather here to celebrate Republic Day, a day that holds immense significance for every citizen of India. On 26th January 1950, India became a republic, and the Constitution of India came into effect. This document, written by Dr. B.R. Ambedkar and others, was the foundation for the laws that govern our country and ensure equality and justice for all.

Republic Day is a reminder of the struggles faced by our freedom fighters—people like Mahatma Gandhi, Subhas Chandra Bose, and Rani Lakshmi Bai—who sacrificed their lives for the independence and future of our country. Their courage and determination shaped the India we live in today. It is because of their sacrifices that we now have the freedom to express our thoughts, pursue our dreams, and live with dignity.

But Republic Day is not only a day for remembering the past. It is a day to reflect on our responsibilities as young citizens of India. We must be aware of our rights and duties and work to build a society based on justice, equality, and respect. Education, kindness, and hard work are the keys to a better India.

As we march ahead, let us not forget the principles laid out in our Constitution. Let us contribute to building a nation where all people—irrespective of their background—can live in peace and harmony.

On this Republic Day, let’s renew our commitment to our nation and to the values that make it great.

Jai Hind!

#RepublicDay, #IndianRepublicDay, #RepublicDay2025, #IndiaConstitution, #BRAmbedkar, #FreedomFighters, #JaiHind, #IndiaIndependence, #26January, #RepublicDaySpeech, #IndianHistory, #Patriotism, #IndiaPride, #Democracy, #IndianCitizenship, #NationalUnity, #IndianCulture, #IndiaFuture, #YouthOfIndia, #IndianLeaders, #ConstitutionOfIndia, #IndianRepublic, #IndianFlag, #PrideOfIndia, #IndianTradition, #RepublicDayParade, #IndependenceMovement

Share:

ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಎಲ್ಲರ ಗಮನ ಸೆಳೆಯುತ್ತಿರುವ ವಿಷಯ ಏನು ಗೊತ್ತಾ?

ಉತ್ತರ ಪ್ರದೇಶದ ಪ್ರಯಾಗರಾಜದಲ್ಲಿ 144 ವರ್ಷಕ್ಕೆ ಒಮ್ಮೆ ನಡೆಯುವ ಪೂರ್ಣ ಮಹಾ ಕುಂಭದ ಮಹೋತ್ಸವ ಜನವರಿ 13 ರಿಂದ ಭವ್ಯವಾಗಿ ಆರಂಭವಾಯಿತು. ಕೋಟ್ಯಾಂತರ ಸಾಧು ಸಂತರು ಭಕ್ತರು ಪವಿತ್ರ ಶಾಹಿ ಸ್ಥಾನದಲ್ಲಿ ಮಿಂದೆದಿದ್ದರೆ. ಭಾರತೀಯ ಪರಂಪರೆಯ ಮಹಾ ಸಂಗಮ ಇದು ಎಂದು ಹೇಳಲಾಗುತ್ತಿದೆ. ಆದರೆ, ಈ ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಎಲ್ಲರ ಗಮನ ಸೆಳೆಯುತ್ತಿರುವುದು ಸಾದ್ವಿ ಹರ್ಷ ರಿಚ್ಹರಿಯಾ ಎಂಬ ಮಹಿಳೆ.

ಶಾಂತ ಸ್ವಭಾವ, ಕಂಗೊಳಿಸುವ ನೇತ್ರಗಳು, ಮತ್ತು ಅವರ ಆಕರ್ಷಕ ವ್ಯಕ್ತಿತ್ವವು ಲಕ್ಷಾಂತರ ಜನರಲ್ಲಿ ಕುತೂಹಲವನ್ನು ಹುಟ್ಟಿಸಿವೆ. ಈ ಹರ್ಷ ರಿಚ್ಹರಿಯಾ ಯಾರು? ಅವರ ಕಥೆ ಏನು? ತಿಳಿಯೋಣ ಬನ್ನಿ.


ಆಧ್ಯಾತ್ಮಿಕ ಮಾರ್ಗವನ್ನು ಸ್ವೀಕರಿಸುವ ಮೊದಲು, ಹರ್ಷ ರಿಚ್ಹರಿಯಾ ಗ್ಲಾಮರ್ ಜಗತ್ತಿನಲ್ಲಿ ಬದುಕು ನಡೆಸಿದವರು. ಅವರು ನಟಿ, ನಿರೂಪಕಿ, ಮತ್ತು ಫಿಟ್ನೆಸ್ ಇನ್ಫ್ಲುಯೆನ್ಸರ್ ಆಗಿ ಖ್ಯಾತಿಯನ್ನು ಪಡೆದು, ಪ್ರಪಂಚವನ್ನು ಸುತ್ತಿ ಹಾಕಿದ್ದಾರಂತೆ.  ಹೆಸರು ಕೀರ್ತಿ ಹಣ ಎಲ್ಲವನ್ನು ಸಂಪಾದಿಸಿದ್ದ ಇವರು ಹೀಗೆ ಎಲ್ಲವನ್ನು ಬಿಟ್ಟು ಆಧ್ಯಾತ್ಮಿಕ ದತ್ತ ವಾಲಿದ್ದು ಹೇಗೆ..

ಅವರೇ ಹೇಳುವಂತೆ ಅವರ ಬದುಕಿನಲ್ಲಿ ಎಲ್ಲವೂ ಇದ್ದರೂ ಶಾಂತಿಯ ಕೊರತೆಯಿದ್ದಂತೆ. "'ನೀವು ಜೀವನದಲ್ಲಿ ಅದೆಷ್ಟೇ ಸಾಧನೆ ಮಾಡಿದರೂ—ನಟನೆ, ನಿರೂಪಣೆ, ಪ್ರವಾಸ—ಯಾವುದೂ ನಿಜವಾದ ಶಾಂತಿಯನ್ನು ನೀಡುವುದಿಲ್ಲ. ಖ್ಯಾತಿಯು ಶಾಂತಿಯನ್ನು ನೀಡುವುದಿಲ್ಲ. ಭಕ್ತಿ ನನ್ನನ್ನು ಪ್ರಾರ್ಥನೆ ಮತ್ತು ಆಧ್ಯಾತ್ಮಿಕತೆಯಲ್ಲಿ ತೊಡಗಿಸಿಕೊಂಡಂತೆ ಮಾಡಿತು.' ಎಂದು ಸಂದರ್ಶನದಲ್ಲಿ ಹೇಳಿದ್ದಾರೆ.

ಹರ್ಷ ರಿಚ್ಹರಿಯಾ ಕಳೆದ 2 ವರ್ಷಗಳಿಂದ ಸಾದ್ವಿಯಾಗಿ ಜೀವನ ನಡೆಸುತ್ತಿದ್ದಾರೆ. ಉತ್ತರಾಖಂಡದ ಆಚಾರ್ಯ ಮಹಾಮಂಡಲೇಶ್ವರರ ಶಿಷ್ಯೆಯಾಗಿ ಆಧ್ಯಾತ್ಮಿಕ ಜೀವನವನ್ನು ಪ್ರಾರಂಭಿಸಿದ್ದಾರೆ.

 ಕೆಲವರು ಅವರ ಈ ಮಾರ್ಗವನ್ನು ಹಾಡಿ ಹೊಗಳಿದರೆ, ಇನ್ನು ಕೆಲವರು ಹೊಗಳಿಸಿಕೊಳ್ಳಲು ತೋರಿಕೆಗಾಗಿ ಈ ರೀತಿ ಮಾಡು ತಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.  ಸಾಮಾಜಿಕ ಮಾಧ್ಯಮದಲ್ಲಿ ಅವರ ಗ್ಲಾಮರಸ್ ಬದುಕಿನ ಚಿತ್ರಗಳು ಮತ್ತು ವಿಡಿಯೋಗಳು  ತುಂಬಾ ವೈರಲ್ ಆಗುತ್ತಿದೆ.

ಟೀಕೆಗಳ ನಡುವೆಯೂ, ಹರ್ಷ ಅವರ ನಂಬಿಕೆ ಮತ್ತು ಆಧ್ಯಾತ್ಮಿಕ ಪಥದಲ್ಲಿ ಅವರು ಶ್ರದ್ಧೆಯಿಂದ ಮುಂದುವರಿಯುತ್ತಿದ್ದಾರೆ. ಯಾರು ಏನೇ ಮಾಡಿದರು ಒಂದಿಷ್ಟು ಜನ ಹೊಗಳುವವರು ಒಂದಿಷ್ಟು ಜನ ತೇಗುಳುವವರು ಇದ್ದೇ ಇರುತ್ತಾರೆ. ಎಲ್ಲವೂ ಇದ್ದರೂ ಅದನ್ನು ತ್ಯಜಿಸಿ ಆಧ್ಯಾತ್ಮಿಕ ಮಾರ್ಗದ ಮೂಲಕ ಹೃದಯದ ಶಾಂತಿಯನ್ನು ಕಂಡುಕೊಳ್ಳಲು ಹೊರಟಿರುವ ಸಾಧ್ವಿ  ಅವರ ಕಥೆ ಹಲವಾರು ಜನರಿಗೆ ಪ್ರೇರಣೆ ಎಂದು ನೀಡುತ್ತಿದೆ.

#UttarPradeshKumbhMela2025, #PurnaMahaKumbhFestival, #PrayagrajKumbhMela, #ShahiSnan, #IndianCulturalHeritage, #KumbhMelaHighlights, #SadhviHarshaRichharia, #WomensRoleInKumbhMela, #SpiritualGatheringIndia, #KumbhMela2025, #HolyShahiSnan, #MillionsAtKumbhMela, #HarshaRichhariaStory, #WomenLeadersKumbhMela, #NorthIndiaSpiritualFest, #KumbhMelaCelebration, #IndianTraditionFestival, #KumbhMelaDevotion, #SadhusAndSaints, #SpiritualFestivalsIndia

Share:

ಕುಂಭಮೇಳ

 ಕುಂಭಮೇಳ ಭಾರತದಲ್ಲಿ ಪ್ರತಿ 12 ವರ್ಷಕ್ಕೊಮ್ಮೆ ನಡೆಯುವ ವಿಶ್ವದ ಅತಿದೊಡ್ಡ ಧಾರ್ಮಿಕ ಸಮಾರಂಭಗಳಲ್ಲಿ ಒಂದಾಗಿದೆ. ಇದು ಹಿಂದೂ ಧರ್ಮದ ಪ್ರಮುಖ ಆಚರಣೆಯಾಗಿ ಪರಿಗಣಿಸಲಾಗುತ್ತದೆ. ಕುಂಭಮೇಳವು ಅಲಹಾಬಾದ್ (ಪ್ರಯಾಗರಾಜ್), ಹರಿದ್ವಾರ, ಉಜ್ಜಯಿನಿ, ಮತ್ತು ನಾಶಿಕ್ ಎಂಬ ನಾಲ್ಕು ಪವಿತ್ರ ತೀರ್ಥಕ್ಷೇತ್ರಗಳಲ್ಲಿ ಆಯೋಜಿಸಲಾಗುತ್ತದೆ. ಈ ಸ್ಥಳಗಳಲ್ಲಿ ಗಂಗಾ, ಯಮುನಾ, ಕೇವಲ ಶರಸ್ವತಿ (ಪ್ರಯಾಗರಾಜ್‌ನಲ್ಲಿ), ಗೋದಾವರಿ (ನಾಶಿಕ್‌ನಲ್ಲಿ) ಮತ್ತು ಕ್ಷಿಪ್ರಾ (ಉಜ್ಜಯಿನಿಯಲ್ಲಿ) ನದಿಗಳ ಪವಿತ್ರತೆಯು ಪ್ರಮುಖ ಪಾತ್ರವಹಿಸುತ್ತದೆ.

ಕುಂಭಮೇಳದ ಹಿನ್ನೆಲೆಯು ಪುರಾಣಗಳಲ್ಲಿ ಉಲ್ಲೇಖವಾಗಿದ್ದು, ಅಮೃತಮಥನದ ಘಟನೆಯಿಂದ ಪ್ರೇರಿತವಾಗಿದೆ. ದೇವತೆಗಳು ಮತ್ತು ರಾಕ್ಷಸರು ಪವಿತ್ರ ಅಮೃತವನ್ನು ಹಂಚಿಕೊಳ್ಳುವಾಗ, ಅದರ ಕೆಲವು ಹನಿಗಳು ಈ ನಾಲ್ಕು ಪವಿತ್ರ ಸ್ಥಳಗಳಿಗೆ ಬೀಳುತ್ತವೆ ಎಂಬುದು ಕಥೆ. ಆದ್ದರಿಂದ, ಈ ಸ್ಥಳಗಳಲ್ಲಿ ಸ್ನಾನ ಮಾಡುವುದು ಪಾಪಕ್ಷಯಕರ ಮತ್ತು ಪುಣ್ಯಪ್ರಾಪ್ತಿಗೆ ಕಾರಣವೆಂದು ನಂಬಲಾಗುತ್ತದೆ.

ಕುಂಭಮೇಳವು ಎರಡು ಪ್ರಮುಖ ಭಾಗಗಳಾದ ಅರ್ಧಕುಂಭ (6 ವರ್ಷಕ್ಕೊಮ್ಮೆ) ಮತ್ತು ಪುರ್ಣಕುಂಭ (12 ವರ್ಷಕ್ಕೊಮ್ಮೆ) ಆಗಿ ಆಯೋಜಿಸಲಾಗುತ್ತದೆ. ಅತಿವಿಶೇಷ ಸಂದರ್ಭಗಳಲ್ಲಿ, ಮಹಾಕುಂಭಮೇಳ ಕೂಡ ನಡೆಯುತ್ತದೆ, ಅದು 144 ವರ್ಷಗಳಿಗೊಮ್ಮೆ ಮಾತ್ರ ನಡೆಯುತ್ತದೆ.

ವೈಶಿಷ್ಟ್ಯಗಳು:

  • ಲಕ್ಷಾಂತರ ಭಕ್ತರು ಈ ಮೇಳದಲ್ಲಿ ಪಾಲ್ಗೊಳ್ಳುತ್ತಾರೆ.
  • ಶಹಿ ಸ್ನಾನ ಅಥವಾ ಪವಿತ್ರ ಸ್ನಾನ ಪ್ರಮುಖ ಆಚರಣೆಯಾಗಿದೆ.
  • ಸಾಧುಸಂತರು, ನಾಗಾಸಾಧುಗಳು, ಹಾಗೂ ವಿವಿಧ ಆಶ್ರಮಗಳ ಸದಸ್ಯರು ಈ ಮೇಳದಲ್ಲಿ ತಮ್ಮ ಆಯೋಜನೆ ಮತ್ತು ಉಪನ್ಯಾಸಗಳನ್ನು ನಡೆಸುತ್ತಾರೆ.
  • ಧಾರ್ಮಿಕ ಉಪನ್ಯಾಸಗಳು, ಯಜ್ಞಗಳು, ಹಾಗೂ ಸಂಸ್ಕೃತಿಕ ಕಾರ್ಯಕ್ರಮಗಳು ಕುಂಭಮೇಳದ ಅತ್ಯಂತ ಆಕರ್ಷಕ ಭಾಗಗಳಾಗಿವೆ.

ಕುಂಭಮೇಳವು ಧರ್ಮ ಮತ್ತು ಸಂಸ್ಕೃತಿಯ ಅದ್ಭುತ ಸಮಾವೇಶವಿರುವ ಪವಿತ್ರ ಸಮಾರಂಭವಾಗಿದೆ. ಇದು ಭಾರತದ ಧಾರ್ಮಿಕ ಪರಂಪರೆಯನ್ನು ಮತ್ತು ಭಕ್ತಿಯುಳ್ಳ ಬದುಕಿನ ಮಹತ್ವವನ್ನು ವಿಶ್ವದ ಮುಂದಿಡುತ್ತದೆ.

Share:

ರಾಷ್ಟ್ರೀಯ ಯುವ ದಿನಾಚರಣೆಯ ಭಾಷಣ

"ನಿಮ್ಮ ಬದುಕಿನ ನಿಜವಾದ ಹೀರೋ ನೀವೇ ಆಗಿರಿ"

ಇಂದು ಸ್ವಾಮಿ ವಿವೇಕಾನಂದರ ಜನ್ಮದಿನ ಇಡೀ ದೇಶದಾದ್ಯಂತ ಈ ದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಗುತ್ತದೆ. ಹೌದು ವಿವೇಕಾನಂದರೆಂದರೆ ಯುವಕರಿಗೆ ಸ್ಪೂರ್ತಿ, ಯುವಕರ ಆದರ್ಶ. ಅವರ ಸಂದೇಶಗಳು ಯುವ ಜನತೆಯಲ್ಲಿ ಇನ್ನಲ್ಲದ ಉತ್ಸಾಹ ಮತ್ತು ಶಕ್ತಿಯನ್ನು ತುಂಬುತ್ತದೆ. ಅವರ ಮಾತಷ್ಟೇ ಅಲ್ಲ ಇಡೀ ಜೀವನ, ಅವರ ವ್ಯಕ್ತಿತ್ವ ಯುವಕರಿಗೆ ಆದರ್ಶಪ್ರಾಯವಾದದ್ದು.

"ಕಬ್ಬಿಣದ ಮಾಂಸಖಂಡ, ಉಕ್ಕಿನ ನರಮಂಡಲ, ವಿದ್ಯುತ್ತಿನ ಇಚ್ಚಾಶಕ್ತಿ ಇರುವ ನೂರು ಜನ ಯುವಕರು ನನಗೆ ಬೇಕು, ಅವರಿಂದ ನಾನು ಈ ದೇಶದ ಭವಿಷ್ಯವನ್ನೇ ಬದಲಾಯಿಸಬಲ್ಲೆ" ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ಹೀಗೆ ಹೇಳುವುದರ ಮೂಲಕ ದೇಶದ ಭವಿಷ್ಯವನ್ನು ರೂಪಿಸುವಲ್ಲಿ ಯುವಶಕ್ತಿಯ ಪಾತ್ರ ಎಷ್ಟು ಮುಖ್ಯವಾದದ್ದು ಎನ್ನುವುದನ್ನು ಒತ್ತಿ ಹೇಳಿದ್ದಾರೆ. ಜೊತೆಗೆ ದೇಶದ ಮುಂದಿನ ಸಂಪತ್ತಾಗಿರುವ ಯುವಕರು ಯಾವ ರೀತಿ ಇರಬೇಕು ಎಂಬ ನಿದರ್ಶನವನ್ನು ನೀಡಿದ್ದಾರೆ. ದೈಹಿಕವಾಗಿ ಮಾನಸಿಕವಾಗಿ ಸದೃಢವಾದ ಯುವ ಸಮೂಹದಿಂದ ದೇಶದ ಭವಿಷ್ಯವನ್ನು ರೂಪಿಸಬಹುದು ಎಂದು ಹೇಳಿದ್ದಾರೆ.

Watch This video 

ವಿವೇಕಾನಂದರ ದೊಡ್ಡ ಕನಸೆಂದರೆ ಅದು ‘ಸಶಕ್ತ ಭಾರತ‘ದ ನಿರ್ಮಾಣ. ಸಶಕ್ತತೆ ಎಲ್ಲ ಆಯಾಮಗಳಲ್ಲಿಯೂ ಇರಬೇಕೆಂಬುದು ಅವರ ಆಶಯವಾಗಿತ್ತು. ಇದೇ ಆಶಯದಿಂದಲೇ ಅವರು ಹೇಳಿದ ಒಂದು ಮಾತು ಕೆಲವರ ಕೆಂಗಣ್ಣಿಗೂ ಗುರಿಯಾಗಿತ್ತು. ಅದ್ಯಾವುದೆಂದರೆ ‘ಮನೆಯಲ್ಲಿ ಕೂತು ಗೀತೆ ಓದುವುದಕ್ಕಿಂತ, ಮೈದಾನದಲ್ಲಿ ಫುಟ್ಬಾಲ್ ಆಡುವುದು ಹೆಚ್ಚು ಅಗತ್ಯ’ ಎಂಬ ಸಂದೇಶ. ಈ ಮಾತು ಮೇಲ್ನೋಟಕ್ಕೆ ಕಟುವಾಗಿ ಎನಿಸಿದರೂ ಇದು ಸತ್ಯಕ್ಕೆ ಹತ್ತಿರವಾದ ಮಾತಾಗಿದೆ. ಸಾಧನೆಗೆ ಬೇಕಾದ ದೃಢವಾದ ಶರೀರವೇ ಇಲ್ಲದ ಮತ್ತು ಪ್ರಭಲವಾದ ಇಚ್ಛಾಶಕ್ತಿ ಇಲ್ಲದೇ ಕ್ಷಣ ಕ್ಷಣಕ್ಕೂ ಗುರಿಯಿಂದ ವಿಮುಖರಾಗುವ ವ್ಯಕ್ತಿಗಳಿಂದ ಯಾವ ಸಾಧನೆಯನ್ನು ಮಾಡಲು ಸಾಧ್ಯವಿಲ್ಲ.

ಯುವ ಜನತೆಯಲ್ಲಿರುವ ಅಪಾರ ಶಕ್ತಿಯನ್ನು ಸಮಾಜ ಕಲ್ಯಾಣ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಬಳಸುವುದು ಅತ್ಯಗತ್ಯ. ಇತಿಹಾಸವನ್ನು ಗಮನಿಸಿದಾಗ ದೇಶದ ಮೇಲೆ ಯಾವಾಗ ಬಿಕ್ಕಟ್ಟಿನ ಮೋಡಗಳು ಆವರಿಸಿಕೊಂಡಿದ್ದವೋ ಆ ಸಮಯದಲ್ಲಿ ಅದನ್ನು ಹೋಗಲಾಡಿಸಲು ಯುವಶಕ್ತಿ ವಹಿಸಿದ ಪಾತ್ರ ಬಹುಮುಖ್ಯವಾದದ್ದು. ದೇಶದ ಸ್ವಾತಂತ್ರ್ಯ ಸಂಗ್ರಾಮವೇ ಅದಕ್ಕೆ ಸಾಕ್ಷಿ. ಯುವಕರೇ ದೇಶದ ಭವಿಷ್ಯ, ಯುವಕರೇ ದೇಶದ ಸಂಪತ್ತು. ಆದರೆ ಇಂದಿನ ಬಹುಪಾಲು ಯುವ ಜನತೆ ಬರೀ ಕನಸುಗಳ ಲೋಕದಲ್ಲಿ ಮುಳುಗಿದೆ. ಅವರಲ್ಲಿ ಎಂತಹ ಕನಸುಗಳನ್ನು ಕಟ್ಟಿಕೊಳ್ಳಬೇಕು ಎಂಬ ಪರಿವೆ ಸಹ ಇಲ್ಲದಾಗಿದೆ. ಯಾರ್ಯಾರನ್ನೋ ತಮ್ಮ ಹೀರೋ ಎಂದುಕೊಂಡು ಒಡಾಡುತ್ತಿರುತ್ತಾರೆ. ತಮ್ಮ ಹಾಗೂ ನಾಡಿನ ಏಳ್ಗೆಗಾಗಿ ಸಮಯವನ್ನು ಬಳಸದೇ ಯುವ ಶಕ್ತಿ ವ್ಯಯವಾಗುತ್ತಿದೆ.

ಸ್ವಾಮಿ ವಿವೇಕಾನಂದರು "ಏಳಿ, ಎದ್ದೇಳಿ, ಗುರಿ ಮುಟ್ಟುವವರೆಗೂ ನಿಲ್ಲದಿರಿ" ಎಂಬ ಸಂದೇಶ ಬಹಳ ಪ್ರಖ್ಯಾತಿ ಪಡೆದಿದೆ. ಇಲ್ಲಿ ಅವರು ನಿದ್ರೆಯಲ್ಲಿ ಮಲಗಿದವರನ್ನು ಏಳಿ ಎಂದು ಹೇಳುತ್ತಿಲ್ಲ. ಹಾಗೆ ಸುಮ್ಮನೆ ಕುಳಿತವರನ್ನು ಏಳಿ ಎಂದು ಹೇಳಿಲ್ಲ. ನಿದ್ರೆಯಿಂದ ಎದ್ದು ಓಡಾಡುತ್ತಿರುವವರಿಗೆ ಹೇಳಿದ ಮಾತಿದು. ಯಾವುದೋ ಭ್ರಮೆಯ ಲೋಕದಲ್ಲಿ ಇರುವುದನ್ನು ಬಿಟ್ಟು, ನಿಮ್ಮ ಉದ್ದಾರಕ್ಕಾಗಿ ನೀವೇ ಕಂಕಣ ಬದ್ಧರಾಗಿರಿ. ಮುಂದೆ ಗುರಿಯನ್ನು ಇಟ್ಟುಕೊಳ್ಳಿ ಮತ್ತು ಆ ಗುರಿಯನ್ನು ಸಾಧಿಸಲು ಸತತ ಪ್ರಯತ್ನವನ್ನು ಮಾಡಿ. ಆ ಗುರಿಯನ್ನು ಮುಟ್ಟುವವರೆಗೆ ವಿರಮಿಸದಿರಿ, ನಿಲ್ಲದಿರಿ ಎಂಬುದಾಗಿ ಹೇಳಿದ್ದಾರೆ. ಯಾವುದೇ ಸ್ಪಷ್ಟ ಗುರಿಯನ್ನು ಹೊಂದದೆ ಯಾವುದೇ ಕಠಿಣ ಪರಿಶ್ರಮವನ್ನು ಪಡೆದೇ ಯಾವುದೋ ಒಂದು ಕಾಲ ಬರುತ್ತದೆ, ಯಾರೋ ನಮ್ಮನ್ನು ಉದ್ಧಾರ ಮಾಡುತ್ತಾರೆ ಎಂದು ಜೀವನವನ್ನು ದೂಡುತ್ತಿದ್ದವರಿಗೆ ಎಚ್ಚರವಾಗಿರಿ, ಏಳಿ, ಏದ್ದೇಳಿ ಎಂಬ ಸಂದೇಶವನ್ನು ನೀಡಿದ್ದಾರೆ. ಇಂದಿನ ಯುವ ಜನಾಂಗ ಈ ಸಂದೇಶವನ್ನು ಮತ್ತೆ ಮತ್ತೆ ಮನನ ಮಾಡಿಕೊಳ್ಳಬೇಕು.

ಯುವಜನರಿಗೆ ವಿವೇಕಾನಂದರು ಆದರ್ಶಪ್ರಾಯರಷ್ಟೇ ಅಲ್ಲ, ಅವರ ವ್ಯಕ್ತಿತ್ವ ಎಲ್ಲ ಯುವಕ–ಯುವತಿಯರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ. ಇದಕ್ಕೆ ಅನೇಕ ಕಾರಣಗಳಿವೆ. ಮುಖ್ಯವಾಗಿ ಅವರು ಸಾರಿದ್ದು ಶಕ್ತಿಯ ಸಂದೇಶವನ್ನು. ಅವರ ಬೋಧನೆಗಳಲ್ಲಿ ನಾವು ಮತ್ತೆ ಮತ್ತೆ ಕಾಣುವ ಸಂದೇಶ: 'ಶಕ್ತಿಯೇ ಜೀವನ, ದೌರ್ಬಲ್ಯವೇ ಮರಣ'. ನನ್ನಿಂದ ಇದು ಸಾಧ್ಯ we can ಎನ್ನುವ ಮನೋಭಾವ ಯುವಕರಲ್ಲಿ ಬರಬೇಕು.

ಸ್ವಾಮಿ ವಿವೇಕಾನಂದರ ಮಾತಷ್ಟೇ ಅಲ್ಲ ಅವರ ಜೀವನವೂ ಯುವಕರಿಗೆ ಆದರ್ಶಪ್ರಾಯವಾದದ್ದು. ಅವರು ಪ್ರಶ್ನಿಸದೆ ಏನನ್ನೂ ಒಪ್ಪಿಕೊಳ್ಳುತ್ತಿರಲಿಲ್ಲ. ದೇವರ ಬಗ್ಗೆಯೂ ಹಾಗೆಯೇ "ದೇವರು ಇದ್ದಾನೆಯೇ?"  ಎಂದು ಅವರು ಮೊದಲು ಎಲ್ಲ ವಿದ್ವಾಂಸರ ಬಳಿ ಚರ್ಚಿಸಿದ್ದಾರೆ. ಸರಿಯಾದ ಉತ್ತರ ಸಿಗದಿದ್ದಾಗ ನಂತರ ತಮಗೆ ಪಾಠ ಮಾಡುತ್ತಿದ್ದ ಕಾಲೇಜಿನ  ಉಪನ್ಯಾಸಕರ ಬಳಿಯೂ ಕೇಳುತ್ತಾರೆ  ಆಗ ಅವರು ದಕ್ಷಿಣೇಶ್ವರದ  ಸಂತ ಶ್ರೀ ರಾಮಕೃಷ್ಣ ಪರಮಹಂಸರಲ್ಲಿ ಕೇಳು ಎಂದು ಸೂಚಿಸುತ್ತಾರೆ.  ಅವರು ತಮ್ಮ ಗುರುಗಳಾದ ಶ್ರೀರಾಮಕೃಷ್ಣ ಪರಮಹಂಸರ ಬಳಿ ಹಲವಾರು ಬಾರಿ ಪ್ರಶ್ನಿಸಿ ಉತ್ತರ ಕಂಡುಕೊಳ್ಳುತ್ತಾರೆ. ಮತ್ತು ಅವರನ್ನು ಕೂಡ ತಮ್ಮ ಗುರುಗಳು ಎಂದು ಒಮ್ಮೆಲೇ ಒಪ್ಪಿಕೊಳ್ಳುವುದಿಲ್ಲ ಅವರನ್ನು ಕೂಡ ಹಲವಾರು ಬಾರಿ ಪರೀಕ್ಷಿಸಿ, ನಂತರ ಗುರುಗಳೆಂದು ಸ್ವೀಕರಿಸುತ್ತಾರೆ. ಹೀಗೆ ಎಲ್ಲವನ್ನೂ ತಾರ್ಕಿಕವಾಗಿ ನೋಡುವುದು ಅವರ ಗುಣ. ಇಲ್ಲಿ ಅವರು ತಮಗೆ ಬೇಕಾದುದರ ಕುರಿತು ನಿರಂತರವಾದ ಅನ್ವೇಷಣೆಯನ್ನು ನಡೆಸಿದರ ರೀತಿ ಹಾಗೂ ಯಾರೋ ಹೇಳಿದರು ಎಂಬ ಮಾತ್ರಕ್ಕೆ ಒಪ್ಪಿಕೊಳ್ಳದೆ ತಮಗೆ ಸರಿ ಅನ್ನಿಸುವವರಿಗೆ ಪ್ರಶ್ನೆಯನ್ನು ಮಾಡುತ್ತಾ ಉತ್ತರವನ್ನು ಕಂಡುಕೊಳ್ಳುವ ಬಗೆಯನ್ನು ಇಂದಿನ ಯುವಕರು ರೂಢಿಸಿಕೊಳ್ಳಬೇಕು. ಜಾತಿ, ಧರ್ಮ, ನಂಬಿಕೆ, ಆಚರಣೆಯ ವಿಚಾರದಲ್ಲಿಯೂ ಕೂಡ ಇದೇ ರೀತಿ ತಾರ್ಕಿಕವಾಗಿ ನೋಡುವ ಗುಣ ನಮ್ಮ ಯುವಜನತೆಯಲ್ಲಿ ಬೆಳೆಯಬೇಕು. ಧರ್ಮದ ನಿಜವಾದ ಸಾರವು ಸಾಮಾನ್ಯರಿಗೆ ಒಳಿತುಮಾಡುವುದು ಮತ್ತು ಸಹಿಷ್ಣುತೆ ಎಂದು ಅವರು ದೃಢವಾಗಿ ನಂಬಿದ್ದರು. ಧರ್ಮವು ಮೂಢನಂಬಿಕೆಗಳು ಮತ್ತು ಕಠೋರತೆಗಳಿಗಿಂತ ಮೇಲಿರಬೇಕು ಎಂದು ವಿವೇಕಾನಂದರು ಹೇಳುತ್ತಿದ್ದರು. ಇಂದಿನ ಯುವಜನತೆ ಈ ಧರ್ಮ ಮತ್ತು ಕೋಮುಗಳ ನಡುವಿನ ದ್ವೇಷದ ಅಮಲನ್ನು ಏರಿಸಿಕೊಳ್ಳಬಾರದು. ಸ್ವಾಮಿ ವಿವೇಕಾನಂದರು ಎಲ್ಲರೂ ಒಂದೇ, ಎಲ್ಲ ಧರ್ಮಗಳ ಸಾರವು ಒಂದೇ. ನದಿಗಳು ಹರಿಯುವ ದಾರಿ ಬೇರೆ ಬೇರೆಯಾದರೂ ಅದು ಕೊನೆಗೆ ಸೇರುವುದು ಸಮುದ್ರವನ್ನೇ ಹಾಗೆ ಧರ್ಮಗಳ ಆಚರಣೆಗಳು ಬೇರೆ ಬೇರೆಯಾದರೂ ಅದರ ಉದ್ದೇಶ ಒಂದೇ ಎಂದು ಅಮೆರಿಕಾದ ಸರ್ವಧರ್ಮ ಸಮ್ಮೇಳನದಲ್ಲಿ ನಡೆದ ಭಾಷಣದಲ್ಲಿ ಒತ್ತಿ ಹೇಳಿದ್ದಾರೆ. ಇಂತಹ ತತ್ವಗಳ ಆಧಾರದ ಮೇಲೆ ನಾವು ದೇಶವನ್ನು ಕಟ್ಟಬೇಕಾಗಿದೆ. ಯುವ ಜನತೆ ಇಂತಹ ಆದರ್ಶಗಳನ್ನು ರೂಢಿಸಿಕೊಳ್ಳಬೇಕಾಗಿದೆ.

ಯೌವ್ವನ ಅಥವಾ ಸಾಮರ್ಥ್ಯ ಎಂಬುದು ಕೇವಲ ವಯಸ್ಸಿನಿಂದ ನಿರ್ಧಾರವಾಗುವುದಿಲ್ಲ. ಪ್ರಭಲವಾದ ಇಚ್ಛಾಶಕ್ತಿ, ಆತ್ಮಸ್ಥೈರ್ಯ, ಆತ್ಮ ವಿಶ್ವಾಸ ಹೊಂದಿದವರೆಲ್ಲರೂ ಯುವ ಮನಸ್ಸುಗಳೇ ಆಗಿರುತ್ತಾರೆ. ಆದ್ದರಿಂದ ಮೊದಲು ನಮಗೆ ನಮ್ಮ ಮೇಲೆ ನಂಬಿಕೆ ಇರಬೇಕು. ಜಗತ್ತಿನ ಇತಿಹಾಸ ನಿರ್ಮಾಣವಾಗಿರುವುದು ಜಗತ್ತಿನಲ್ಲಿರುವ ಒಟ್ಟೂ ಜನಸಂಖ್ಯೆಯಿಂದಲ್ಲ ಬದಲಾಗಿ ತನ್ನ ಮೇಲೆ ತಾನು ನಂಬಿಕೆ ಇಟ್ಟಿರುವ ಕೆಲವೇ ಕೆಲವು ವ್ಯಕ್ತಿಗಳಿಂದ.
 ನಾವೆಲ್ಲರೂ ವಿವೇಕಾನಂದರ ಆದರ್ಶಗಳನ್ನು ಪಾಲಿಸುವುದರ ಮೂಲಕ  ಆತ್ಮಸ್ಥೈರ್ಯವನ್ನು ಹೊಂದೋಣ. ಅದಕ್ಕಾಗಿ ಕಠಿಣ ಪರಿಶ್ರಮವನ್ನು ಪಡೋಣ. ನಾಡು ಮತ್ತು ರಾಷ್ಟ್ರಕ್ಕೆ ನಮ್ಮದೇ ಆದ ಕೊಡುಗೆಯನ್ನು ನೀಡೋಣ. ನಮಗೆ ನಾವೇ ಹೀರೋಗಳಾಗೋಣ.

 National youth Day| Swami Vivekananda jayanti | Speech  in Kannada


Share:

ಕಪಿಲ್ ದೇವ್: ಭಾರತದ ಕ್ರಿಕೇಟ್‌ನ ದಂತಕತೆ

 

ಜನವರಿ 6, 1959 ರಂದು ಭಾರತದ ಚಂಡೀಗಢದಲ್ಲಿ ಜನಿಸಿದ ಕಪಿಲ್ ದೇವ್, ಪ್ರಪಂಚದಾದ್ಯಂತದ ಕ್ರಿಕೆಟ್ ಅಭಿಮಾನಿಗಳನ್ನು ರೋಮಾಂಚನಗೊಳಿಸುವ ಹೆಸರು. ಕ್ರಿಕೆಟ್ ಇತಿಹಾಸದಲ್ಲಿ ಶ್ರೇಷ್ಠ ಆಲ್‌ರೌಂಡರ್‌ಗಳಲ್ಲಿ ಒಬ್ಬರೆಂದು ವ್ಯಾಪಕವಾಗಿ ಪರಿಗಣಿಸಲ್ಪಟ್ಟಿರುವ ಕಪಿಲ್ ದೇವ್ ಭಾರತೀಯ ಕ್ರೀಡೆಯ ನಿಜವಾದ ಐಕಾನ್. ಭಾರತೀಯ ಕ್ರಿಕೆಟ್‌ಗೆ ಆಟಗಾರರಾಗಿ ಮತ್ತು ನಾಯಕರಾಗಿ ಅವರ ಕೊಡುಗೆಗಳು ಅಳಿಸಲಾಗದ ಛಾಪು ಮೂಡಿಸಿವೆ.

ಆರಂಭಿಕ ಜೀವನ ಮತ್ತು ಕ್ರಿಕೆಟ್ ಜರ್ನಿ

"ಹರಿಯಾಣ ಚಂಡಮಾರುತ" ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಕಪಿಲ್ ದೇವ್ ನಿಖಾಂಜ್ ಚಿಕ್ಕ ವಯಸ್ಸಿನಲ್ಲೇ ಕ್ರಿಕೆಟ್ ಆಡಲು ಪ್ರಾರಂಭಿಸಿದರು. ಸಹಜ ಪ್ರತಿಭೆಗೆ ಹೆಸರುವಾಸಿಯಾದ ಅವರು, ಪಾಕಿಸ್ತಾನದ ವಿರುದ್ಧ 1978 ರಲ್ಲಿ ಆಡುವ ಮೂಲಕ ತಮ್ಮ ಅಂತರಾಷ್ಟ್ರೀಯ ಕ್ರಿಕೇಟ್‌ಗೆ ಪಾದಾರ್ಪಣೆ ಮಾಡಿದರು. ಅವರ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿ, ಅವರ ವೇಗದ ಬೌಲಿಂಗ್ ಕೌಶಲ್ಯಗಳು ಅವರನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಕಣದಲ್ಲಿ ಅಸಾಧಾರಣ ಆಟಗಾರನನ್ನಾಗಿ ಮಾಡಿತು.

1983 ರ ವಿಶ್ವಕಪ್ ವಿಜಯೋತ್ಸವ

1983 ರಲ್ಲಿ ಭಾರತವನ್ನು ತನ್ನ ಮೊದಲ ಕ್ರಿಕೆಟ್ ವಿಶ್ವಕಪ್ ವಿಜಯದತ್ತ ಮುನ್ನಡೆಸಿದ್ದಕ್ಕಾಗಿ ಕಪಿಲ್ ದೇವ್‌ರವರನ್ನು ನೆನಪಿಸಿಕೊಳ್ಳುತ್ತಾರೆ. ತಂಡದ ನಾಯಕರಾಗಿ, ಅವರು ಲಾರ್ಡ್ಸ್‌ನಲ್ಲಿ ನಡೆದ ಫೈನಲ್‌ನಲ್ಲಿ ಬಲಿಷ್ಠ ವೆಸ್ಟ್ ಇಂಡೀಸ್ ಅನ್ನು ಸೋಲಿಸಲು ಅಷ್ಟೇನು ಬಲಿಷ್ಠರಲ್ಲದ ತಮ್ಮ ಗುಂಪಿಗೆ ಸ್ಫೂರ್ತಿ ನೀಡಿದರು. ಪಂದ್ಯಾವಳಿಯ ಸಮಯದಲ್ಲಿ ಜಿಂಬಾಬ್ವೆ ವಿರುದ್ಧ 175 ಅವರ ಅವಿಸ್ಮರಣೀಯ ಇನ್ನಿಂಗ್ಸ್, ಭಾರತವು ಹೆಣಗಾಡುತ್ತಿರುವ ಸಮಯದಲ್ಲಿ, ಸಾರ್ವಕಾಲಿಕ ಶ್ರೇಷ್ಠ ODI ನಾಕ್‌ಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಈ ಐತಿಹಾಸಿಕ ಗೆಲುವು ಭಾರತೀಯ ಕ್ರಿಕೆಟ್‌ನ ಭೂದೃಶ್ಯವನ್ನು ಬದಲಾಯಿಸಿದ್ದು ಮಾತ್ರವಲ್ಲದೆ ದೇಶದಲ್ಲಿ ಕ್ರಿಕೆಟ್ ಕ್ರಾಂತಿಯನ್ನು ಉಂಟುಮಾಡಿದೆ.

ವೃತ್ತಿಜೀವನದ ಮುಖ್ಯಾಂಶಗಳು

- ಬ್ಯಾಟಿಂಗ್: ಕಪಿಲ್ ದೇವ್ ಟೆಸ್ಟ್ ಕ್ರಿಕೆಟ್‌ನಲ್ಲಿ 5,000 ಕ್ಕೂ ಹೆಚ್ಚು ರನ್ ಗಳಿಸಿದರು ಮತ್ತು  ODIಗಳಲ್ಲಿ 3,783 ರನ್, ನಿರ್ಣಾಯಕ ಸಂದರ್ಭಗಳಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್‌ನಿಂದ ಭಾರತವನ್ನು ಆಗಾಗ್ಗೆ ರಕ್ಷಿಸಿದರು.

- ಬೌಲಿಂಗ್: ಭಯಂಕರ ವೇಗದ ಬೌಲರ್, ಅವರು 434 ಟೆಸ್ಟ್ ವಿಕೆಟ್‌ಗಳನ್ನು ಪಡೆದರು, ಅವರು ನಿವೃತ್ತಿಯ ಸಮಯದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು. 4,000 ಟೆಸ್ಟ್ ರನ್‌ಗಳು ಮತ್ತು 400 ಟೆಸ್ಟ್ ವಿಕೆಟ್‌ಗಳ ಡಬಲ್ ಅನ್ನು ಸಾಧಿಸಿದ ಮೊದಲ ಆಟಗಾರ.

- ಆಲ್ ರೌಂಡರ್ ಶ್ರೇಷ್ಠತೆ: ಕಪಿಲ್ ದೇವ್ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 400 ಕ್ಕೂ ಹೆಚ್ಚು ವಿಕೆಟ್‌ಗಳನ್ನು ಪಡೆದ ಮತ್ತು 5,000 ಕ್ಕೂ ಹೆಚ್ಚು ರನ್ ಗಳಿಸಿದ ಇತಿಹಾಸದಲ್ಲಿ ಏಕೈಕ ಕ್ರಿಕೆಟಿಗರಾಗಿ ಉಳಿದಿದ್ದಾರೆ, ಸಾರ್ವಕಾಲಿಕ ಶ್ರೇಷ್ಠ ಆಲ್‌ರೌಂಡರ್‌ಗಳಲ್ಲಿ ಒಬ್ಬರಾಗಿ ತಮ್ಮ ಸ್ಥಾನವನ್ನು ಭದ್ರಪಡಿಸಿದ್ದಾರೆ.

ಕಪಿಲ್ ದೇವ್ ಬರೆದ ಪುಸ್ತಕಗಳು

ಕಪಿಲ್ ದೇವ್ ಕ್ರಿಕೆಟ್ ದಂತಕಥೆ ಮಾತ್ರವಲ್ಲದೆ ಒಬ್ಬ ನಿಪುಣ ಲೇಖಕ ಕೂಡ. ಅವರು ತಮ್ಮ ಜೀವನ, ಕ್ರಿಕೆಟ್‌ ಮತ್ತು ನಾಯಕತ್ವದ ಬಗ್ಗೆ ಒಳನೋಟಗಳನ್ನು ನೀಡುವ ಕೆಳಗಿನ ಪುಸ್ತಕಗಳನ್ನು ಬರೆದಿದ್ದಾರೆ:

1. "By God's Decree" (1985):

 ಇದು ಕಪಿಲ್ ದೇವ್ ಅವರ ಆತ್ಮಚರಿತ್ರೆಯಾಗಿದ್ದು, ಇದರಲ್ಲಿ ಅವರು ಚಿಕ್ಕ-ಪಟ್ಟಣದ ಹುಡುಗನಿಂದ ಭಾರತವನ್ನು ವಿಶ್ವಕಪ್ ವೈಭವಕ್ಕೆ ಕರೆದೊಯ್ದ ನಾಯಕನವರೆಗಿನ ಪ್ರಯಾಣವನ್ನು ವಿವರಿಸುತ್ತಾರೆ. ಪುಸ್ತಕವು ಅವರ ಕ್ರಿಕೆಟ್ ವೃತ್ತಿಜೀವನ ಮತ್ತು ವೈಯಕ್ತಿಕ ಹೋರಾಟಗಳನ್ನು ಸೆರೆಹಿಡಿಯುತ್ತದೆ.


2. "ಕ್ರಿಕೆಟ್ ಮೈ ಸ್ಟೈಲ್" (1987):

 ಈ ಪುಸ್ತಕದಲ್ಲಿ, ಕಪಿಲ್ ಅವರು ಕ್ರಿಕೆಟ್ ಬಗ್ಗೆ ತಮ್ಮ ದೃಷ್ಟಿಕೋನವನ್ನು ಹಂಚಿಕೊಂಡಿದ್ದಾರೆ, ಮಹತ್ವಾಕಾಂಕ್ಷಿ ಕ್ರಿಕೆಟಿಗರಿಗೆ ಸಲಹೆಗಳು ಮತ್ತು ತಂತ್ರಗಳನ್ನು ನೀಡುತ್ತಾರೆ. ಇದು ಆಟದ ಬಗೆಗಿನ ಅವನ ವಿಧಾನ ಮತ್ತು ಅವನ ವಿಶಿಷ್ಟ ಆಟದ ಶೈಲಿಯನ್ನು ಪ್ರತಿಬಿಂಬಿಸುತ್ತದೆ.


3. "Straight from the Heart " (2004):

 ಕಪಿಲ್ ಜೀವನ, ಕ್ರಿಕೆಟ್ ಮತ್ತು ನಾಯಕತ್ವದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಆಳವಾದ ವೈಯಕ್ತಿಕ ಪುಸ್ತಕ. ಇದು ಅವರ ವೃತ್ತಿಜೀವನದ ಉಪಾಖ್ಯಾನಗಳನ್ನು ಮತ್ತು ಅವರು ಹಾದಿಯಲ್ಲಿ ಕಲಿತ ಪಾಠಗಳನ್ನು ಒಳಗೊಂಡಿದೆ.

4. "ಅಟೋಬಯೋಗ್ರಫಿ ಆಪ್‌ ಕಪಿಲ್‌ ದೇವ್‌: 

ಇದರಲ್ಲಿ ಕಪಿಲ್‌ ರವರ ಜೀವನ ವೃತ್ತಾಂತವಿದೆ

 

ನಿವೃತ್ತಿಯ ನಂತರದ ಕೊಡುಗೆಗಳು

1994 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ನಂತರ, ಕಪಿಲ್ ದೇವ್ ತರಬೇತುದಾರರಾಗಿ, ವಿವರಣೆಗಾರರಾಗಿ ಮತ್ತು ನಿರ್ವಾಹಕರಾಗಿ ಆಟಕ್ಕೆ ಕೊಡುಗೆ ನೀಡುವುದನ್ನು ಮುಂದುವರೆಸಿದರು. ಅವರು ಅಲ್ಪಾವಧಿಗೆ ಭಾರತೀಯ ಕ್ರಿಕೆಟ್ ತಂಡದ ತರಬೇತುದಾರರಾಗಿ ಸೇವೆ ಸಲ್ಲಿಸಿದರು ಮತ್ತು ಯುವ ಪ್ರತಿಭೆಗಳನ್ನು ಪೋಷಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಪ್ರಶಸ್ತಿಗಳು ಮತ್ತು ಗೌರವಗಳು

ಕಪಿಲ್ ದೇವ್ ಅವರ ಸಾಧನೆಗಳನ್ನು ಹಲವಾರು ಪ್ರಶಸ್ತಿಗಳೊಂದಿಗೆ ಗುರುತಿಸಲಾಗಿದೆ, ಅವುಗಳೆಂದರೆ:

- ಪದ್ಮಶ್ರೀ (1982): ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿ.
- ಪದ್ಮಭೂಷಣ (1991): ಭಾರತದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿ.
- ವಿಸ್ಡನ್ ಶತಮಾನದ ಭಾರತೀಯ ಕ್ರಿಕೆಟಿಗ (2002): ಭಾರತೀಯ ಕ್ರಿಕೆಟ್‌ಗೆ ಅವರ ಅತ್ಯುತ್ತಮ ಕೊಡುಗೆಗಾಗಿ ಗೌರವಿಸಲಾಗಿದೆ.

ಕೊನೆ ಮಾತುಗಳು

ಕಪಿಲ್ ದೇವ್ ಅವರ ನಾಯಕತ್ವ, ಅಥ್ಲೆಟಿಕ್ಸ್ ಮತ್ತು ಕ್ರೀಡಾ ಮನೋಭಾವವು ತಲೆಮಾರುಗಳ ಕ್ರಿಕೆಟಿಗರು ಮತ್ತು ಅಭಿಮಾನಿಗಳಿಗೆ ಸ್ಫೂರ್ತಿ ನೀಡಿದೆ. ಆಟಕ್ಕೆ ಅವರ ನಿರ್ಭೀತ ವಿಧಾನ ಮತ್ತು ಕ್ರಿಕೆಟ್‌ನ ಎಲ್ಲಾ ಅಂಶಗಳಲ್ಲಿ ಮಿಂಚುವ ಅವರ ಸಾಮರ್ಥ್ಯವು ಅವರನ್ನು ಕಾಲಾತೀತ ದಂತಕಥೆಯನ್ನಾಗಿ ಮಾಡುತ್ತದೆ. ಅವರು ಕೇವಲ ಕ್ರಿಕೆಟಿಗರಾಗಿರದೆ ಪ್ರಪಂಚದಾದ್ಯಂತದ ಮಹತ್ವಾಕಾಂಕ್ಷಿ ಕ್ರೀಡಾಪಟುಗಳಿಗೆ ಸ್ಥಿತಿಸ್ಥಾಪಕತ್ವ ಮತ್ತು ನಿರ್ಣಯದ ಸಂಕೇತವಾಗಿದೆ.

ಅವರ ಪುಸ್ತಕಗಳು ಮತ್ತು ಕ್ರಿಕೆಟ್ ಮೈದಾನದಲ್ಲಿ ಅವರ ಸ್ಮಾರಕ ಸಾಧನೆಗಳ ಮೂಲಕ, ಕಪಿಲ್ ದೇವ್ ಅವರ ಪರಂಪರೆಯು ಪ್ರಕಾಶಮಾನವಾಗಿ ಹೊಳೆಯುತ್ತಲೇ ಇದೆ, ಲಕ್ಷಾಂತರ ಜನರು ದೊಡ್ಡ ಕನಸುಗಳನ್ನು ಕಾಣಲು ಮತ್ತು ಅವರ ಗುರಿಗಳನ್ನು ಸಾಧಿಸಲು ಶ್ರಮಿಸಲು ಪ್ರೇರೇಪಿಸುತ್ತದೆ.


Share:

ಹಣವನ್ನು ಭದ್ರವಾಗಿ ಎಲ್ಲಿ ಇಡಬೇಕು

 ಹಣವನ್ನು-- ಎಲ್ಲಿ-- ಭದ್ರವಾಗಿಡಬೇಕು ಎಂಬ ಸಮಸ್ಯೆಗೆ ಇಲ್ಲದೆ ಸರಳ ಉತ್ತರ

ಬಹಳಷ್ಟು ಓದಿದ ಬುದ್ದಿವಂತ ಹೆಂಡತಿಯೊಬ್ಬಳು ಗಂಡನಿಗೆ ಈರೀತಿ ಹೇಳುತ್ತಾಳೆ.


 "ನೀವು ನಿಮ್ಮ ಹಣವನ್ನು ಎಲ್ಲಿಟ್ಟರೆ ಭದ್ರವಾಗಿ ಇರುತ್ತದೆ ಎಂಬುದಕ್ಕೆ ಒಂದು ಒಳ್ಳೆಯ ಉಪಾಯ ಇದೆ ಹೇಳುತ್ತೇನೆ...!"

 1 . 2 . 3 . 4 . 5 . 6 . 7 . 8 . 9

ಮೇಲೆ ತಿಳಿಸಿದ ಸಂಖ್ಯೆಯಲ್ಲಿ

* ಒಂದು ಸಂಖ್ಯೆಯನ್ನು ತೆಗೆದುಕೊಳ್ಳಿ
* ಆ ಸಂಖೆಗೆ 3 ರಿಂದ ಗುಣಿಸಿ
*ಬಂದ ಉತ್ತರಕ್ಕೆ 3 ನ್ನು    ಕೂಡಿಸಿರಿ
* ಮತ್ತೊಮ್ಮೆ ಬಂದ ಉತ್ತರಕ್ಕೆ 3 ರಿಂದ ಗುಣಿಸಿ
* ಈಗ ನಿಮಗೆ ಎರಡಂಕಿ ಸಂಖೆ ಬರುತ್ತದೆ.
* ಆ ಎರಡು ಸಂಖ್ಯೆಗಳನ್ನು ಕೂಡಿಸಿ

ಈಗ ಹಣ ಎಲ್ಲಿಟ್ಟರೆ ಒಳ್ಳೆಯದೋ‼ ಅದರ ವಿವರ

1. ಸೈಟು
2. ಬಂಗಾರ
3. FD
4. shares
5. ವ್ಯಾಪಾರ
6. RD
7. PPF
8. NSC
9. ಹೆಂಡತಿ ಕೈಗೆ ಕೊಡೋದು
10. Mutual Fund
11. Company Deposit


  ನಿಮಗೇನಾದರೂ ಅನುಮಾನ    ಇದೆಯೇ............???
ನೀವು ಮತ್ತೆ ಬೇರೆ ನಂಬರ ತೆಗೆದುಕೊಂಡು ಪ್ರಯತ್ನ ಮಾಡಬಹುದು....

😍
ಹೇಗಿದೆ ಹೆಂಡತಿಯ ಗಣಿತ ಚಮತ್ಕಾರ.....

To the problem of where to keep money

A well-read and intelligent wife tells her husband this.

"I have a good idea for you to keep your money safe wherever you put it...!"

1 . 2 . 3 . 4 . 5 . 6 . 7 . 8 . 9

From the above numbers

* Take a number from above set of numbers.
* Multiply that number by 3
* Add 3 to the answer
* Multiply the answer by 3 again
* Now you will get a two-digit number.

* Add those two numbers

Now where is the best place to put the money? Details

1. Site
2. Gold
3. FD
4. Shares
5. Business
6. RD
7. PPF
8. NSC
9. Wife's hand
10. Mutual Fund
11. Company Deposit

 
Do you have any doubts............???
You can try again with a different number....

😍
How is the wife's math trick.....

Share:

ಕರ್ನಾಟಕ ಸರ್ಕಾರದ 2025ನೇ ಸಾಲಿನ ಸಾರ್ವಜನಿಕ ರಜಾ ದಿನಗಳ ಅಧಿಕೃತ ಪ್ರಕಟಣೆ.

ಕರ್ನಾಟಕ 2025ರ ಸಾರ್ವಜನಿಕ ರಜಾ ದಿನಗಳ ಪಟ್ಟಿಯನ್ನು ಪ್ರಕಟಿಸಿದೆ

ಕರ್ನಾಟಕ ಸರ್ಕಾರ 2025ನೇ ಸಾಲಿನ ಸಾರ್ವಜನಿಕ ರಜಾ ದಿನಗಳ ಪಟ್ಟಿಯನ್ನು ಪ್ರಕಟಿಸಿದೆ

ಬೆಂಗಳೂರು: ಕರ್ನಾಟಕ ಸರ್ಕಾರವು 2025ನೇ ಸಾಲಿನಲ್ಲಿ ಸರ್ಕಾರಿ ಕಚೇರಿಗಳಿಗೆ ಅನ್ವಯವಾಗುವ ಸಂಪೂರ್ಣ ರಜಾ ದಿನಗಳ ಪಟ್ಟಿಯನ್ನು ಪ್ರಕಟಿಸಿದೆ. ಈ ಅಧಿಸೂಚನೆಯ ಪ್ರಕಾರ, ಎರಡನೇ ಶನಿವಾರ, ನಾಲ್ಕನೇ ಶನಿವಾರ, ಭಾನುವಾರಗಳು ಸಾಮಾನ್ಯ ರಜೆಗಳು ಆಗಿದ್ದು, ಜೊತೆಗೆ ಹಲವಾರು ಹಬ್ಬಗಳು ಹಾಗೂ ವಿಶೇಷ ದಿನಗಳು ರಜೆಯಾಗಿ ಘೋಷಿಸಲಾಗಿದೆ.

ಸಾರ್ವತ್ರಿಕ ರಜಾ ದಿನಗಳ ಪಟ್ಟಿ

ಕ್ರಮ ದಿನಾಂಕ ವಾರ ಸಾರ್ವತ್ರಿಕ ರಜಾ ದಿನಗಳು
1 14.01.2025 ಮಂಗಳವಾರ ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ
2 26.02.2025 ಬುಧವಾರ ಮಹಾ ಶಿವರಾತ್ರಿ
3 31.03.2025 ಸೋಮವಾರ ಖುತುಬ್-ಎ-ಎ ರಂಜಾನ್
4 10.04.2025 ಗುರುವಾರ ಮಹಾವೀರ ಜಯಂತಿ
5 14.04.2025 ಸೋಮವಾರ ಡಾ. ಬಿ.ಆರ್.‌ ಅಂಬೇಡ್ಕರ್ ಜಯಂತಿ
6 18.04.2025 ಶುಕ್ರವಾರ ಗುಡ್ ಫ್ರೈಡೆ
7 30.04.2025 ಬುಧವಾರ ಬಸವ ಜಯಂತಿ, ಅಕ್ಷಯ ತೃತೀಯೆ
8 01.05.2025 ಗುರುವಾರ ಕಾರ್ಮಿಕ ದಿನಾಚರಣೆ
9 07.06.2025 ಶುಕ್ರವಾರ ಸ್ವಾತಂತ್ರ್ಯ ದಿನಾಚರಣೆ
10 15.08.2025 ಶುಕ್ರವಾರ ಸ್ವಾತಂತ್ರ್ಯ ದಿನಾಚರಣೆ
11 27.08.2025 ಬುಧವಾರ ವರಸಿದ್ಧಿ ವಿನಾಯಕ ವ್ರತ
12 05.09.2025 ಶುಕ್ರವಾರ ಈದ್‌ ಮಿಲಾದ್‌
13 01.10.2025 ಬುಧವಾರ ಮಹಾನವಮಿ, ಆಯುಧ ಪೂಜೆ, ವಿಜಯದಶಮಿ
14 02.10.2025 ಗುರುವಾರ ಗಾಂಧಿ ಜಯಂತಿ
15 07.10.2025 ಮಂಗಳವಾರ ಮಹರ್ಶಿ ವಾಲ್ಮಿಕಿ ಜಯಂತಿ
16 20.10.2025 ಶುಕ್ರವಾರ ನರಕ ಚತುರ್ದಶಿ
17 22.10.2025 ಸೋಮವಾರ ಬಲಿಪಾಡ್ಯ, ದೀಪಾವಳಿ
18 01.11.2025 ಶನಿವಾರ ಕರ್ನಾಟಕ ರಾಜ್ಯೋತ್ಸವ
18 25.12.2025 ಗುರುವಾರ ಕ್ರಿಸ್‌ಮಸ್

ಮುಖ್ಯ ಸೂಚನೆಗಳು

  • ಭಾನುವಾರ ಅಥವಾ ಎರಡನೇ ಶನಿವಾರ ಬರುವ ಹಬ್ಬಗಳು ಈ ಪಟ್ಟಿಯಲ್ಲಿ ಸೇರಿಸಲಾಗಿಲ್ಲ.
  • ಮೂಸ್ಲಿಂ ಬಾಂಧವರ ಹಬ್ಬಗಳು ನಿಗದಿತ ದಿನಾಂಕಕ್ಕೆ ಬೀಳದಿದ್ದರೆ, ಪರ್ಯಾಯ ರಜೆ ನೀಡಲಾಗುತ್ತದೆ.
  • ಕೊಡಗು ಜಿಲ್ಲೆಯ ಸ್ಥಳೀಯ ರಜೆಗಳು ಪ್ರತ್ಯೇಕವಾಗಿ ಘೋಷಿಸಲ್ಪಟ್ಟಿವೆ.
  • ಶಿಕ್ಷಣ ಇಲಾಖೆಯ ವಿಶೇಷ ರಜಾ ದಿನಗಳ ಪಟ್ಟಿಯನ್ನು ಪ್ರತ್ಯೇಕವಾಗಿ ಪ್ರಕಟಿಸಲಾಗುವುದು.
  • ಸಾಂದರ್ಭಿಕ ರಜೆಯನ್ನು ನೌಕರರು ಪೂರ್ವಾನುಮತಿಯನ್ನು ಪಡೆದು ಬಳಸಬಹುದು.

ನೋಟ್: ಈ ರಜಾ ದಿನಗಳು ಸರ್ಕಾರಿ ಕಚೇರಿಗಳಿಗೆ ಅನ್ವಯವಾಗುತ್ತವೆ. ಸಾರ್ವಜನಿಕರು ಈ ಪಟ್ಟಿಯನ್ನು ಗಮನಿಸಿ ತಮ್ಮ ಹಬ್ಬಗಳನ್ನು ಪ್ಲಾನ್ ಮಾಡಬಹುದು.

 

 

Share:

ಕರ್ನಾಟಕ ನಾಗರಿಕ ಸೇವಾ ಸಿಬ್ಬಂದಿ ಡ್ರೆಸ್ ಕೋಡ್‌

    ನೌಕರರಿಗೆ ಸಾಮಾನ್ಯವಾಗಿ ಮೊದಲಿಗೆ ಎದುರಾಗುವ ಪ್ರಶ್ನೆ ನಮಗೆ ಯಾವುದಾದರೂ ವಸ್ತ್ರ ಸಂಹಿತೆ ಇದೆಯಾ ಎಂದು, ಮೊನ್ನೆ ಯಾವುದೋ ಶಾಲೆಯಲ್ಲಿ ಚರ್ಚೆಯಾಯಿತಂತೆ, ನಮ್ಮ ಕಲೀಗ್‌ ಒಬ್ಬರು ಚೂಡಿದಾರ್‌ ಹಾಕ್ಕೊಂಡ ಬರ್ತಾರೆ, ಸೀರೆ ಧರಿಸಿಕೊಂಡ ಬರೋಕೆ ಏನಾಗಿದೆ? ಶಾಲೆಲಿ ಶಿಕ್ಷಕರಿಗೆ ಚೂಡಿದಾರ ಎಷ್ಟು ಸರಿ? ಅದಕ್ಕೆ ಚೂಡಿದಾರ್‌ ದರಿಸಿದ ಶಿಕ್ಷಕಿಯರು ತಾವು ಧರಿಸಿದ್ದು ಕೂಡಾ ಸಭ್ಯ ಉಡುಪೇ ಆಗಿದೆ, ಇದು ಕೂಡ ನಮ್ಮ ದೇಶದ ಸಂಸ್ಕೃತಿಯೇ ಅಲ್ಲವೇ ಎಂದರಂತೆ. ಈ ಮೇಲಿನ ವಿಷಯದ ಮೇಲಿನಚರ್ಚೆ ಎಂದು ಮುಗಿಯುವುದಲ್ಲ. ಅದೇನೆ ಇದ್ದರೂ ಧರಿಸುವ ಉಡುಪುಗಳು ನಮ್ಮ ಪರವಾದ ವೃತ್ತಿ ಭಾವನೆ, ಶಿಸ್ತುಬದ್ಧತೆ ಮತ್ತು ಪ್ರಾಮಾಣಿಕತೆಯನ್ನು ಪ್ರತಿಬಿಂಬಿಸುತ್ತವೆ. ಇರಲಿ ಹಾಗಾದರೆ ನಮ್ಮ ಸರಕಾರ, ಇಲಾಖೆ ವಸ್ತ್ರ ಸಂಹಿತೆ ಬಗ್ಗೆ ಏನು ಹೇಳುತ್ತೆ? ನೋಡೋಣ…

    ಕರ್ನಾಟಕ ಸರ್ಕಾರವು ತನ್ನ ನಾಗರಿಕ ಸೇವಾ ಸಿಬ್ಬಂದಿಗಳಿಗೆ ವೃತ್ತಿಪರತೆಯನ್ನು ಕಾಪಾಡುವ ನಿಟ್ಟಿನಲ್ಲಿ ವಿಶೇಷ ಡ್ರೆಸ್ ಕೋಡ್‌ ನಿಯಮಗಳನ್ನು ಜಾರಿಗೊಳಿಸಿದೆ. ಈ ನಿಯಮಗಳು ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಯ ವೃತ್ತಿ ಬೌದ್ಧಿಕತೆ, ಶಿಸ್ತು, ಮತ್ತು ಮಾನವೀಯ ಮೌಲ್ಯಗಳನ್ನು ಹೆಚ್ಚಿಸಲು ಪ್ರಮುಖ ಪಾತ್ರ ವಹಿಸುತ್ತವೆ.

    ಸರಕಾರಿ ನೌಕರರು ಕಾರ್ಯ ತತ್ಫರರಾದರೂ ತಮ್ಮ ದಿರಿಸಿನ ಬಗ್ಗೆ ಕೆಲವರು ಗಮನ ಹರಿಸುವುದಿಲ್ಲ, ಅದೊಂದು ಮಹತ್ವದ ವಿಚಾರವೆಂದು ಪರಿಗಣಿಸುವುದಿಲ್ಲ, ಅದಕ್ಕೆ ಕಾರಣ ತಮ್ಮ ಅನುಭವದ ಹಿನ್ನೆಲೆ ಇರಬಹುದು. ಆದರೆ ನಾವು ವೈಯಕ್ತಿಕ ನೆಲೆಗಟ್ಟಿನಲ್ಲಿ ನಿಂತು ಯೋಚಿಸುವುದಕ್ಕೂ, ಸಾರ್ವಜನಿಕವಲಯದಲ್ಲಿ ನಿಂತು ಯೋಚಿಸುವುದಕ್ಕೂ ಬಹಳ ಅಂತರವಿದೆ ಎಂಬುದನ್ನ ಅರ್ಥೈಸಿಕೊಳ್ಳುವುದಕ್ಕೆ ಬಹುಶಃ ಸೋಲುತ್ತಿದ್ದೇವಾ?

    ಸರ್ಕಾರಿ ಸೇವೆಗಳು ಸಾರ್ವಜನಿಕರಿಗೆ ಉದಾಹರಣೆಯಾಗಬೇಕು. ವೃತ್ತಿಪರತೆಯ ಹೊರತಾಗಿ, ನಿಲುವು, ಉಡುಪು, ನೈತಿಕ ಮೌಲ್ಯಗಳು, ಶಿಸ್ತು, ಮತ್ತು ಕರ್ತವ್ಯನಿಷ್ಠೆಗಳೇ ಒಬ್ಬ ಸರಕಾರಿ ನೌಕರನ ವೃತ್ತಿಗೆ ಬಲವನ್ನ ತುಂಬುತ್ತದೆ. ಸರ್ಕಾರದ ಆದೇಶದಲ್ಲಿ ಡ್ರೆಸ್ ಕೋಡ್‌ನ ಜಾರಿಗೆ ಸಂಬಂಧಿಸಿದಂತೆ ಹಲವು ಅಂಶಗಳನ್ನು ಎತ್ತಿಹಿಡಿಯಲಾಗಿದೆ. ಇದಕ್ಕೆ ಕುರಿತಂತೆ ಅನೇಕ ಚರ್ಚೆಗಳು ನಡೆಯುತ್ತಿದ್ದರೂ 2013 ರಲ್ಲಿ ಸರಕಾರ ಈ ಕುರಿತು ಸ್ಫಷ್ಟೀಕರಣ ನೀಡಿದೆ, ಅದರ ಪ್ರಕಾರ:

ಪುರುಷ ನೌಕರನಿಗೆ ಸಭ್ಯ ಎನಿಸುವ ಶರ್ಟ್ ಮತ್ತು ಪ್ಯಾಂಟ್, ಫೈಜಾಮ, ಖುರ್ತಾವನ್ನ ಧರಿಸಬಹುದಾಗಿದೆ.

ಇನ್ನು ಮಹಿಳಾ ನೌಕರರಿಗೆ ಸಭ್ಯವಾಗಿ ದರಿಸಿದ  ಸೀರೆ ಅಥವಾ ಚುಡಿದಾರ್-ಕುರ್ತಾವನ್ನು ಧರಿಸುವುದು ಸೂಕ್ತವಾಗಿದೆ.

    ಡ್ರೆಸ್ ಕೋಡ್‌ವು ನೈತಿಕ ಮತ್ತು ವೃತ್ತಿಪರ ಮೌಲ್ಯಗಳನ್ನು ಕಾಪಾಡುವ ಮೂಲಕ ಸಾರ್ವಜನಿಕರಿಗೆ ನಂಬಿಕೆ ಮೂಡಿಸುತ್ತದೆ. ಸರ್ಕಾರದ ಆದೇಶವನ್ನು ಸಕ್ರಿಯವಾಗಿ ಪಾಲನೆ ಮಾಡುವುದರ ಮೂಲಕ, ನಾಗರಿಕ ಸೇವಾ ಸಿಬ್ಬಂದಿ ಸಾಮಾಜಿಕವಾಗಿ ಪ್ರಭಾವಶೀಲ ವ್ಯಕ್ತಿತ್ವವನ್ನು ತೋರಿಸಬಲ್ಲರು.

    ಇಂತಹ ಡ್ರೆಸ್ ಕೋಡ್‌ಗಳು, ವೃತ್ತಿ ಬೌದ್ಧಿಕತೆ ಮತ್ತು ಶಿಸ್ತಿಗೆ ನಾಂದಿ ಹಾಡುತ್ತವೆ. ಕರ್ನಾಟಕ ಸರ್ಕಾರದ ಈ ಆದೇಶವು ಅತ್ಯಂತ ಪ್ರಾಮುಖ್ಯತೆಯನ್ನು ಹೊಂದಿದ್ದು, ಇಂತಹ ನಿಯಮಗಳು ರಾಜ್ಯದ ಆಡಳಿತ ವ್ಯವಸ್ಥೆಗೆ ದಾರಿಯೆನಿಸಿವೆ.

ನೀವು ಈ ಹೊಸ ಡ್ರೆಸ್ ಕೋಡ್ ಕುರಿತು ನಿಮ್ಮ ಅಭಿಪ್ರಾಯ? ನಿಮ್ಮ ಅಭಿಪ್ರಾಯವನ್ನು ಶೇರ್ ಮಾಡಿ!

ಸರಕಾರಿ ಆದೇಶ




Share:

ಸಂಭಾಲ್ ದೇವಾಲಯದ ರಹಸ್ಯ

Sambhal Temple: 46 ವರ್ಷಗಳ ನಂತರ ಪತ್ತೆಯಾದ ದೇವಸ್ಥಾನ! 1978ರಲ್ಲಿ ನಡೆದ ಗಲಭೆ ಎಂಥದ್ದು? ದೇಗುಲಕ್ಕೆ ಬೆಂಕಿ ಬಿದ್ದಿದ್ದು ಹೇಗೆ?
ಈ ದೇವಾಲಯದಲ್ಲಿ ಶಿವಲಿಂಗ, ಹನುಮಾನ್ ಮತ್ತು ನಂದಿ ವಿಗ್ರಹಗಳು ಕಂಡುಬಂದಿವೆ. ಇಷ್ಟು ದಿನ ಈ ದೇವಸ್ಥಾನ ಯಾಕೆ ಕಾಣೆಯಾಗಿತ್ತು ಎಂಬ ಪ್ರಶ್ನೆ ಈಗ ಉದ್ಭವವಾಗಿದ್ದು.ಅದನ್ನು ಸ್ವಾಧೀನಕ್ಕೆ ತೆಗೆದುಕೊಂಡವರು ಯಾರು? 46 ವರ್ಷಗಳ ಹಿಂದೆ ಏನಾಗಿತ್ತು, ಇನ್ನಿತರ ನೂರಾರು ಪ್ರಶ್ನೆ ಮುನ್ನೆಲೆಗೆ ಬಂದಿದೆ.

ಈ ವಿಡಿಯೋ ನೋಡಿ, ಇದಕ್ಕೆ ಸಂಬಂದಿಸಿದಂತೆ ಪ್ರತಿಕ್ರಿಯಿಸಿ


ಉತ್ತರಪ್ರದೇಶದ ಸಂಭಾಲ್‌ನಲ್ಲಿ (Sambhal Temple) 400 ವರ್ಷಗಳಷ್ಟು ಹಳೆಯದಾದ ಶಿವ ದೇವಾಲಯವು ನಿನ್ನೆ ಪತ್ತೆಯಾಗಿತ್ತು. ಸ್ಥಳೀಯ ವಿದ್ಯುತ್ ಇಲಾಖೆ ಅಧಿಕಾರಿಗಳು ವಿದ್ಯುತ್ ಕಳ್ಳತನದ ಬಗ್ಗೆ ಪರಿಶೀಲನೆ ನಡೆಸಲು ಬಂದಾಗ ಇಲ್ಲಿ ದೇವಾಲಯ ಇರೋದು (Uttar Pradesh) ಬಹಿರಂಗಗೊಂಡಿತ್ತು.

ಈ ದೇಗುಲದ ಸಮೀಪದಲ್ಲಿ ಒಂದು ಬಾವಿಯೂ ಪತ್ತೆಯಾಗಿದೆ. ಈ ಬಾವಿ ಕೂಡ ದೇಗುಲಕ್ಕೆ ಸಂಬಂಧಿಸಿದ್ದಾಗಿದ್ದು, ದೇಗುಲದ ಒಳಗೆ ಶಿವಲಿಂಗ ಮತ್ತು ಹನುಮಾನ್ ವಿಗ್ರಹವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ದೇವಸ್ಥಾನ ಪತ್ತೆಯಾದ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿದೆ. ನಂತರ ಪೊಲೀಸರು ಬುಲ್ಡೋಜರ್ ಮೂಲಕ ದೇವಸ್ಥಾನವನ್ನು ಅಕ್ರಮ ಒತ್ತುವರಿಯಿಂದ ಮುಕ್ತಗೊಳಿಸಿದರು. ಇಂದು ಭಾನುವಾರ ಬೆಳಗ್ಗೆ ದೇವಸ್ಥಾನ ತೆರೆಯಲಾಗಿದ್ದು, ಪೂಜೆ ಹಾಗೂ ಆರತಿ ನೆರವೇರಿಸಲಾಯಿತು.


ಮಾಹಿತಿ ಪ್ರಕಾರ, ಈ ದೇವಾಲಯದಲ್ಲಿ ಶಿವಲಿಂಗ, ಹನುಮಾನ್ ಮತ್ತು ನಂದಿ ವಿಗ್ರಹಗಳು ಕಂಡುಬಂದಿವೆ. ಇಷ್ಟು ದಿನ ಈ ದೇವಸ್ಥಾನ ಯಾಕೆ ಕಾಣೆಯಾಗಿತ್ತು ಎಂಬ ಪ್ರಶ್ನೆ ಈಗ ಉದ್ಭವವಾಗಿದ್ದು, ಅದನ್ನು ಸ್ವಾಧೀನಕ್ಕೆ ತೆಗೆದುಕೊಂಡವರು ಯಾರು? 46 ವರ್ಷಗಳ ಹಿಂದೆ ಏನಾಗಿತ್ತು, ನಂತರ ಈ ದೇವಾಲಯವನ್ನು ತೆರೆಯದೇ ಇದ್ದಿದ್ದು ಯಾಕೆ ಇನ್ನಿತರ ನೂರಾರು ಪ್ರಶ್ನೆ ಮುನ್ನೆಲೆಗೆ ಬಂದಿದೆ.

46 ವರ್ಷಗಳ ಹಿಂದೆ ಅಂದರೆ 1978ರಲ್ಲಿ ಏನಾಗಿತ್ತು?

46 ವರ್ಷಗಳ ಹಿಂದೆ 1978ರಲ್ಲಿ ಒಂದು ಘಟನೆ ನಡೆದಿತ್ತು. ಆ ಘಟನೆಯ ನಂತರ ಈ ದೇವಸ್ಥಾನದ ಬಾಗಿಲು ತೆರೆಯಲೇ ಇಲ್ಲ. ಆ ಸಮಯದಲ್ಲಿ ಸಂಭಾಲ್‌ನಲ್ಲಿ ಏನಾಗಿತ್ತು ಅನ್ನೋದನ್ನು ಹುಡುಕುತ್ತಾ ಹೋದಾಗ ಸಿಗುತ್ತೆ ಒಂದು ರೋಚಕೆ ಕಥೆ. ಆ ಘಟನೆ ನಡೆದ ಸಮಯದಲ್ಲಿ ಅಲ್ಲಿಂದ ದೇಗುಲದ ಅರ್ಚಕರು ಸಹಿತ ಎಲ್ಲಾ ಹಿಂದೂಗಳು ಓಡಿಹೋಗಿದ್ದರಂತೆ.

ಈ ದೇವಾಲಯವು 400 ವರ್ಷಗಳಷ್ಟು ಹಳೆಯದು ಎಂದು ಹೇಳಲಾಗಿದೆ ಎಂದು ಸಂಭಾಲ್ ಡಿಎಂ ನಿನ್ನೆ ಹೇಳಿದ್ದರು. ದೇವಾಲಯವನ್ನು ವಶಪಡಿಸಿಕೊಳ್ಳಲು ಸಿದ್ಧತೆಗಳು ನಡೆದಿದ್ದು, ಇಲ್ಲಿ ವಿದ್ಯುತ್ ಕಳ್ಳತನ ತಡೆಯದೇ ಇದ್ದಿದ್ದರೆ ದೇವಸ್ಥಾನ ಪತ್ತೆಯಾಗದೇ ಸಂಪೂರ್ಣ ಅತಿಕ್ರಮಣಕ್ಕೆ ಒಳಗಾಗುತ್ತಿತ್ತು. ದೇವಸ್ಥಾನವನ್ನು ಸ್ವಾಧೀನ ಮಾಡಲು ಸಿದ್ಧತೆ ನಡೆದಿದೆ. ಭಾರೀ ಪೊಲೀಸ್ ಬಂದೋಬಸ್ತ್‌ನಲ್ಲಿ ದೇವಾಲಯವನ್ನು ತೆರೆಯಲಾಗಿದ್ದು, ಒತ್ತುವರಿ ತೆರವಿಗೆ ಬುಲ್ಡೋಜರ್ ಕ್ರಮ ಕೈಗೊಳ್ಳಲಾಗಿದೆ.

1976 ಮತ್ತು 1978 ರಲ್ಲಿ ಸಂಭಾಲ್‌ನಲ್ಲಿ ಗಲಭೆ!

ಸದ್ಯ ಸಂಭಾಲ್‌ನ ಜನಸಂಖ್ಯೆಯಲ್ಲಿ ಸುಮಾರು 77% ಮುಸ್ಲಿಮರು. ಸಂಭಾಲ್‌ನ ಖಗ್ಗುಸರೈ ಪ್ರದೇಶದಲ್ಲಿ ಈ ಶಂಕರನ ದೇವಾಲಯ ಕಂಡುಬಂದಿದ್ದು, ಅಲ್ಲಿ ಈ ಹಿಂದೆ ಹೆಚ್ಚಿನ ಸಂಖ್ಯೆಯ ಹಿಂದೂ ಕುಟುಂಬಗಳು ಇದ್ದವು ಎಂದು ಹೇಳಲಾಗುತ್ತದೆ. 1976 ಮತ್ತು 1978 ರಲ್ಲಿ ಇಲ್ಲಿ ಎರಡು ಪ್ರಮುಖ ಗಲಭೆಗಳು ನಡೆದವು, ಆ ಗಲಭೆಯ ನಂತರ ಹಿಂದೂಗಳು ಅಲ್ಲಿಂದ ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಹೋಗಲು ಪ್ರಾರಂಭಿಸಿದರು. ನಂತರ ಅಲ್ಲಿ ಹಿಂದೂಗಳೇ ಇಲ್ಲ ಎನ್ನುವಷ್ಟು ಇತರ ಸಮುದಾಯದ ಜನರು ನೆಲೆಸಿದ್ದಾರೆ.

ದೈನಿಕ್ ಜಾಗರಣ್ ಅವರ ವರದಿಯ ಪ್ರಕಾರ 1976 ರಲ್ಲಿ ಸಂಭಾಲ್ ಜಮಾ ಮಸೀದಿಯ ಇಮಾಮ್ ಮುಹಮ್ಮದ್ ಹುಸೇನ್ ಅವರನ್ನು ಹತ್ಯೆ ಮಾಡಲಾಗಿತ್ತು. ದಿ ಪ್ರಿಂಟ್ ವೆಬ್‌ಸೈಟ್‌ನ ವರದಿಯು 55 ವರ್ಷದ ಹಿಂದೂ ನಿವಾಸಿ ಸುಶೀಲ್ ಗುಪ್ತಾ ಅವರೊಂದಿಗಿನ ಸಂಭಾಷಣೆಯನ್ನು ಉಲ್ಲೇಖಿಸಿದ್ದು, ಅವರು ಮಸೀದಿಯ ಮುಂಭಾಗದ ರಸ್ತೆಯಲ್ಲಿ ವಾಸಿಸುತ್ತಿದ್ದಾರೆ. ಸಂಭಾಲ್ ಜಾಮಾ ಮಸೀದಿಯ ಮೌಲಾನಾ ಅವರನ್ನು 1976 ರಲ್ಲಿ ಹತ್ಯೆ ಮಾಡಲಾಯಿತು ಎಂದು ಅವರು ಕೂಡ ಹೇಳಿದ್ದಾರೆ.

ಸಂಸತ್ತಿನ ದಾಖಲೆಗಳು ಮತ್ತು 1979 ರಲ್ಲಿ ಪ್ರಕಟವಾದ ಎಸ್‌ಎಲ್‌ಎಂ ಪ್ರೇಮ್‌ಚಂದ್ ಅವರ ಪುಸ್ತಕ ‘ಮಾಬ್ ವಯಲೆನ್ಸ್ ಇನ್ ಇಂಡಿಯಾ’ ಮೌಲಾನಾರನ್ನು ಹಿಂದೂ ಉದ್ರಿಕ್ತ ಗುಂಪು ಹತ್ಯೆ ಮಾಡಿದೆ ಎಂದು ಹೇಳುತ್ತದೆ. ಘಟನೆ ನಡೆದು ಸ್ವಲ್ಪ ಸಮಯದ ನಂತರ, ಮೌಲಾನಾ ಅವರ ಕುಟುಂಬವು ಯುಪಿಯ ಅಜಂಗಢ್‌ನಲ್ಲಿರುವ ಅಹಿರುಲಾಗೆ ಸ್ಥಳಾಂತರಗೊಂಡಿತು. ಇದಾದ ನಂತರ ಇಲ್ಲಿ ಗಲಭೆಗಳು ನಡೆದವು. ನಂತರ ದೇವಸ್ಥಾನಕ್ಕೆ ಬೀಗ ಹಾಕಲಾಯಿತು ಎಂದು ಪ್ರಚಲಿತದಲ್ಲಿರುವ ಕಥೆ.

ದೇವಾಲಯದ ಕಥೆ:

ಇತ್ತೀಚಿಗೆ ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಗಲಭೆಗಳ ನಂತರ ತಾನು ತನ್ನ 82 ವರ್ಷದ ಚಿಕ್ಕಪ್ಪನೊಂದಿಗೆ ಮಸೀದಿಯ ಬಗ್ಗೆ ಚರ್ಚಿಸಿದರು ಎಂದು ಗುಪ್ತಾ ಹೇಳುತ್ತಾರೆ. ‘ಚಿಕ್ಕಪ್ಪ ನೆನಪುಗಳನ್ನು ಇನ್ನಷ್ಟು ತಾಜಾಗೊಳಿಸಿದರು. ಲೋಹದ ಸರಪಳಿಯ ಕೊನೆಯಲ್ಲಿ ಜೋಡಿಸಲಾದ ಗಂಟೆಯನ್ನು ನೋಡಿದ ನೆನಪಿದೆ. ಮಸೀದಿಯ ಮುಂಭಾಗದಲ್ಲಿ ಗಾಜಿನ ಚೌಕಟ್ಟಿನ ಹಾಳೆ ಇತ್ತು ಮತ್ತು ಅದರ ಮೇಲೆ ಗಿಳಿ ಹಸಿರು ಶಾಯಿಯಲ್ಲಿ ಹರಿಹರ ದೇವಾಲಯ ಎಂದು ಬರೆಯಲಾಗಿದೆ. ಆ ಚಿಹ್ನೆ ಏನಾಯಿತು ಎಂದು ನನಗೆ ತಿಳಿದಿಲ್ಲ, ಆದರೆ ಇದಕ್ಕಿಂತ ಹೆಚ್ಚಿನ ಪುರಾವೆ ಏನು ಬೇಕು’ ಎಂದು ಗುಪ್ತಾ ಹೇಳಿದ್ದಾರೆ.

ಈಗ?

ಉತ್ತರ ಪ್ರದೇಶದ ಸಂಭಾಲ್ ಆಡಳಿತ ಮತ್ತು ಪೊಲೀಸರು ಅತಿಕ್ರಮಣ ಮಾಡಲಾಗಿದೆ ಎನ್ನಲಾದ ದೇವಸ್ಥಾನವನ್ನು ಪತ್ತೆ ಮಾಡಿದ್ದಾರೆ. ದೇವಾಲಯದಲ್ಲಿ ಶಿವ ಮತ್ತು ಹನುಮಂತನ ವಿಗ್ರಹಗಳು ಕಂಡುಬಂದಿವೆ. ನಖಾಸಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶಂಕಿತ ಅಕ್ರಮ ವಿದ್ಯುತ್ ಸಂಪರ್ಕಗಳಿಗೆ ಕಡಿವಾಣ ಹಾಕುವ ಸಲುವಾಗಿ ತೆರಳಿದ್ದ ಅಧಿಕಾರಿಗಳಿಗೆ ಈ ವಿಚಾರ ತಿಳಿದು, ಈಗ ಎಲ್ಲೆಡೆ ಸುದ್ದಿ ಹರಡುತ್ತಿದೆ. ಸದರಿ ಪ್ರದೇಶವನ್ನು ಪುನರುಜ್ಜೀವನಗೊಳಿಸುವ ಗುರಿಯನ್ನು ಇಲ್ಲಿನ ಸ್ಥಳೀಯ ಆಡಳಿತ ಹೊಂದಿದೆ. 

 

ಸಂಭಾಲ್ ಸಿಒ ಅನುಜ್ ಕುಮಾರ್ ಚೌಧರಿ ಮಾತನಾಡಿ, ಈ ಪ್ರದೇಶದಲ್ಲಿ ದೇವಸ್ಥಾನವನ್ನು ಅತಿಕ್ರಮಣ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿದೆ. "ನಾವು ಸ್ಥಳವನ್ನು ಪರಿಶೀಲಿಸಿದಾಗ, ನಾವು ಅಲ್ಲಿ ಒಂದು ದೇವಸ್ಥಾನವನ್ನು ಕಂಡುಕೊಂಡಿದ್ದೇವೆ" ಎಂದು ಅವರು ಹೇಳಿದರು.

 ಹೆಚ್ಚುವರಿ ಎಸ್‌ಪಿ ಶ್ರೀಶ್‌ಚಂದ್ರ ಮಾತನಾಡಿ, ‘ಕೆಲವರು ಮನೆ ನಿರ್ಮಿಸಿ ದೇವಸ್ಥಾನವನ್ನು ಒತ್ತುವರಿ ಮಾಡಿಕೊಂಡಿರುವುದು ಪರಿಶೀಲನೆ ವೇಳೆ ಪತ್ತೆಯಾಗಿದ್ದು, ದೇವಸ್ಥಾನವನ್ನು ಸ್ವಚ್ಛಗೊಳಿಸಲಾಗಿದ್ದು, ದೇವಸ್ಥಾನವನ್ನು ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದರು.

“ದೇವಾಲಯದಲ್ಲಿ ಶಿವ ಮತ್ತು ಹನುಮಂತನ ವಿಗ್ರಹಗಳಿವೆ. ಈ ಪ್ರದೇಶದಲ್ಲಿ ಹಿಂದೂ ಕುಟುಂಬಗಳು ವಾಸವಿದ್ದವು ಮತ್ತು ಕಾರಣಾಂತರಗಳಿಂದ ಅವರು ಈ ಪ್ರದೇಶವನ್ನು ತೊರೆದರು. ದೇವಾಲಯದ ಸಮೀಪದಲ್ಲಿಯೇ ಪುರಾತನ ಬಾವಿಯ ಬಗ್ಗೆಯೂ ಮಾಹಿತಿ ಇದೆ” ಎಂದು ಅಧಿಕಾರಿಗಳ ಮಾಹಿತಿ ಉಲ್ಲೇಖಿಸಿ ಎಎನ್‌ಐ ವರದಿ ಮಾಡಿದೆ.

ವಿಶೇಷವಾಗಿ ಮಸೀದಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚರಂಡಿಗಳ ಉದ್ದಕ್ಕೂ ಅತಿಕ್ರಮಣಗಳು ನಡೆಯುತ್ತಿರುವ ಆತಂಕಕಾರಿಯಾಗಿದೆ. ಜಿಲ್ಲಾಡಳಿತವು ಶುಕ್ರವಾರ ಚಂಡೌಸಿ ನಗರದಲ್ಲಿ ಮೀಸಲಾದ ಅತಿಕ್ರಮಣ ತೆಗೆಯುವ ಅಭಿಯಾನವನ್ನು ಪ್ರಾರಂಭಿಸಿತು ಮತ್ತು ಅದನ್ನು ಸಂಭಾಲ್‌ನ ಇತರ ಭಾಗಗಳಿಗೆ ವಿಸ್ತರಿಸುತ್ತಿದೆ.



"ಎರಡರಿಂದ ಮೂರು ತಿಂಗಳವರೆಗೆ ಅಭಿಯಾನ ಮುಂದುವರಿಯುತ್ತದೆ ಮತ್ತು ಎಲ್ಲಾ ಅತಿಕ್ರಮಣಗಳನ್ನು ತೆರವುಗೊಳಿಸಲಾಗುವುದು" ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಜೇಂದರ್ ಪೆನ್ಸಿಯಾ ಹೇಳಿದರು. 

#Sambhal Mandir | #ಸಂಭಾಲ್ ದೇವಾಲಯದ ರಹಸ್ಯ| #46 Years Hidden Shiva Temple Found

#SambhalTemple, #SambhalTempleHistory, #SambhalReligiousPlaces, #SambhalAncientTemples, #SambhalTempleArchitecture, #TouristPlacesInSambhal, #TemplesInUttarPradesh, #FamousTemplesInSambhal, #SpiritualPlacesInSambhal, #SambhalTempleSignificance

Share:

Subscribe Us

ನನ್ನ ನೆಚ್ಚಿನ ಸುದ್ಧಿ ಜಾಲಾ

Join Our Team

Labels