ಉತ್ತರ ಕನ್ನಡಕ್ಕೆ ಅಂಟಬೇಕಾದ ಕಳಂಕ ತಪ್ಪಿತು

ಉತ್ತರ ಕನ್ನಡಕ್ಕೆ ಅಂಟಬೇಕಾದ ಕಳಂಕ ತಪ್ಪಿಸಿದ  ಕುಮಟಾ ಪೊಲೀಸರು


    ಗುಣವಂತೆ : ಕತಗಾಲ ದೇವಿಮನೆ ಘಟ್ಟದಲ್ಲಿ ಅಪರಿಚಿತ ಮಹಿಳೆಯ ಶವದ ಪ್ರಕರಣ ಭೇದಿಸಿದ ಕುಮಟಾ ಪೋಲಿಸರು, ಉತ್ತರ ಕನ್ನಡ ಜಿಲ್ಲೆಗೆ ಅಂಟಬೇಕಾದ ಕಳಂಕ ತಪ್ಪಿಸಿದ್ದಾರೆ. ಒಂದು ವೇಳೆ ಸಾವಿನ ಹಿಂದೆ ಇರುವವರ ಪತ್ತೆ ಆಗದೇ ಇದ್ದಲ್ಲಿ ಉತ್ತರ ಕನ್ನಡಕ್ಕೆ  ಹಾಗೆ ದೇವಿಮನೆ ಘಟ್ಟಕ್ಕೂ  ಕಳಂಕ ಅಂಟಿರುತ್ತಿತ್ತು. ಇದನ್ನು ತಪ್ಪಿಸಿದ ಪೊಲೀಸ್ ಪಡೆ ಕರ್ತವ್ಯ  ನಿಷ್ಟೇಯ ಸತ್ಯ ಮೆರೆದಿದ್ದಾರೆ.
 
 
    ಈ ಹಿಂದೆ ಉತ್ತರ ಕನ್ನಡಲ್ಲಿ ಆದ ಕೊಲೆಗೆ ನ್ಯಾಯ ಸಿಗದ ಪ್ರಕರಣ ಇನ್ನೂ ಇದೆ. ಇದಕ್ಕೆ ಪ್ರಮುಖ ಹಾಗೂ ಮುಖ್ಯ ಕಾರಣ ರಾಜಕಾರಣ. ದೇವಿಮನೆ  ಘಟ್ಟದ   ಸಾವಿನ ಪ್ರಕರಣದಲ್ಲಿ ಉತ್ತರ ಕನ್ನಡ ಜಿಲ್ಲೆಗೆ ರಾಜಕೀಯ ಹಸ್ತ ಬಂದು ಸೇರುವ ಮೊದಲೇ ಹಾವೇರಿ ಮೂಲದ ಶಿಗ್ಗಾವಿಯ ಯಲ್ಲಮ್ಮ ಉರ್ಫ ತನುಜಾ ಕೋಂ ಲೋಹಿತ್ ದೊಡ್ಡಮನಿ,( 26) ಹತ್ಯೆಯಾದ ಮಹಿಳೆಯ ಸಾವಿನ  ಪ್ರಕರಣದಲ್ಲಿ ಇರುವ ಪಾಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ. ರಾಜಕಾರಣದ ವಾಸನೆ ಸೇರಿ ಬಿಟ್ಟಿದ್ದರೆ ತನುಜಾ ಎಂಬ ಮಹಿಳೆಯ ಸಾವಿನ ನ್ಯಾಯ ಆ ವಾಸನೆಯಲ್ಲಿ ಮುಳುಗಿ ಹೋಗುತ್ತಿತ್ತು. ದೇವಿಮನೆ ಘಟ್ಟದಲ್ಲಿ  ಹೆಣವಾಗಿರುವ ಇವಳ ಸಾವಿಗೆ ಕಾರಣ ಆದವರು ಕಾಣದೆ ಹೋಗಿದ್ದರೆ ಸಾವಿನ ಸತ್ಯ ಇಲ್ಲೆಯೇ ಸುತ್ತುತ್ತ ಉತ್ತರ ಕನ್ನಡಕ್ಕೆ ಅಂಟುತ್ತಿತ್ತು. ಕಾರಣ ಸತ್ತ ಮಹಿಳೆ ಹೊರ ಜಿಲ್ಲೆಯವಳು. ಇದೆ ಮುಖ್ಯ ಮಹತ್ವದ ಸಂಗತಿಯಾಗಿ ಉಹಾಪೊಹಗಳಿಗೆ ಆಹಾರ ಆಗುತ್ತಿತ್ತು. ಇದನ್ನು ತಪ್ಪಿಸಿದ ಕುಮಟಾ ಅಥವಾ ಉತ್ತರ ಕನ್ನಡ ಪೊಲೀಸ್ ತಂಡ ಯಾವುದೇ ಪ್ರಕರಣದಲ್ಲಿ ಯಾರ ಹಸ್ತಕ್ಷೇಪ ಇಲ್ಲದೆ ಹೋದರೆ  ಪ್ರಕರಣ ಭೇದಿಸಿ ಸತ್ಯ ಬಯಲಿಗೆ ತರುವುದು ನಮಗೇನು ದೊಡ್ಡ ಕೆಲಸ ಅಲ್ಲವೇ ಅಲ್ಲ ಎನ್ನುವುದನ್ನು  ಸಾಕ್ಷಿ  ಸಹಿತ ಸಾಬೀತು ಮಾಡಿದ್ದಾರೆ.
     
ನಮ್ಮ ಪೊಲೀಸ್ ಪಡೆ ಸ್ವತಂತ್ರವಾಗಿದ್ದರೆ ಎಂತ ಪ್ರಕರಣ ಬೇಕಾದರೂ ಭೇದಿಸಬಲ್ಲರು ಎನ್ನುವುದಕ್ಕೆ ಇದೊಂದು ಸಾಕ್ಷಿ. ತನಿಖಾಧಿಕಾರಿ ತಿಮ್ಮಪ್ಪ ನಾಯ್ಕ ರವರ ನೇತೃತ್ವದಲ್ಲಿ PSI ಈ.ಸಿ ಸಂಪತ್ ,PSI ನವೀನ ನಾಯ್ಕ, ಹಾಗೂ ಸಿ.ಹೆಚ್.ಸಿ ದಯಾನಂದ ನಾಯ್ಕ, ಸಿಹೆಚ್‌ಸಿ ಲೋಕೇಶ ಅರಿಶಿಣಗುಪ್ಪಿ, ಸಿಪಿಸಿ ಗುರು ನಾಯಕ ಸಿಪಿಸಿ ಪ್ರದೀಪ್ ನಾಯಕ ರವರನ್ನೊಳಗೊಂಡ ತಂಡ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದೆ. ಕರ್ತವ್ಯ ಮೆರೆದ ನಿಮಗೆ ಅಭಿನಂದನೆಗಳು.
 

ಹಳ್ಳಿ (ಸುದ್ದಿ ) ನ್ಯೂಸ್
ಗುಣವಂತೆ.

Share:

ಶ್ರೀ ಯಧುವೀರ ಕ್ರೆಡಿಟ್ ಸೌಹಾರ್ದ ಕೋ -ಆಪರೇಟಿವ್ ಸೊಸೈಟಿ (ರಿ) ಉದ್ಘಾಟನೆ 🌹 ಸರ್ವರಿಗೂ ಸ್ವಾಗತ 🌹

ಶ್ರೀ ಯಧುವೀರ ಕ್ರೆಡಿಟ್ ಸೌಹಾರ್ದ  ಕೋ -ಆಪರೇಟಿವ್   ಸೊಸೈಟಿ (ರಿ) ಉದ್ಘಾಟನೆ: 🌹 ಸರ್ವರಿಗೂ ಸ್ವಾಗತ 🌹

ಹೊನ್ನಾವರ : ತಾಲೂಕಿನ ಕೇಂದ್ರ ಭಾಗದಲ್ಲಿರುವ ಶಿರಸಿ ಅರ್ಬನ್ ಬ್ಯಾಂಕ್ ರೋಡಗೆ ತಾಗಿರುವ ಬಿಲ್ಡಿಂಗ್ ಲ್ಲಿ  ಶ್ರೀಕಾಂತ್ ನಾಯ್ಕ ಅಧ್ಯಕ್ಷೆತೆಯಲ್ಲಿ ಇರುವ  '"ಶ್ರೀ ಯಧುವೀರ ಕ್ರೆಡಿಟ್ ಸೌಹಾರ್ದ ಕೋ -ಆಪರೇಟಿವ್ ಸೊಸೈಟಿ" ಯು 16/06/2023ರ ಶುಕ್ರವಾರ ಉದ್ಘಾಟನೆ ಗೊಳ್ಳಲಿದೆ.  ಹೊನ್ನಾವರದ ಹಿರಿಯ ಪತ್ರಕರ್ತರಾದ ಜಿ. ಯು. ಭಟ್ ರಿಂದ ಉದ್ಘಾಟನೆಗೊಳ್ಳುವ ವೇದಿಕೆಯಲ್ಲಿ, ಉದ್ಯಮಿ  ಜಿ  ಟಿ  ಪೈ,, ಡಾ : ಆಶಿಕ್ ಹೆಗಡೆ, ಜಿ ಜಿ ಶಂಕರ, ಯೋಗೇಶ್ ರಾಯ್ಕರ್, ಮೋಹನ್ ಸಾಳೆಹಿತ್ತಲ್, ಎಸ್ ಟಿ ನಾಯ್ಕ,ಮೊದಲಾದವರು ಪಾಲ್ಗೊಳ್ಳಲ್ಲಿದ್ದಾರೆ.

ಅಧ್ಯಕ್ಷರಾದ ಶ್ರೀಕಾಂತ್ ನಾಯ್ಕ ಇದರ ಮುಖ್ಯ ರೂವಾರಿ ಆಗಿದ್ದು ಜೀವನದಲ್ಲಿ ಅನೇಕ ಏರಿಳಿತದ ಮಧ್ಯ ದುಡಿಮೆ ಹಣವನ್ನು ಧರ್ಮ ಕಾರ್ಯಕ್ಕೂ ಬಳಸುತ್ತಾ, ಇದರ ಮಧ್ಯೆ ತಾನು ಏನಾಗಬೇಕು ಎನ್ನುವ ಎಚ್ಚರಿಕೆ ಹಾಗೂ ಕನಸನ್ನು ಮರೆಯದೆ ಸಾಗಿದ ಶ್ರೀಕಾಂತ ನಾಯ್ಕರು ಅನೇಕ ವರ್ಷಗಳ ಕಾಲ ಹೊರದೇಶದಲ್ಲಿ ಬದುಕಿಗಾಗಿ ಗುದ್ದಾಟ ಮಾಡಿದವರು. ನೋವುಂಡ ಬದುಕಿಗೆ ಮಾತ್ರ ನಿಜವಾದ ಸಾರ್ಥಕ ಬದುಕು ಎಲ್ಲಿದೆ ಕಾಣುವ ಮನಸು ಇರುವುದುರು. ಪ್ರಾಮಾಣಿಕತೆ, ನ್ಯಾಯ   ನೀತಿ ಧರ್ಮಮಾರ್ಗದಲ್ಲಿ  ಸಾಗುತ್ತ ತನ್ನ ದುಡಿಮೆಯ  ಒಂದು ಪಾಲನ್ನು ಧರ್ಮಕಾರ್ಯಕ್ಕೆ   ನೀಡುತ್ತ ಆ ಮೂಲಕ  ಸಾಗಿದ ಶ್ರೀಕಾಂತ್ ನಾಯ್ಕರು ತನ್ನ ಕನಸಿನ  ಮೂರ್ತರೂಪವನ್ನು  ದಿನಾಂಕ : 16 ರ ಶುಕ್ರವಾರ ಉದ್ಘಾಟನೆ ಮಾಡಿಸುತ್ತಿದ್ದಾರೆ. ಬದುಕಿನಲ್ಲಿ ಎಚ್ಚರಿಕೆಯ ಹೆಜ್ಜೆಯನ್ನು ಇಟ್ಟವರು ನನಸಿನ ದಾರಿಯಲ್ಲಿ ಸಾಗಬಹುದು ಎನ್ನುವುದಕ್ಕೆ ಶ್ರೀಕಾಂತ್ ನಾಯ್ಕ ಒಬ್ಬರು.
ಬನ್ನಿ ಹಾರೈಸೋಣ. ಒಳ್ಳೆಯ ಜನರ  ಕಾರ್ಯಕ್ಕೆ ಬೆಂಬಲವಾಗಿ ನಿಂತರೆ, ನಾಳೆ ಇಡೀ ಸುತ್ತಮುತ್ತಲಿನ ಸಮಾಜಕ್ಕೆ  ಮತ್ತೆ  ಇನ್ನೂ ಹೆಚ್ಚಿನ ಒಳ್ಳೆಯದೇ ಆಗುತ್ತದೆ. ಮರೆಯದೆ ಬನ್ನಿ ಶುಕ್ರವಾರ ಬೆಳಿಗ್ಗೆ 11:15ಕ್ಕೆ.ಆಡಳಿತ ಕಚೇರಿಯ ಉದ್ಘಾಟನೆಗೆ. ಶುಭವಾಗಲಿ.
ಹಳ್ಳಿ (ಸುದ್ಧಿ ) ನ್ಯೂಸ್
ಭಾವ ಶುದ್ಧಿ
Share:

ಮೌನ ಮುರಿಯುವ ಮುನ್ನ " ಕವನ ಸಂಕಲನ ಓದು ಬರಹ.

ಶ್ರೀಮತಿ ಮಹಾದೇವಿ ಗೌಡ ಅವರ ಕವನ  ಸಂಕಲನ  ಮೌನ ಮುರಿಯುವ ಮುನ್ನ


    ಅಂತರಂಗದ ತಳಮಳ, ಬೇಗುದಿ, ದುಗುಡ, ದುಮ್ಮಾನಗಳೆಲ್ಲ ಮಾನವನ ಬದುಕಿಗೆ ಅನುಭವದ ಪಾಠ ಶಾಲೆ ಆಗಬೇಕು. ಹಾಗೆ ಆದಾಗಲೇ ಬದುಕು ಜಾಗ್ರತವಾಗಿದ್ದು, ಸುತ್ತಲಿನ ಪ್ರಪಂಚದಲ್ಲಿ  ಜಡವಾಗದೆ, ಚೇತನವಾಗಿದೆ  ಅಂತಃಕರಣ ಎನ್ನುವುದಕ್ಕೆ ಸಾಕ್ಷಿಯಾಗಿ ನಿಲ್ಲುತ್ತದೆ. ಶ್ರೀಮತಿ ಮಹಾದೇವಿ ಯವರ ಕವನ ಅಂತದಕ್ಕೊಂದು ಉದಾಹರಣೆ, ಜೊತೆಗೆ   ಶಬ್ದಗಳನ್ನು  ಜೋಡಿಸಿರುವ  ಮನೋಹರತೆಯು ಎದ್ದು ಕಾಣುತ್ತದೆ. ಮಾನವನ   ನಿರಂತರ   ಭರವಸೆಯ ಸಾಗುವಿಕೆಯಲ್ಲಿ   ಬಿದ್ದ   ವಾಸ್ತವದ ಪೆಟ್ಟುಗಳು  ಅನುಭವಗಳಾಗಿ ಚಿತ್ರೀತವಾದಾಗ  ಅದು  ಓದುಗರಿಗೆ ಅವರ ಭಾವವರತೆಯಲ್ಲಿ ಹೌದೌದು ಅನಿಸಿದಾಗ   ಬರಹ  ಗೆಲ್ಲುತ್ತದೆ. ಕವಿತೆಯ  ಒಟ್ಟು  ಅರ್ಥ ಏನು ಅಂತ ಕೇಳಿದರೆ ಅದು ಓದುಗನ ಅಂತರಂಗದಲ್ಲಿ ಅವರವರಿಗೆ ಕೊಟ್ಟ ಆನಂದ ಅಥವಾ ಅನುಭವದಲ್ಲಿ. ಅಂತ ಓದನ್ನು ಕೊಡುವಲ್ಲಿ ಇಲ್ಲಿಯ ಕವಿತೆಗಳು ಗೆದ್ದಿದೆ. ಕವಿತೆ   ಓದುವಾಗ  ಭಾವವಾಗುತ್ತದೆ. ಮುಗಿದ ಮೇಲೆ   ಅಂತರಂಗದ ಅನುಭವವಾಗಿ ಬೇರೆ ಬೇರೆ ಕಾರಣದಿಂದ ಸುಖ ದುಃಖ ಎಲ್ಲವು ಆಗುತ್ತದೆ  ಅವರವರ ಜಾಯಮಾನಕ್ಕೆ.

 
    ಯಾವುದೇ, ಯಾರದೇ  ಕವಿತೆಯ ಸಾಲುಗಳು  ಇರಲಿ, ಬರೆದ  ಕವಿ ಅಥವಾ ಕವಯಿತ್ರಿಯ  ಬದುಕನ್ನು ಹತ್ತಿರದಿಂದ  ಬಲ್ಲವರಿಗೆ   ಅಲ್ಲಿಯ ಸಾಲುಗಳು   ಬೇಗ   ಅರ್ಥದ  ವಾಸ್ತವಕ್ಕೆ   ಸಿಕ್ಕಿ  ಬಿಡುತ್ತದೆ. ಉಳಿದವರಿಗೆ  ಕಲ್ಪನಾ  ವಿಹಾರವಾಗಿ, ಪದ  ಪುಂಜಗಳ ಜೋಡಣೆಯಾಗಿ, ಅಲ್ಲಿ   ಇಲ್ಲಿ ಒಟ್ಟು ಕವಿತಾ ಶಕ್ತಿಯ  ಉದಾಹರಣೆಯಾಗಿ, ಕವಯಿತ್ರಿ ಇಲ್ಲಿ ಈ ಸಾಲುಗಳಲ್ಲಿ ಹೀಗಾಗಿದ್ದಾಳೆ, ಈ ಕವಿತೆಯಲ್ಲಿ ಅವರ ಇನ್ನೊಂದು ನಿಲುವು ಹೀಗೆ ವ್ಯಕ್ತವಾಗಿದೆ ಅಂತೆಲ್ಲಾ   ಕಾಣಬಹುದು. ಆದರೆ  ಕವಯಿತ್ರಿ ಅಥವಾ ಕವಿಯ ಬದುಕನ್ನು  ಹತ್ತಿರದಿಂದ  ಬಲ್ಲವರಿಗೆ ಬರೆದವರ ಭಾವನಾತ್ಮಕ  ಗಟ್ಟಿ ನಿರ್ಧಾರ,  ಬದುಕಿನಲ್ಲಿ ಕಂಡುಕೊಂಡ ಸತ್ಯದ  ಅಂತಿಮ ಗತಿಯ  ಜೊತೆಗೆ   ನಾನೇನಾಗಬೇಕು ಎಂದಿರುವುದು ಬೇಗ ಕಾಣ ಸಿಗುತ್ತದೆ. ಹಾಗೆ ನೋಡಿದರೆ  "ಮೌನ ಮುರಿಯುವ ಮುನ್ನ"  ಕವಯಿತ್ರಿಯ ಮೌನ ಕವಿತೆಯಾಗಿ ಬಂದಿರುವುದು ಮೆಚ್ಚಲೇ ಬೇಕಾಗುತ್ತದೆ. ಆ ನೆಲೆಯಲ್ಲಿಯು ಕವನ ಸಂಕಲನ ಹೆಚ್ಚು ಆಪ್ತವಾಗಿಯು ನಿಲ್ಲುತ್ತದೆ. ತನ್ನ ಬದುಕಿನ ಪಾಡನ್ನು ಸತ್ಯ ಶೋಧನೆಗೆ ಬಳಸಿಕೊಂಡು ಅಲ್ಲಿ ಸಿಕ್ಕಿರುವ  ಅನುಭವಗಳನ್ನು  ಸಮಾಜಮುಖಿಯಾಗಿಸುವ ಬಯಕೆಯಲ್ಲಿ   ತನ್ನ ನೋವನ್ನು ಮರೆಯುವ ಯತ್ನ  ಇದೆಯಲ್ಲ  ಅದನ್ನು ಮೆಚ್ಚಲೇ ಬೇಕು. ಅವೆಲ್ಲವೂ ಕಾಳಜಿಯಾಗಿ ಸಮಾಜಕ್ಕೆ ಮುಟ್ಟಿಸುವುದು ಇಲ್ಲಿಯ ಕವಿತೆಯ ಹಂಬಲವಾಗಿದೆ. ಹಾಗಾಗಿ   ಕವನ ಸಂಕಲನವನ್ನು ಖರೀದಿಸಿ ಓದಬೇಕು. ಇದು ಕನ್ನಡದ  ಸಾಹಿತ್ಯಕ್ಕೆ  ಸೇರ್ಪಡೆ  ಆಗುವವರಿಗೆ ಕೊಟ್ಟ   ಗೌರವ  ಮಾನ್ಯತೆ  ಆಗುತ್ತದೆ.

/ಕಾಣಲಿಲ್ಲ ಪಲ್ಲವಿಯಲಿ
ಕವಿಯ ಮನದ ಅಣತಿಯ
ಕಾಣಲೆಂದೆ ಬದಿಯಲಿಟ್ಟೆ
ಹೃದಯವೆಂಬ ಹಣತೆಯ /
 
ಕನಸಿನ ಮದ್ಯೆ ವಾಸ್ತವ ಏನಾಗುತ್ತೆದೆ ಎನ್ನುವುದನ್ನು  ಕಡೆದು ಇಟ್ಟಂತೆ ಇದೆ.
 
    ಕವಿತೆಗಳು ಗೆಲ್ಲುವುದು ವಾಸ್ತವಕ್ಕೆ ಹತ್ತಿರ ಆದಾಗ. ಆದರೆ ಬದುಕು ಸೋಲುವುದು  ವಾಸ್ತವ   ಅಡ್ಡ ಬಂದಾಗ . ಇದು ಇಲ್ಲಿಯ ಸತ್ಯವಾಗಿ ಕಂಡುಬರುತ್ತದೆ. ತನ್ನ ತಾ ಕಾಣುವ ಶಕ್ತಿ ಇದ್ದವರಿಗೆ ಇತರ ವಿಷಯ,ವಸ್ತು, ಜೀವಗಳಲ್ಲಿ ಇರುವ  ಸತ್ಯವನ್ನು ಗುರುತಿಸಲು ಸಾಧ್ಯ. ಇಂತದ್ದೊಂದು ಸತ್ಯ ಗುರುತಿಸುವ  ಜೊತೆಗೆ  ಜೀವನದ ದಾರಿಯಲ್ಲಿ  ಹೇಳುತ್ತ ಸಾಗುತ್ತದೆ ಕವಿತೆಗಳು. ಜೀವದ ಅನಿರೀಕ್ಷಿತ  ತಲ್ಲಣವನ್ನು ಸಹಿಸಿ  ಲೋಕ  ಸತ್ಯವನ್ನು ಅರಸಿ ಹೋಗುವ ಹಾಗೆ  ಅದನ್ನು ಕವಿತೆಯಾಗಿಸುವ ಶಕ್ತಿ ಕವನದುದ್ದಕ್ಕೂ  ತುಂಬಿದೆ. ಕಹಿ ಘಟನೆಯನ್ನು  ಕವನದ ಮೂಲಕ ಸಿಹಿಯಾಗಿಸಿ ಕೊಳ್ಳುವುದಿದೆಯಲ್ಲ, ಕವಯಿತ್ರಿಯ  ಈ  ಶಕ್ತಿಯನ್ನು ಮೆಚ್ಚಲೇ ಬೇಕು.  ಕವಯಿತ್ರಿಯನ್ನು ಹತ್ತಿರದಿಂದ ಬಲ್ಲವರಿಗೆ  ಕವಿತೆ ಬೇಗ ಆಪ್ತವಾಗುತ್ತದೆ ಮಾತ್ರವಲ್ಲ ತನ್ನ ತಾನು ಕಾಣುತ್ತ ಅದರೊಳಗಿನ ಲೋಕ ಸತ್ಯ ಹೇಳುವ ಕೆಲಸವನ್ನು ಇಲ್ಲಿಯ ಕವಿತೆ ಮಾಡುತ್ತದೆ. ಮೊದಲ ಕವನ ಸಂಕಲನ ಎನ್ನುವ ಭಾವವನ್ನು ಹುಟ್ಟಿಸುವುದೇ ಇಲ್ಲ. ಕಲ್ಪನೆಯ ಮೇಲೆ ವಿಹರಿಸುವುದಕ್ಕಿಂತ ವಾಸ್ತವದ ಮೇಲೆ ನಡೆಯುವ ಸಾಲುಗಳು ಗಟ್ಟಿಯಾಗಿ ನಿಲ್ಲುತ್ತದೆ. ಇಲ್ಲಿಯ ಕವನ ವಾಸ್ತವ ಹುಡುಕುತ್ತ ಸಾಗುತ್ತದೆ. ಈ ನೆಲೆಯಲ್ಲಿ  ಕವನ ಸಂಕಲನ ಚನ್ನಾಗಿಯೇ ಮೂಡಿ ಬಂದಿದೆ. 
    ಪುಸ್ತಕದಿಂದ  ಬಂದ   ಹಣವನ್ನು  ಸಹ ಸಮಾಜಕ್ಕೆ  ನೀಡುವ ಸದುದ್ದೇಶ  ಕವಿಯಿತ್ರಿಗೆ ಇರುವುದರಿಂದ ಸಮಾಜದ ನಗುವಲ್ಲಿ ಕಾಣಬೇಕು ಎನ್ನುವ ವಾಸ್ತವ ಸತ್ಯದ ನಿರ್ಧಾರ ಮಹಾದೇವಿ ಗೌಡರ ಕವನದಲ್ಲಿ ಕಾಳಜಿ ಕಳಕಳಿಯಾಗಿ ಶರಾವತಿಯಂತೆ ಉದ್ದಕ್ಕೂ ಹರಿದಿದೆ.

- ಶಂಕರ ಗೌಡ ಗುಣವಂತೆ
Share:

Subscribe Us

ನನ್ನ ನೆಚ್ಚಿನ ಸುದ್ಧಿ ಜಾಲಾ

Join Our Team

Labels