ಮಹಿಳಾ ಉನ್ನತೀಕರಣಕ್ಕೆ ವಿಚಾರ ಗೋಷ್ಠಿ

ಕೊಳಗದ್ದೆಯಲ್ಲಿ ನಡೆಯಿತು ತಾಲೂಕ ಮಟ್ಟದ ಮಹಿಳಾ ವಿಚಾರ ಗೋಷ್ಠಿ "

    ಹೊನ್ನಾವರ : ತಾಲೂಕಿನ  ಕೊಳಗೆದ್ದೆಯಲ್ಲಿ  ಮಹಿಳಾ ಜ್ಞಾನವಿಕಾಶ   ಕಾರ್ಯಕ್ರಮದಡಿಯಲ್ಲಿ  ತಾಲೂಕ ಮಟ್ಟದ ಮಹಿಳಾ  ವಿಚಾರ  ಗೋಷ್ಠಿ  ಇಂದು   ನಡೆಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ  ಗ್ರಾಮಭಿವೃದ್ಧಿ  ಯೋಜನೆಯು  ಈ ಕಾರ್ಯಕ್ರಮ  ಏರ್ಪಡಿಸಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು  ಪೊಲೀಸ್  ಇಲಾಖೆಯ  ಶ್ರೀಮತಿ ಕಲ್ಪನಾ  ಮೇಡಂ  ದೀಪ  ಬೆಳಗುವುದರ  ಮೂಲಕ ಚಾಲನೆ ನೀಡಿದರು. ಉದ್ಘಾಟಿಸಿ ಮಹಿಳಾಪರ ಕಾನೂನು ವಿಷಯದ ಬಗ್ಗೆ ಮಾತನಾಡಿದರು.

 
    ವಿಚಾರಗೋಷ್ಠಿಯ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಶಿಕ್ಷಕಿ ಹಾಗೂ ಸಾಹಿತಿ ಶ್ರೀಮತಿ ಸುಧಾ ಭಂಡಾರಿ ಅವರು ಮಹಿಳಾ  ಸಬಲೀಕರಣ ಹಾಗೂ ಸಂಸ್ಕೃತಿ ಸಂಸ್ಕಾರ ವಿಷಯದ  ಬಗ್ಗೆ ಉತ್ತಮ ಮಾಹಿತಿ ನೀಡಿದರು. ತಾಲೂಕಿನ ಮಾನ್ಯ ಯೋಜನಾಧಿಕಾರಿಗಳಾದ  ಶ್ರೀಮತಿ ವಾಸಂತಿ ಮೇಡಂ ರವರು  ಕಾರ್ಯಕ್ರಮದ ಹಿನ್ನೆಲೆ ಹಾಗೂ ಧ್ಯೇಯೋದ್ದೇಶಗಳ ಬಗ್ಗೆ  ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷರಾದ  ಕೇಶವ ಆಚಾರಿ, ಜಿಲ್ಲಾ ಸಮನ್ವಯ ಅಧಿಕಾರಿಗಳು, ತಾಲೂಕ ಸಮನ್ವಯಾಧಿಕಾರಿಗಳು, ಎಲ್ಲಾ ವಲಯಗಳ  ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.

 

 
    ಕಾರ್ಯಕ್ರಮದಲ್ಲಿ  ಆರತಿ ತಟ್ಟೆ ಸ್ಪರ್ಧೆ, ಪುಷ್ಪ ಗುಚ್ಚ ಸ್ಪರ್ಧೆ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಸ್ಪರ್ಧೆಯನ್ನು ಏರ್ಪಡಿಸಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.


ಹಳ್ಳಿ ನ್ಯೂಸ್
ಗುಣವಂತೆ

Share:

0 Comments:

ಕಾಮೆಂಟ್‌‌ ಪೋಸ್ಟ್‌ ಮಾಡಿ

Subscribe Us

ನನ್ನ ನೆಚ್ಚಿನ ಸುದ್ಧಿ ಜಾಲಾ

Join Our Team

Labels

Blog Archive