ಸೇವಾ ನಿಷ್ಠಾ ಶ್ರೀಧರರಿಗೆ ಗೌರವ " ಇದು ಹೊನ್ನಾವರ ಜನತೆಯ ನ್ಯಾಯ ಸಮ್ಮತ ಕರ್ತವ್ಯಕ್ಕೆ ಪ್ರಜ್ಞಾ ಶ್ರೀಮಂತಿಕೆಯ ಸಮರ್ಪಣೆ "

"ಸೇವಾ ನಿಷ್ಠಾ ಶ್ರೀಧರರಿಗೆ ಅಭಿನಂದನೆಗಳ ಮಹಾಪುರ "ಇದು ಹೊನ್ನಾವರ ಜನತೆಯ  ನ್ಯಾಯ ಸಮ್ಮತ  ಕರ್ತವ್ಯಕ್ಕೆ  ಪ್ರಜ್ಞಾ  ಶ್ರೀಮಂತಿಕೆಯ ಸಮರ್ಪಣೆ"
ಹೊನ್ನಾವರ : ಹೊನ್ನಾವರದ  ಇತಿಹಾಸದಲ್ಲಿ ಒಬ್ಬ ಪೊಲೀಸ್ ಅಧಿಕಾರಿಗೆ  ಈ ಪ್ರಮಾಣದ  ಗೌರವ   ಸಮರ್ಪಣೆ ಇದೆ ಮೊದಲ ಬಾರಿ ಎನಿಸುತ್ತದೆ. ಅಷ್ಟರ ಮಟ್ಟಿಗೆ ಎಸ್ ಆರ್ ಶ್ರೀಧರ್ ಜನರ ಹೃದಯಕ್ಕೆ ಲಗ್ಗೆ ಇಟ್ಟಿದ್ದಾರೆ ಎನ್ನುವುದು ಸಾಕ್ಷಿಯಾಗಿ ಹೋಯಿತು.
ಸಾಮಾನ್ಯವಾಗಿ  ಪೊಲೀಸರು  ಎಂದರೆ  ಒಪ್ಪಿತ ಭಾವ ಕಡಿಮೆಯೇ ಇದೆ, ಎಲ್ಲರಿಗೂ ಗೊತ್ತಿರುವ ಮಾತೇ. ಆದರೆ ಎಲ್ಲರೂ ಒಪ್ಪಿಕೊಂಡಿದ್ದಾರೆ ಎಂದರೆ ಅಲ್ಲೇನೋ ಒಂದು ಒಳ್ಳೆಯ ತನ ಮಾನದಂಡವಾಗಿದೆ ಎಂತಲೇ ಅರ್ಥ.
ಉತ್ತರ   ಕನ್ನಡ  ಜಿಲ್ಲೆಯ ಮುಂಡಗೋಡಿನಲ್ಲಿ ತನ್ನ ಬದುಕನ್ನು ಕಳೆದು , ಉತ್ತರ ಕನ್ನಡಕ್ಕೆ ಹೆಚ್ಚಿನ ಸೇವೆ ಸಲ್ಲಿಸಿದ ಶ್ರೀಧರರಿಗೆ ಗೌರವ ಸಮರ್ಪಸಿದ್ದು ಒಂದು ಅರ್ಥದಲ್ಲಿ ಹೊನ್ನಾವರ ಜನತೆಯ  ಹೃದಯದಲ್ಲಿ ಇರುವ  ನ್ಯಾಯ ಸಮ್ಮತ  ಕರ್ತವ್ಯಕ್ಕೆ  ಪ್ರಜ್ಞಾ ಶ್ರೀಮಂತಿಕೆಯ ಸಮರ್ಪಣೆ ಎಂದರೆ ತಪ್ಪಾಗಲಾರದು. ಇದು ಹೊನ್ನಾವರ ಜನತೆಯ ದೊಡ್ಡ ಗುಣವು ಹೌದು.
ಮಾತ್ರವಲ್ಲ ಒಳ್ಳೆಯವರನ್ನು ಅಷ್ಟೇ ದೊಡ್ಡ ಮಟ್ಟದಲ್ಲಿ ಗೌರವಿಸುತ್ತಾರೆ ಹೊನ್ನಾವರದ ಜನತೆ  ಎನ್ನುವುದಕ್ಕೆ ಇಲ್ಲಿಗೆ ಅಧಿಕಾರದ ಕುದುರೆ ಏರಿ ಬರುವ ಆಡಳಿತ ವರ್ಗದ  ಸದಸ್ಯರಿಗೆ ಇದೊಂದು ದೊಡ್ಡ ಉದಾಹರಣೆ.
ತಾಲೂಕಿನ ಬಹುತೇಕ ಎಲ್ಲ ಕಡೆಯಿಂದಲೂ ನಿನ್ನೆ ಹೊನ್ನಾವರದ ಪ್ರತಿಭೋದಯದಲ್ಲಿ ನಡೆದ   ವೇದಿಕೆಯಯಲ್ಲಿ  ಶ್ರೀಧರರಿಗೆ ಗೌರವ ಸಮರ್ಪಣೆ ಆಗಿದೆ.
ಅಷ್ಟರ ಮಟ್ಟಿಗೆ ಜನಸಾಮಾನ್ಯರ ಹೃದಯಕ್ಕೆ ತಮ್ಮ ಕರ್ತವ್ಯ, ಸೇವಾ ನಿಷ್ಠೆ, ಪ್ರಾಮಾಣಿಕವಾದ ತನ್ನ ಹುದ್ದೆಯ ಅರ್ಥವನ್ನು  ಅರಿತು ಹತ್ತಿರ ಆಗಿದ್ದಾರೆ ಎಸ್ ಆರ್ ಶ್ರೀಧರರು.
ತಾವು ಅಧಿಕಾರಕ್ಕೆ ಹೋದಲೆಲ್ಲಾ ಪೊಲೀಸ್ ಗಿರಿಯ ಪ್ರದರ್ಶನ ಎಂದು ಮಾಡಿದವರಲ್ಲ. ಬದಲಾಗಿ ಅಲ್ಲೊಂದು ಒಳಗಿರುವ ಹೃದಯ ದರ್ಶನ ಮಾಡಿಸಿ ತನ್ನ ಹೆಸರಿನ ಹಿಂದೆ ಇರುವ ಅರ್ಥವನ್ನು ಉಳಿಸಿ ಕೊಂಡು ಜನ ಮೆಚ್ಚುಗೆ ಪಡೆದು ಬಂದಿದ್ದಾರೆ.
ಇಂತವರಿಗೆ ಗೌರವ ಸಮರ್ಪಣೆ ಆದಾಗ ಸಮಾಜವು ಎಚ್ಚರದಿಂದ ಇದೆ ಎನ್ನುವುದಕ್ಕೆ ಇದೊಂದು ಮೈಲಿ ಗಲ್ಲು. ಹೊನ್ನಾವರಕ್ಕೆ ಬರುವ ಅಧಿಕಾರಿ ವರ್ಗ ಇದನ್ನು ಸೂಕ್ಷ್ಮವಾಗಿ ತಿಳಿದು ಕೊಳ್ಳಲೇ ಬೇಕು.ಸಮಾಜ ಸತ್ತಿಲ್ಲ, ಆದರೆ  ಸೂಕ್ಷ್ಮವಾಗಿ ನಮ್ಮನ್ನು ನೋಡುತ್ತಿದೆ ಎಂದು.
 ಉತ್ತರ ಕನ್ನಡಲ್ಲಿ ಬೆಳೆದ ಶ್ರೀಧರರಿಗೆ  ಉತ್ತರ ಕನ್ನಡ  ಅರ್ಥವಾಗಿದೆ  ಎನಿಸುತ್ತದೆ. ಜೊತೆಗೆ ಉತ್ತರ  ಕನ್ನಡ  ಅವರಿಗೆ  ಒಳ್ಳೆಯ  ಗುಣವನ್ನು  ಕೊಟ್ಟಿದೆ  ಎನ್ನುವುದರಿಂದ ಉತ್ತರ ಕನ್ನಡದ  ನಾವು  ತಿಳಿಯಬೇಕಾಗಿರುವುದು  ಉತ್ತರ ಕನ್ನಡದ  ನೆಲದಲ್ಲಿ  ಸದ್ಗುಣ, ಸದ್ಭಾವ ತುಂಬಿದೆ ಎನ್ನುವುದನ್ನ ತಿಳಿಯಬೇಕಾಗಿದೆ. ವಿಶೇಷವಾಗಿ ಇಲ್ಲಿರುವ ರಾಜಕೀಯ ನಾಯಕರಿಗೆ ಅರ್ಥ ಆಗ್ಬೇಕು.ಅವರಿಗೆ ಸಿಕ್ಕಿರೋದು ನಮಗೆ ಏಕೆ ಸಿಕ್ಕಿಲ್ಲ ಎನ್ನುವ ಪ್ರಶ್ನೆಯು ನಿಮಗಿರಬೇಕು.
ಏನೇ ಇರಲಿ ನಿಮಗೆ ಸಿಕ್ಕ ಜನತೆಯ ಹೃದಯದ ಸನ್ಮಾನ ಇದು ನಿಮ್ಮ ಪ್ರಾಮಾಣಿಕ ಸೇವೆಗೆ ಸಿಕ್ಕ ಸನ್ಮಾನ. ಇಂತ ಉತ್ತಮ ಸೇವೆ ಇನ್ನೂ ಹೆಚ್ಚಿನ ರೀತಿಯಲ್ಲಿ ಜನತೆಗೆ ಸಿಗಲಿ.
ಶುಭವಾಗಲಿ ನಿಮಗೆ.

ಹಳ್ಳಿ (ಸುದ್ದಿ ) ನ್ಯೂಸ್
ಭಾವ  ಶುದ್ಧಿ 
Share:

ಉತ್ತರ ಕನ್ನಡಿಗರ ಜನಸಾಮಾನ್ಯರ ಹೃದಯದಲ್ಲಿ ನೆಲೆ ಪಡೆದ ವರ್ಷದ ವ್ಯಕ್ತಿಗಳು ಇಬ್ಬರು

"ಉತ್ತರ ಕನ್ನಡದ ವರ್ಷದ ವ್ಯಕ್ತಿಗಳು ಇಬ್ಬರು "
 ಸಾರ್ವಜನಿಕ  ಗಣೇಶೋತ್ಸವ ಹಬ್ಬಕ್ಕೆ
ಸೌಹಾರ್ದತೆಯ ದೀಪ ಹಚ್ಚಿದ ಎಸ್ ಆರ್ ಶ್ರೀಧರ "

ಉತ್ತರ ಕನ್ನಡ ಜನತೆಯ ಹೃದಯದಲ್ಲಿ ಸ್ಥಾನ ಪಡೆದ ಈ ವರ್ಷದ ಇಬ್ಬರು ವ್ಯಕ್ತಿಗಳೆಂದರೆ
ನಿರ್ಗಮಿತ ದಕ್ಷ ಪೊಲೀಸ್ ವರಿಷ್ಟಾಧಿಕಾರಿಣಿ ಡಾ : ಸುಮನ್ ಪೆನ್ನೇಕರ್
 ಹಾಗೂ ಹೊನ್ನಾವರದ ಸಿ ಪಿ ಐ ಶ್ರೀಧರ  ಎಸ್ ಆರ್. ಜಿಲ್ಲೆಯ  ಜನಸಾಮಾನ್ಯರ ಹೃದಯದಲ್ಲಿ ಸ್ಥಾನ ಪಡೆಯುತ್ತಾರೆ ಎಂದರೆ ಈ ದೇಶ ಕೋಡುವ ಎಲ್ಲ ಪ್ರಶಸ್ತಿಗಿಂತ ಇದು ಮಿಗಿಲು.  ಶರಣರ ಕಾಲವನ್ನು ಮರಣ ಕಾಲದಲ್ಲಿ ನೋಡು ಎನ್ನುವ ಮಾತಿದೆ, ಆದರೆ ಪೊಲೀಸ್ ಅಧಿಕಾರಿಗಳ ಕಾಲವನ್ನು ಅವರ ವರ್ಗಾವಣೆಯ  ಸಮಯದಲ್ಲಿ (ಕಾಲದಲ್ಲಿ ) ನೋಡು ಎಂದರೆ ಎಳ್ಳಷ್ಟೂ ತಪ್ಪಿಲ್ಲ ಎನಿಸುತ್ತದೆ.ಅದರಲ್ಲೂ ಪೊಲೀಸ್ ಸೇವೆಯಲ್ಲಿ ಇರುವವರು ಜನಾನುರಾಗಿ ಆಗುವುದು ಎಂದರೆ ದೊಡ್ಡ ಆಶ್ಚರ್ಯವೇ ಸರಿ. ಅಷ್ಟರ ಮಟ್ಟಿಗೆ ಜನಸಾಮಾನ್ಯರಿಗೆ ಈ ಇಲಾಖೆಯ ಮೇಲೆ ಇರುವ ನಂಬಿಕೆಯೇ ಬೇರೆ.
ವ್ಯಕ್ತಿಯೊಬ್ಬ ಅಧಿಕಾರದ   ಗದ್ದುಗೆ   ಏರಿದಾಗ  ತನ್ನ   ಮೂಲವನ್ನು   ಮರೆಯದೆ  ಹೆಜ್ಜೆ   ಹೆಜ್ಜೆಗೆ   ತಾನು   ಬಂದ  ದಾರಿಯನ್ನು  ಸ್ಮರಿಸುತ್ತ  ಸಾಗಿದಾಗ  ತನ್ನ  ಅಧಿಕಾರವನ್ನು ಜನಾನುರಾಗಿಯಾಗಿ  ಬಳಸಿಕೊಳ್ಳುತ್ತಾನೆ. ಹಾಗೆ  ಬಳಸಿ ಕೊಂಡವರಲ್ಲಿ ಎಸ್ ಆರ್ ಶ್ರೀಧರ  ಒಬ್ಬರು ಎನ್ನುವುದನ್ನು  ಸಾರ್ವಜನಿಕ ಹೃದಯದಲ್ಲಿ ಇವರ  ಕುರಿತಾಗಿ ಮನೆಮಾಡಿರುವ  ಅಭಿಪ್ರಾಯವೆ  ಸಾಕ್ಷಿಯಾಗಿ ಕಂಡುಬರುತ್ತದೆ.
ಶಿವಮೊಗ್ಗ  ಜಿಲ್ಲೆ  ಇವರ  ಮೂಲ  ಊರಾದರು ಶ್ರೀಧರರ  ಊರು ಉತ್ತರ ಕನ್ನಡವೇ  ಎಂದರೆ  ತಪ್ಪಿಲ್ಲ.
ಉತ್ತರ  ಕನ್ನಡ   ಜಿಲ್ಲೆಯಲ್ಲಿಯೇ ತನ್ನ  ಬದುಕಿನ ಬಹು  ದಿನವನ್ನು  ಆರಂಭಸಿ  ಇಲ್ಲಿಯ  ಅನ್ನ  ನೀರು  ಕುಡಿದು  ಬೆಳದ  ವ್ಯಕ್ತಿ   ಶ್ರೀಧರ  ಎಸ್  ಆರ್. ತನ್ನ ತಂದೆ  ಮುಂಡಗೋಡಿನಲ್ಲಿ   ಶಿಕ್ಷಕರಾದ ಕಾರಣದಿಂದ ಇಲ್ಲಿಯೇ ತನ್ನ ವಿದ್ಯಾಭ್ಯಾಸ  ಮುಗಿಸಿದ  ಶ್ರೀಧರ್ ಎಸ್   ಆರ್   ಒಂದು   ಅರ್ಥದಲ್ಲಿ  ಉತ್ತರ  ಕನ್ನಡವೆ  ಅವರ  ರಕ್ತದಲ್ಲಿ ಇದೆ  ಎಂದರು  ತಪ್ಪಾಗಲಾರದು. ಈ ಕಾರಣಕ್ಕಾಗಿಯೇ ಜಿಲ್ಲೆಯ  ಋಣದ  ಭಾರ  ತನ್ನ  ಮೇಲಿದೆ  ಎನ್ನುವ ಕಾರಣದಿಂದ  ಜಿಲ್ಲೆಯ  ಹೃದಯ  ಗೆಲ್ಲುವ  ಕರ್ತವ್ಯ ನಿರ್ವಹಣೆ ಮಾಡುತ್ತಿರುವುದು  ಜನಸಾಮಾನ್ಯರ  ಬದುಕು ಅವರ  ಹೃದಯದ  ಒಳಗೆ  ಇದೆ  ಎನ್ನುವುದನ್ನು ಮರೆಯುವ ಹಾಗಿಲ್ಲ.
ತನ್ನ  ವೃತ್ತಿಯ ಮೊದಲ ದಿನವನ್ನು  ಗುಲ್ಬರ್ಗ, ಕೋಲಾರ, ಮಂಗಳೂರು, ಜಮಖಂಡಿ, ಯಲ್ಲಾಪುರ, ಕುಮಟಾ, ಜಿಲ್ಲಾ ಅಪರಾಧ ಪತ್ತೆದಳ, ಅಂಕೋಲ, ಕರಾವಳಿ ಕಾವಲು ಪಡೆ, ಹಾಗೆ ಹೊನ್ನಾವರ. ಒಟ್ಟು ತನ್ನ 15 ವರ್ಷದ ಸೇವೆಯಲ್ಲಿ ಎಲ್ಲಿಯೂ ಹೆಸರು ಕೆಡಿಸಿಕೊಂಡಿಲ್ಲ ಎಂದರೆ ಉತ್ತರ ಕನ್ನಡ ಅವರಿಗೆ ಒಳ್ಳೆಯದನ್ನು ನೀಡಿದೆ ಎನಿಸುತ್ತದೆ. ಮಾತ್ರವಲ್ಲ ತಾನು  ಬೆಳೆದ  ಜಿಲ್ಲೆಯಲ್ಲಿಯೇ ಹೆಚ್ಚು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು ವಿಶೇಷವೇ!
ಮಾನ್ಯ ಮುಖ್ಯಮಂತ್ರಿಗಳ ಚಿನ್ನದ ಪದಕ ಅಪರಾಧ ಪತ್ತೆ ತನಿಖೆ ಕಾರ್ಯದಲ್ಲಿ ಉತ್ತಮ ಕರ್ತವ್ಯನಿರ್ವಣೆ ಹಿನ್ನೆಲೆಯಲ್ಲಿ ಪಡೆದರೆ , ಭಯೋತ್ಪಾನೇ ವಿರೋಧಿ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಕೇಂದ್ರ ಗ್ರಹ ಸಚಿವರ ವಿಶೇಷ ಕಾರ್ಯಾಚರಣೆಯ ಪದಕ  ಒಲಿದಿದ್ದು  ಒಬ್ಬ ವ್ಯಕ್ತಿ  ಜನಪರ ಕರ್ತವ್ಯ  ನಿರ್ವಹಿಸಿದರೆ  ಯಾವ ಮೂಲೆಯಲ್ಲಿ  ಇದ್ದರು ಯೋಗ್ಯತೆ ಅವರನ್ನು ಅರಸಿ ಬರುತ್ತದೆ  ಎನ್ನುವುದಕ್ಕೆ ಶಶಿಧರರ  ಕಾರ್ಯವೇ ಸಾಕ್ಷಿ. ಇವರೊಬ್ಬ ಅಪರೂಪದ ಕರ್ತವ್ಯ  ಪ್ರಜ್ಞಾ ಪ್ರೀಯರು  ಎನ್ನುವುದಕ್ಕೆ  ಅವರು ಕೊಡುತ್ತಾ  ಬಂದಿರುವ  ವಾರದ ವ್ಯಕ್ತಿ ಪುರಸ್ಕಾರ  ಉತ್ತಮ ಉದಾಹರಣೆ. ಇಲಾಖೆಯಲ್ಲಿ ಒಳ್ಳೆಯ ಕೆಲಸ ಮಾಡಿದವರನ್ನು  ಅಲ್ಲಿರುವ  ಸಿಬ್ಬಂದಿಗಳೇ  ಆಯ್ಕೆ ಮಾಡಿ  ಕೊಡುವ ನಿಯಮವನ್ನು ಜಾರಿಗೆ ತಂದು ಸಿಬ್ಬಂದಿಗಳ ಕಾರ್ಯ  ಪ್ರಜ್ಞೆಯನ್ನು  ಆ ಮೂಲಕ  ಜಾಗ್ರತ ಗೊಳಿಸುವುದು  ಮಾತ್ರವಲ್ಲದೆ  ಕರ್ತವ್ಯವನ್ನು  ಗೌರವಿಸುವ ಕಾರ್ಯ ಮಾಡುತ್ತ  ಬಂದಿರುವುದು  ಇವರೊಬ್ಬ ಸಹೃದಯ ಮನೋಭಾವದ  ಚಿಂತಾನಶೀಲ  ಅಧಿಕಾರಿ ಎನ್ನುವುದಕ್ಕೆ ಸಾಕ್ಷಿ.
ಸಾರ್ವಜನಿಕ  ಗಣೇಶೋತ್ವವಕ್ಕೆ  ಶಾಂತಿಃ,  ಶಿಸ್ತು,  ಸೌಹಾರ್ದ ಕಲ್ಪನೆಯನ್ನು  ತುಂಬಿ  ತಾವು  ಇರುವಲೆಲ್ಲಾ  ಉತ್ತಮ ಗಣೇಶೋತ್ಸವ  ಸಮಿತಿಗೆ ಪ್ರಶಸ್ತಿ  ಕೊಡುತ್ತಾ  ಬಂದಿರೋದು ತಮ್ಮ  ಹುದ್ದೆಯ  ಅರ್ಥವನ್ನು  ಸಮಾಜ ಮುಖಿಯಾಗಿಸಿ ಕೊಂಡಿದ್ದಾರೆ  ಎನ್ನುವುದಕ್ಕೆ  ಬೇರೆ  ಉದಾಹರಣೆ  ಬೇಕಿಲ್ಲ ಅಲ್ಲವೇ.?   ಹಬ್ಬವನ್ನು  ಈ ಅರ್ಥದಲ್ಲಿ   ಹಲವು  ಜಾತಿ ಜನಾಂಗ  ಸಂಸ್ಕೃತಿಗಳ  ಮದ್ಯೆ  ಏಕತೆಯ ಜ್ಯೋತಿ  ಬೆಳಗಿಸುವಲ್ಲಿ  ಹೆಜ್ಜೆ  ಇಡುತ್ತಾ  ಬಂದಿರೋದು  ತನ್ನ ಹುದ್ದೆಗೆ ಅರ್ಥ ಕಂಡು ಕೊಂಡಿದ್ದಾರೆ ಎನ್ನುವುದಕ್ಕೆ  ಒಂದು ಮೈಲಿ ಗಲ್ಲು.
ಕರಾವಳಿ ಮುಂಜಾವಿನ ವರದಿಗಾರರಾದ ಎಚ್ ಎಲ್ ನಗರೇ ಅವರು ಹೇಳುವ ಮಾತು 
ಪೊಲೀಸ್  ಭಾಷೆ ಅಂತ ಒಂದು ಭಾಷೆ ಇದೆ. ಕಳೇದ  ಎರಡೂ ವರ್ಷದಿಂದ ಗಮನಿಸಿದ್ದೇನೆ. ಆದರೆ ಒಂದೇ ಒಂದು  ಪೊಲೀಸ್ ಭಾಷೆಯ  ಪದ  ಅವರ  ಬಾಯಿಂದ ಯಾರಿಗೂ ಕೇಳಿಲ್ಲ. ಅಷ್ಟು  ಸೌಜನ್ಯದ   ಭಾಷೆ  ಅವರ  ಬಾಯಲ್ಲಿ ಇದೆ. ಮಾಧ್ಯಮದವರಾಗಿ  ಯಾವುದೇ ವಿಚಾರ, ವಿಷಯಕ  ಕೇಳಿದರು  ಹೇಳುವ  ರೀತಿ, ಅದಕ್ಕೆ ಅವರು ತೋರುವ ದಾರಿ ಬೇರೆ ಯಾರಿಂದಲೂ ಸಿಗಲು ಸಾಧ್ಯವಿಲ್ಲವೇನೋ ಅನಿಸುತ್ತೆ ನಮಗೆ.
ಎಲ್ಲಿಯೂ ಪೊಲೀಸ್ ಗಿರಿ, ಪೊಲೀಸ್ ದರ್ಪವಾಗಲಿ  ಎಂದು ಕಂಡು ಬಂದಿಲ್ಲ. ಪೊಲೀಸ್ ಅಂದ್ರೆ ಹಣ ಮಾಡುವವರು  ಎನ್ನುವ  ಮಾತು  ಇದೆ. ಆದ್ರೆ   ಇವರು ಹಣ ಮಾಡಿದ್ದಾರೋ  ಇಲ್ವೋ  ಗೊತ್ತಿಲ್ಲ. ಆದ್ರೆ ಯಾರ ಬಾಯಲ್ಲೂ ಸುಲಿಗೆ ಮಾಡಿದ್ದಾರೆ  ಎನ್ನುವ  ಒಂದೇ ಒಂದು  ಶಬ್ದ ಮಾಧ್ಯಮದವರ  ಹತ್ತಿರ  ಬಂದಿಲ್ಲ. ಅವರು ಹೊನ್ನಾವರ ಪೊಲೀಸ್ ಠಾಣೆಯಲ್ಲಿ  ಸಿಪಿಐ ಎನ್ನುವುದಕ್ಕಿಂತ ಒಬ್ಬ ಶಿಕ್ಷರಾಗಿ ಕೆಲಸಮಾಡಿದ್ದಾರೆ. ಕಂಪ್ಲೇಂಟ್  ಕೊಟ್ಟಿದ್ದನ್ನು  ನಿಭಾಯಿಸುವುದು ಬೇರೆ. ಆದ್ರೆ ಎಷ್ಟೋ  ಸಮಸ್ಯೆಯನ್ನು  ಹೇಳಿದಾಗ  ಎರಡೂ ಪಾರ್ಲಿಟಿಯನ್ನು    ಕರೆಸಿ  ಯಾವುದೇ  ಕಂಪ್ಲೇಂಟ್  ಇಲ್ಲದೆ ಬಗೆ  ಹರಿಸಿದ್ದು  ತುಂಬಾ ಇದೆ.ಒಳ್ಳೆಯ ಸೌಜನ್ಯದ  ವ್ಯಕ್ತಿ  ಅವರು  ಎನ್ನುತ್ತಾರೆ.
ನೂತನ ವಾಹಿನಿಯ ನಾಗರಾಜ್ ನಾಯ್ಕ  ತಮ್ಮ ಅಭಿಪ್ರಾಯವನ್ನು ಹೀಗೆ ದಾಖಲಿಸುತ್ತಾರೆ.
ಮಾಧ್ಯಮ ಮತ್ತು ಪೊಲೀಸ್ ಇಲಾಖೆ ಇವತ್ತಿನ ದಿನದಲ್ಲಿ ಒಂದು ರೀತಿ ತದ್ವಿರುದ್ದ ಇರುವಂತದ್ದಾಗಿದೆ.ಆದರೂ ಅವರು ಮಾಧ್ಯಮದವರನ್ನು ಅತ್ಯಂತ ಸೌಜನ್ಯದಿಂದ  ಮಾತನಾಡಿಸುತ್ತಾರೆ. ಸಮಾಜವನ್ನು  ಸರಿ ದಾರಿಗೆ ತರುವಲ್ಲಿ ಇಬ್ಬರ ಪಾತ್ರವು ಅಷ್ಟೇ ಮುಖ್ಯ ಎನ್ನುವ ವಿಚಾರವನ್ನು ಇಟ್ಟುಕೊಂಡವರು.ಅವರು ಕರ್ತವ್ಯ ನಿಷ್ಠೆಯನ್ನು ಅಷ್ಟೇ ಪ್ರಾಮಾಣಿಕವಾಗಿ ಮಾಡಿದ್ದಾರೆ. ಅವರಿಗೆ ಸಿಕ್ಕ  ಮಾನ ಸನ್ಮಾನ  ಅವರ ಪ್ರಾಮಾಣಿಕ ಸೇವೆಗೆ ಸಿಕ್ಕ ಫಲ ಎನ್ನುವುದು ನಾಗರಾಜ್ ನಾಯ್ಕರ ಮಾತಾಗಿದೆ.
ಅನೇಕ ಸಂದರ್ಭದಲ್ಲಿ  ವ್ಯಯಕ್ತಿಕವಾಗಿಯೂ  ಸಹಾಯ ಹಸ್ತ ನೀಡಿ  ನಿಮ್ಮೊಳಗಿನ ಮಾನವೀಯತೆಯ ಉಸಿರಿಗೆ ನೀವೇ ಸಾಕ್ಷಿಯನ್ನು  ಕಂಡು  ಕೊಂಡಿದ್ದೀರಿ.
ಒಟ್ಟಿನಲ್ಲಿ ಎಲ್ಲರ  ಹೃದಯ ಭಾವದಲ್ಲಿಯೂ ತನ್ನ ಬಗ್ಗೆ  ಗೌರವದ  ಭಾವನೆಯನ್ನು  ದಾಖಲೆ ಮಾಡಿದ್ದು  ಒಂದು ದೊಡ್ಡ ಸಾಧನೆಯೇ, ಅದು ಪೊಲೀಸ್  ಇಲಾಖೆಯಲ್ಲಿ  ಇದ್ದು ಕೊಂಡು.  ಒಂದು  ಅರ್ಥದಲ್ಲಿ  ಶ್ರೀಧರರ  ಜನ್ಮ ಹಾಗೂ  ಅವರ  ಅಧಿಕಾರ  ಧನ್ಯವಾಯಿತು. ಇದಕ್ಕೂ  ಅವರೇ  ಕಾರಣ. ವ್ಯಕ್ತಿ  ತನ್ನ  ವಾಸ್ತವ ಬದುಕಿನ  ಪ್ರಜ್ಞೆಯನ್ನು  ಮರೆಯದೆ  ಇದ್ದರೆ, ಇದ್ದಲ್ಲಿಯೇ  ಸಾಮಾನ್ಯರ  ಹೃದಯದಲ್ಲಿ  ಸ್ಥಾನ  ಪಡೆಯಬಹುದು. 
ವಿಶೇಷ  ಚುನಾವಣ  ಕರ್ತವ್ಯದ  ನಿಮಿತ್ತ  ಸಮೀಪದ ಹಾನಗಲ್ಲಿಗೆ  ವರ್ಗಾವಣೆ  ಆದರೂ  ಇದು ಕಾಯಂ  ವರ್ಗಾವಣೆಯೇ.
ಮನುಷ್ಯನಿಗೆ ಯಾವುದು ಗೊತ್ತಿಲ್ಲವೋ ಅದನ್ನು ತಿಳಿಸುವುದು ವಿದ್ಯಾಭ್ಯಾಸದ ಗುರಿಯಲ್ಲ. ಹೇಗೆ ವರ್ತಿಸಬೇಕೆಂದು ತಿಳಿಸುವುದೇ ವಿದ್ಯಾಭ್ಯಾಸದ ಗುರಿ...............ಜಾನ್ ರಸ್ಕಿನ್ 
ನೀವು ಕಲಿತ  ಶಿಕ್ಷಣ  ನಿಮಗೆ ಅರಿವನ್ನು ಕೊಟ್ಟಿದೆ.
ಸಾವಿರಾರು ವಿದ್ಯಾರ್ಥಿಗಳ  ಹೃದಯಕ್ಕೆ  ಸುಜ್ಞಾನದ  ಅಕ್ಷರ ಮಾಲೆಯನ್ನು  ತೋಡಿಸಿದ  ಶಿಕ್ಷಕರಾದ  ನಿಮ್ಮ  ತಂದೆಯ ವೃತ್ತಿಗೆ  ನಿಜವಾದ  ಅರ್ಥದಲ್ಲಿ  ಭಾರತ  ರತ್ನಕ್ಕಿಂತ   ಮಿಗಿಲಾದ ಗೌರವವನ್ನು  ಕಲ್ಪಿಸಿ  ಕೊಟ್ಟಿರಿ. ನಿಮ್ಮ ಜನ್ಮಕ್ಕೆ ಕಾರಣರಾದ ತಂದೆ ತಾಯಿ ಮಹಾ   ಸಂಸ್ಕಾರವಂತರು ಎನ್ನುವುದನ್ನು  ನಿಮ್ಮಿಂದಾಗಿ  ತಿಳಿಯಬಹುದಾಗಿದೆ. ಮುಂದಿನ  ದಾರಿಯು  ಶುದ್ಧವಾಗಿ  ಬದುಕಿನುದ್ದಕ್ಕೂ  ನೆಮ್ಮದಿಯ  ಮಹಾ ಮಲ್ಲಿಗೆ  ನಿಮ್ಮದಾರಿಗೆ  ಹಾಸಿರಲಿ.....


ಹಳ್ಳಿ ( ಸುದ್ದಿ ) ನ್ಯೂಸ್
ಭಾವ ಶುದ್ಧಿ.
Share:

ನಮ್ಮ ದೇಶದ ಅಭಿವೃದ್ಧಿ ಇನ್ನು ಎರಡೇ ಹೆಜ್ಜೆಗಳಲ್ಲಿ ತಿಳಿಯಲು ಇದನ್ನ ಓದಿ

 ನಮ್ಮ ದೇಶದ ಅಭಿವೃದ್ಧಿ ಇನ್ನು ಎರಡೇ ಹೆಜ್ಜೆಗಳಲ್ಲಿ ಎನ್ನುವ ತಲೆಬರಹ ನೋಡ ಕಂಗಾಲಾದಿರಾ?

    ಹೌದು ಎಲ್ಲರಿಗೂ ಅತ್ಯುತ್ತಮವಾದ ವ್ಯವಸ್ಥೆ ನಮ್ಮ ದೇಶದಲ್ಲಿ ಬೇಕೇ ಬೇಕು ಎನ್ನುವ ತುಡಿತ ಮನಸ್ಸಿನ ಆಳದಲ್ಲಿ ಇದ್ದೇ ಇದೆ. ಹಾಗಾದರೆ ಈ ವ್ಯವಸ್ಥೆ ನಿಜವಾಗಲೂ ಬೇಕು ಎಂದಾದರೆ ನಮ್ಮ ಮನಸ್ಥಿತಿಯು ಬದಲಾಗಬೇಕು. ಸರಕಾರ, ಕಾನೂನು, ವ್ಯವಸ್ಥೆ, ಅಧಿಕಾರಿಗಳು ಎಷ್ಟು ಅಂತ ನಮ್ಮನ್ನ ಕಾಯಲು ನಮ್ಮನ್ನ ರಕ್ಷಿಸಲು, ನಾವು ಮಾಡುವ ತಪ್ಪುಗಳನ್ನು ತಿದ್ದಲು ಸಾಧ್ಯ? ಹೌದು ಇವತ್ತು ಎಲ್ಲಾ ಕಡೆ ಲಂಚ, ಭ್ರಷ್ಟಾಚಾರ, ಕೆಟ್ಟ ರಾಜಕೀಯ, ಕೆಟ್ಟ ಹೊಂದಾಣಿಕೆಗಳು ಇದೆಲ್ಲವು ಕಣ್ಣಿಗೆ ಕಾಣಿಸುತ್ತದೆ, ಕಂಡಾಗಲೊಮ್ಮೆ ನಮಗೆ ಅಯ್ಯೋ ಎಂದು ಅನಿಸುತ್ತದೆ. ಆದರೆ ಇದಕ್ಕೆ ನಮ್ಮ ಕಾಣಿಕೆ ಕೂಡ ಇದೆ ಎನ್ನುವುದನ್ನು ನಾವು ಮರೆಯುವಂತಿಲ್ಲ. 

ನಿಮಗೆ ಒಳ್ಳೆಯ ವ್ಯವಸ್ಥೆ ಬೇಕು ಎನ್ನುವುದಿದ್ದರೆ ನೀವು ಕೂಡ ತಕ್ಕಮಟ್ಟಿಗೆ ನಮ್ಮ ದೇಶದ ಈ ವ್ಯವಸ್ಥೆಯಲ್ಲಿ ಭಾಗಿಯಾಗಲೇಬೇಕು- ಮಾತನಾಡಲೇಬೇಕು –ಹೋರಾಡಲೇಬೇಕು. ಯಾವುದೇ ಕಚೇರಿಗಳಿಗೆ ಹೋದರೂ ನಮಗೆಲ್ಲ ಏನು ಅನಿಸುತ್ತದೆ ಎಂದರೆ, ಎಲ್ಲವನ್ನು ದುಡ್ಡಿನಿಂದಲೇ ಅಳೆಯುತ್ತಾರೆ ಎಂದು. ದುಡ್ಡು ಕೊಟ್ಟರೆ ಮಾತ್ರ ಕೆಲಸ ಆಗುತ್ತದೆ ಎಂದು. ಆದರೆ ಎಲ್ಲಾ ಕಡೆ ಈ ರೀತಿಯಾಗಿ ಇಲ್ಲ ಎಂದು ಈ ಕೆಳಗಿನ ವಿಡಿಯೋ ನೋಡಿದರೆ ಅನ್ಸುತ್ತೆ. ಇದರಲ್ಲಿ ನಮ್ಮ ದೇಶದ ಜನರ ಕೆಟ್ಟ ದೃಷ್ಟಿಕೋನಗಳು ತುಂಬಾ ಕಡೆ ಇದೆ. ಸುಧಾರಿಸಿದ ಮನಸ್ಸು ನಮ್ಮೊಳಗೆ ಬರಬೇಕು. ನಾವು ಸುಧಾರಿಸಿದರೆ ಸರಿ ದಾರಿಯಲ್ಲಿ ನಡೆದರೆ ನಮಗೆ ಯಾಕೆ ಬುದ್ಧಿವಾದ ಹೇಳಬೇಕು? 

    ಇಷ್ಟೆಲ್ಲಾ ಪೀಠಿಕೆಯನ್ನು ಹೇಳಲು ಕಾರಣ ಈ ಕೆಳಗೆ ಇರುವ ವಿಡಿಯೋ. ಅದನ್ನು ನೋಡಿದಾಗ ಬರೆಯಲೇಬೇಕು ನಿಮಗೆ ತಿಳಿಸಲೇಬೇಕು ಎಂದು ಅನಿಸಿತು ನಿಜವಾದ ಭಾರತೀಯರಿಗೆ ಬುದ್ಧಿ ಹೇಳುವ ಅವಶ್ಯಕತೆ ಇಲ್ಲ ಅವರು ಮಾಡುವ ಕೆಲಸದಿಂದಲೇ ಎಷ್ಟು ಬುದ್ಧಿವಂತರು ಎಂದು ತಿಳಿದು ಬಿಡುತ್ತದೆ. ಇದರ ಜೊತೆಗೆ ಭ್ರಷ್ಟಾಚಾರ, ಲಂಚಗುಳಿತನ, ಕೆಟ್ಟ ರಾಜಕೀಯ ವ್ಯವಸ್ಥೆಗಳು ನಮ್ಮ ಭ್ರಷ್ಟ ಮನಸ್ಸುಗಳು ಇವುಗಳನ್ನೆಲ್ಲವನ್ನು ಮಟ್ಟ ಹಾಕಲೇಬೇಕು. ಇದಕ್ಕೆ ಸರಕಾರದಲ್ಲಿ ಆಗುವಂತಹ ಭ್ರಷ್ಟಾಚಾರಗಳನ್ನು ಸರಕಾರದ ಮಟ್ಟದಲ್ಲಿ ಇರುವಂತಹ ನಿಷ್ಠಾವಂತ ಅಧಿಕಾರಿಗಳು ಏಕ ಮನಸ್ಸಿನಿಂದ ಮಾಡಲೇಬೇಕು. ಸಮಾಜದಲ್ಲಿ ಇರುವಂತಹ ಅನಿಷ್ಟ ವಿಚಾರಗಳನ್ನು ಪದ್ಧತಿಗಳನ್ನು ಸಮಾಜದಲ್ಲಿರುವ ಮುಖಂಡರುಗಳು, ತಿಳುವಳಿಕೆ ಇರುವವರು ತಡೆಯಬೇಕು. ನಾನು ಅನೇಕ ಕಡೆ ನೋಡಿದ್ದೇನೆ ತಮ್ಮ ಕೆಲಸವನ್ನು ತಾವು ಮಾಡಿಕೊಂಡು ಕೆಟ್ಟತನವನ್ನು ವಿಜೃಂಭಿಸಿಕೊಂಡು ಹೋಗುತ್ತಿರುತ್ತಾರೆ. ಒಳ್ಳೆಯವರೆಲ್ಲ ದೇವರ ಹೆಸರಿನಲ್ಲಿ ದೇವರು ನೋಡಿಕೊಳ್ಳುತ್ತಾನೆ ಎಂದು ಮಾತನಾಡುತ್ತಾರೆ. ವಿಚಾರ ಮಾಡಲೇಬೇಕು ದೇವರು ನಮ್ಮನ್ನ ಭೂಮಿಯ ಮೇಲೆ ಹುಟ್ಟಿಸಿದ್ದು, ದೇವರು ನಾನು ಬರುವರಿಗೆ ನೀನು ಕಾಯಿ ಎಂದು ಹೇಳುವುದಕ್ಕಲ್ಲ. ನೀನು ಕೆಲಸವನ್ನು ಮಾಡು ಎಂದು ಹೇಳಿ ನಮ್ಮನ್ನು ಕಳಿಸಿರುತ್ತಾನೆ ಆದರೆ ಮತ್ತೆ ನಾವು ದೇವರ ಹೆಸರಿನಲ್ಲಿ ದೇವರು ಬರಲಿ ದೇವರೇ ಕೆಲಸ ಮಾಡಲಿ ಎಲ್ಲವನ್ನು ಎಂದು ಈ ರೀತಿಯಾಗಿ ದೇವರ ಹೆಸರಿನಲ್ಲಿ ಹೇಳುತ್ತಾ ಒಳ್ಳೆಯ ವ್ಯಕ್ತಿಗಳು ಹೇಳುತ್ತಾ ಮುಂದೆ ಸಾಗ್ತಿರ್ತಾರೆ.


    ಅದೆಲ್ಲಾ ಬಿಡಿ ನಮ್ಮ ಮನೆಯನ್ನ ನಾವು ಹೇಗೆ ಕಟ್ಟಿಕೊಳ್ತೇವೋ ಹಾಗೆ ನಮ್ಮ ದೇಶವನ್ನ ಣಾವೇ ಕಟ್ಟ್ಕೊಳ್ಳಲೇಬೇಕು. ಸ್ವಲ್ಪ ಹೋರಾಟ ಮಾಡೋಣ ಬನ್ನಿ. ಭಗವಂತ ನಮ್ಮಲ್ಲೇ ಸಂಭಾವಾಮಿ ಯುಗೇ ಯುಗೇ  ಎಂದು ಆಗ್ತಾ ಇರ್ತಾನೆ. ಅದನ್ನ ಅರ್ಥ ಮಾಡ್ಕೊಳ್ಳಿ. ಒಂದೊಳ್ಳೇ ವ್ಯವಸ್ಥೆಗೆ ನಾವು ಹೋರಾಟ ಮಾಡಲೇ ಬೇಕಾಗಿದೆ.
     ನಿಮಗೆ ತೋರಿಸಬೇಕಾದ ವಿಡಿಯೋ ನಾನು ತೋರಿಸ್ತೇನೆ. ಇಲ್ಲೊಬ್ಬ ಈಶಾನ್ಯ ಭಾರತದ ಒಂದು ಪ್ರಾಂತ್ಯದ ಆರ್.ಎಫ್.ಒ ಅವರು ಜನರಿಗೆ ಎಷ್ಟು ಮನಮುಟ್ಟು ರೀತಿಯಲ್ಲಿ ವಿಷಯ ಹೇಳಿ ಕೊಟ್ಟಿದ್ದಾರೆ ಕೇಳಿ. ವಿಡಿಯೋ ಹಿಂದಿಯಲ್ಲಿದೆ ಕನ್ನಡದಲ್ಲಿ ಅದರ ಅರ್ಥವನ್ನು ಹೇಳುವ ಪ್ರಯತ್ನವನ್ನು ಮಾಡುತ್ತೇನೆ. ಅವರು ಹೇಳಿದ್ದು ಇಷ್ಟೆ “ನಮ್ಮ ಸಂಸ್ಕೃತಿಯಲ್ಲಿ ಹಿಂದೆ ಬಂದೂಕು ಇತ್ತಾ? ನೀವೆಲ್ಲ ಯಾಕೆ ಬಂದೂಕನ್ನ ತೆಗೆದುಕೊಂಡು ಸಂತೋಷವನ್ನ  ಹುಡುಕ್ತೀರಿ. ನಿಮ್ಮ ಕೈಲಿರುವ ಬಂದುಗಳನ್ನು ನೋಡಿದರೆ ನೀವು ತಾಲಿಬಾನ್ಗಳ ರೀತಿಯಲ್ಲಿ ಕಾಣಿಸ್ತಿದಿರಿ. ನಮಗೂ ಕೂಡ ಅಣ್ಣ ತಮ್ಮಂದಿರು ಸಂಬಂಧಿಗಳು ಎಲ್ಲರಿಗೂ ಇರುತ್ತಾರೆ ಅವರಲ್ಲಿ ಯಾರಾದರೂ ಸತ್ತರೆ ತುಂಬಾ ವೇದನೆಯನ್ನು ಅನುಭವಿಸುತ್ತೇವೆ. ಕಾಡಿನಲ್ಲಿರುವ ಪ್ರಾಣಿಗಳಿಗೂ ಕೂಡ ಬಂಧು ಬಳಗ ಎಲ್ಲಾ ಇರ್ತವೆ, ಹಾಗಾಗಿ ನೀವು ಕಾಡಿನಲ್ಲಿರುವ ಪ್ರಾಣಿಗಳನ್ನು ಕೊಂದು ಆನಂದ ತಗೊಳ್ಳಬೇಕಾಗಿಲ್ಲ. ನಿಮಗೆ ತಿನ್ನಬೇಕು ಅನ್ಸಿದ್ರೆ ಮಾರ್ಕೆಟಿಗೆ ಹೋಗಿ, ಮಾರ್ಕೆಟ್ನಲ್ಲಿ ಎಲ್ಲಾ ರೀತಿಯಾದ ತಿನ್ನೋದಕ್ಕೆ ಬೇಕಾದ ವಸ್ತುಗಳು ಸಿಗ್ತವೆ. ಕಾಡಿಗೆ ಹೋಗಿ ಹಿಂಸೆಗಳ ಮಾಡುವ ಮೂಲಕ ನಿಮ್ಮನ್ನು ನೀವು ಆನಂದಿಸುವುದು ಎಷ್ಟು ಸರಿ, ವಿಚಾರ ಮಾಡಿ, ಎಂದು ಹೇಳ್ತಾ ಇದ್ದಾರೆ. ನಿಜವಾಗಲೂ ಈ ರೀತಿಯ ಸರಕಾರಿ ಅಧಿಕಾರಿಗಳಿದ್ದರೆ ನಮ್ಮ ದೇಶದ ಅಭಿವೃದ್ಧಿ ಇನ್ನು ಎರಡೇ ಹೆಜ್ಜೆಗಳಲ್ಲಿ ಎಂದು ಹೇಳೋದಕ್ಕೆ ಸಾಧ್ಯ
Sri Jumgo Geiyi is RFO at Pasighat. Trying his best to convince people not to go for reckless hunting. Convincing such heavily armed people is another effort. Your views ?
ಅವರು ಜನರನ್ನ ಮನಸ್ಸನ್ನ ತಯಾರು ಗೊಳಿಸುತ್ತಿರುವುದು ಉತ್ತಮ ನಾಗರಿಕರನ್ನಾಗಿ ಪರಿವರ್ತಿಸಲು ಪ್ರಯತ್ನಿಸುತ್ತಿರುವುದು ಈ ವಿಡಿಯೋದಲ್ಲಿ ಕಂಡುಬಂದಿದೆ.  Parveen Kaswan, IFSರವರು ಷೇರ್‌ ಮಾಡಿರುವ ವಿಡಿಯೋ ವೈರಲ್‌ ಆಗ್ತಿದೆ. ಈ ವಿಡಿಯೋದ ಕುರಿತು ನಿಮ್ಮ ಅಭಿಪ್ರಾಯವನ್ನು ಖಂಡಿತವಾಗಿಯೂ ತಿಳಿಸಿ


 




Share:

ಹೃದಯದ ಮಾನವೀಯತೆಗೆ ಬದುಕ ತೆರೆದವಳು

"ಇವಳು ಹವ್ಯಕ ಹೆಣ್ಣುಕರ್ತವ್ಯದಲ್ಲಿ ದೇವರಿಗಿಂತ ಮಿಗಿಲು "
 

    ಹೀಗೆ ಹೇಳುವುದಕ್ಕೆ ಬಲವಾದ ಕಾರಣ ಉಂಟು. ಒಮ್ಮೊಮ್ಮೆ ಹೇಳದೆ ಹೋದರೆ, ಹೇಳಬೇಕು ಎಂದುಕೊಂಡಾಗ ಅವರೇ ಇರುವುದಿಲ್ಲ. ಎದುರಿಗೆ ಹೇಳದೆ ಹೋದ ಪಶ್ಚತ್ತಾಪ ಮಾತ್ರ ಇರುತ್ತದೆ. ಮಾತ್ರವಲ್ಲ ಆಗಾಗ ಕಾಡುತ್ತ ಸಾಗುತ್ತದೆ. ಸ್ಮರಿಸಿಕೊಳ್ಳಲು ಅರ್ಹತೆ ಹಾಗೂ ಯೋಗ್ಯತೆ ಇದ್ದವರನ್ನು ನಮ್ಮ ಜೊತೆಗೆ ಇರುವಾಗಲೇ ಒಮ್ಮೆಯಾದರು ಸ್ಮರಿಸಲೇಬೇಕು. ಹಾಗಾದಾಗ ಮಾತ್ರ ಬಾಳ್ವೆ ಅರ್ಥಪೂರ್ಣವಾಗುತ್ತದೆ.

    ಎಲ್ಲರ  ಹೃದಯದ ಆಳ  ಪರಿಶುದ್ಧ ಮತ್ತು ಪಾವನವಾಗಿಯೇ ಇರುತ್ತದೆ. ಆ ಭಾವ ಪ್ರೇಮವ ನೋಡಲಾಗದ ಅಂತರಂಗದ ಕಣ್ಣಿಗೆ ಜೀವನದಲ್ಲಿ ತುಂಬಿರುವ  ಮಾನವ  ಜನ್ಮ ಪ್ರೀತಿ ಗೋಚರಿಸುವುದೇ ಇಲ್ಲ. ಹಾಗಾಗಿ ಅದು ತನ್ನ ಅಸ್ತಿತ್ವವನ್ನು ವಿಸ್ತಾರವಾಗಿ ಹಬ್ಬಿಸಿ ಕೊಳ್ಳದೆ ಕುಂಟಿತವಾಗಿ ಬಿಡುತ್ತದೆ.

ಅಂತರಂಗದ ತುಂಬಾ ತುಂಬಿರುವ ಒಲುಮೆಯನ್ನು ಬಿತ್ತಿದವರು ಮಾತ್ರ  ಉಳಿದು ಬಿಡುತ್ತಾರೆ. ಈಗ ವಿಷಯಕ್ಕೆ ಬರೋಣ..

    ಜಾತಿಯಲ್ಲಿ  ಹವ್ಯಕ  ಹೆಣ್ಣು. ಇವಳು ಮದುವೆ ಆಗಿದ್ದು ನಮ್ಮ ಅಣ್ಣನನ್ನು. ನನಗೆ ಸಂಬಂಧದಲ್ಲಿ ಅತ್ತಿಗೆ, ಆದರೆ ಸತ್ಯವಾಗಿ ಹೇಳಲೇ ಬೇಕು ಎಂದರೆ ದೇವರಿಗಿಂತ ಮಿಗಿಲಾಗಿ ಕಂಡಿದ್ದಾಳೆ. ಬಹುಶಃ ಉತ್ತರ ಕನ್ನಡಲ್ಲಿಯೇ ಇವರದ್ದು ಮೊದಲ( ನಾವು ಮಾಡಿಕೊಂಡ ) ಅಂತರ್ಜಾತಿ ವಿವಾಹ ಇರಬಹುದು!   ಆದರೆ ಆಗಿನವರ ಮನಸ್ಥಿತಿಗೂ  ಈಗ ಈ ರೀತಿಯ  ಮದುವೆ  ಆಗುವವರ ಮನಸ್ಥಿತಿಗೂ  ಅಜಗಜಾಂತರ  ವ್ಯತ್ಯಾಸ ಇದೆ. ಈಗಿನವರಿಗೆ ಕೂಡು ಕುಟುಂಬ ಬೇಡ, ನಾನು ನನ್ನ ಗಂಡ ಇಬ್ಬರೇ ಇರಬೇಕು, ಮೂರನೆಯವರ ರಿಸ್ಕ ನಮಗೆ ಬೇಡ, ಇನ್ನೂ ಹಲವು. ಆದರೆ  ಆಗಿನವರ ಮನಸ್ಥಿತಿ  ಅಷ್ಟು  ಸ್ವಾರ್ಥ ಭಾವದ  ಇಳಿತ  ಇರಲಿಲ್ಲ. ಇದಕ್ಕೆ ಇವರೇ ಉದಾಹರಣೆ.

    ತಾನೊಬ್ಬ ಹೈವಕ ಜಾತಿಯ ಹೆಣ್ಣಾಗಿ, ಪ್ರೀತಿಸಿ ಮದುವೆಯಾದ ಕಾರಣ, ಬೇರೆ ಯಾರ ಜವಾಬ್ದಾರಿಯು ನಮಗೆ ಬೇಡ ನಾನು ನನ್ನ ಗಂಡ ಮಕ್ಕಳು ಅಂತ ಬದುಕನ್ನು ಸಾಗಿಸಬಹುದಿತ್ತು. ಹಾಗೆ ಬದುಕಿದರೆ ತಪ್ಪೇನು ಇರಲಿಲ್ಲ. ಅವರ ಬದುಕು, ಅವರ ಇಚ್ಛೆ ಆಗಿರುತ್ತಿತ್ತು. ಹಾಗೆ ಆಗದೇ ಸಮಷ್ಟಿ ಪ್ರಜ್ಞೆಯ ಮಹಾ ಕರ್ತವ್ಯ ಪಾಲನೆಯ ಹೆಣ್ಣಾಗಿ ಬದುಕಿದಳು.ನಮ್ಮದೇ ಜಾತಿಯ ಹೆಣ್ಣಾಗಿದ್ದರು ಇಷ್ಟು ತ್ಯಾಗದ ಬದುಕನ್ನು ನೀಡುತ್ತಿದ್ದಳು ಎನ್ನುವ ಯಾವ ಭರವಸೆಯು ನನಗಿಲ್ಲ.

    ನಮ್ಮದು ಹತ್ತಾರು ಜನ ಇರುವ ಮನೆಯಾಗಿತ್ತು. ಮದುವೆಯಾಗಿ ಬಂದ ದಿನದಿಂದಲೇ ಎಲ್ಲರೊಟ್ಟಿಗೆ ಬಾಳುವೆ ಮಾಡುವ ಮನಸ್ಸಿನ ಮಹಾ ಸಂಕಲ್ಪಕ್ಕೆ ಸಿದ್ದಳಾಗಿಯೇ ಬಂದಿರಬೇಕು ಎನಿಸುತ್ತದೆ ಈಗ ಆಲೋಚನೆ ಮಾಡಿದರೆ. ಮನೆಯ ಹಿರಿಯ ಸೊಸೆ ಎನಿಸಿಕೊಂಡು ಬಂದ ಹೆಣ್ಣಿನ ಜವಾಬ್ದಾರಿ ಏನೆಲ್ಲಾ ಇರುತ್ತದೋ ಅದೆಲ್ಲದಕ್ಕೂ  ಉಳುಮೆ ಮಾಡುವ  ಎತ್ತು ನೋಗವ ಹೊರುವಂತೆ , ಹೊತ್ತಿದ್ದಾಳೆ. ಕೆಲವು ಸಮಯ ಮನೆಯಲ್ಲಿ ಗಂಜಿಯೇ ಗತಿಯಾದರು ತನ್ನ ಧರ್ಮವನ್ನು ಎಂದು ಬಿಡದೆ ಪಾಲಿಸಿದ್ದಾಳೆ. ಅಪ್ಪ  ಅವ್ವ ಅನಾರೋಗ್ಯಕ್ಕೆ ತುತ್ತಾದಾಗಲು,ಏನೆಲ್ಲಾ ಸೇವೆ ಮಾಡಬೇಕೋ ಎಲ್ಲವನ್ನು ಮಾಡಿದ್ದಾಳೆ. ಇಡೀ ಸಂಸಾರಕ್ಕೆ ಬೇಕಾದ ಸಾಮಾನುಗಳನ್ನು ತನ್ನದೆ ಹಣದಿಂದ ತಂದಿದ್ದಾಳೆ.

    ಎಲ್ಲಿಯಾದರೂ ಮಧ್ಯರಾತ್ರಿ ಮನೆಗೆ ಬಂದಾಗಲೂ ತನ್ನ ನಿದ್ರೆಯನ್ನು ಮರೆತು ಊಟ ಬಡಿಸಿ ಬಟ್ಟಲು ತೊಳೆದಿಟ್ಟೆ ಮಲಗಿದವಳು, ಬಾಯಾರಿ ಬಂದಾಗ  ಕೇಳುವ ಮೊದಲೆ ನೀರನಿತ್ತಿದ್ದಾಳೆ. ಹಸಿವೆಯಾಗಿ ಬಂದಾಗ ಹೇಳುವ ಮೊದಲೆ ಅನ್ನ ಇಟ್ಟು  ಕರೆದಿದ್ದಾಳೆ.

    ಸ್ವಂತ ಅಕ್ಕ ತಂಗಿ ಇಲ್ಲ ನಮಗೆ, ಆದರೆ ಚಿಕ್ಕಪ್ಪನ ಮಕ್ಕಳೇ ನಮಗಿರುವ ಅಕ್ಕತಂಗಿಯರು, ಅವರನೆಲ್ಲ ಅತ್ಯಂತ ಅಕ್ಕರೆಯಿಂದಲೇ ಕಂಡಿದ್ದಾಳೆ, ಅವರನೆಲ್ಲ ಗೌರವದಿಂದ  ಅಷ್ಟೇ ಪ್ರೀತಿಯಿಂದ ಆದರಾದಿತ್ಯ ನೀಡಿದ್ದಾಳೆ. ಮನೆಗೆ ಬರುವ ಬಂಧು ಬಳಗದ ಎಲ್ಲರನ್ನು  ಪ್ರೀತಿಯಿಂದ ಉಪಚರಿಸಿದ್ದಾಳೆ.

    ಮಣಿಪಾಲದಂತ ಆಸ್ಪತ್ರೆಗೆ ಹೋಗುವಂತ ಸಂದರ್ಭ ಬಂದಾಗಲೂ ನಮ್ಮ ಜೊತೆಗೆ ಇದ್ದು  ವಾರಗಟ್ಟಲೆ ಆರೈಕೆಗೆ ಹೃದಯ ತೆರೆದಿದ್ದಾಳೆ. ಕೇರಿಯ ಯಾರದೇ ಮನೆಯ ಹೆಂಗಸರ ಹೆರಿಗೆಯ ಹೊತ್ತಲ್ಲಿ ಸೋಲ್ಪ್ ಜೊತೆಗೆ ಬಾ ಎಂದು ಮಧ್ಯರಾತ್ರಿಯಲ್ಲಿ ಕರೆದಾಗಲು ಸೊಲ್ಪವೂ ಬೇಸರಿಸದೆ ಅತ್ಯಂತ ಖುಷಿಯಿಂದ ಅವರ ಜೊತೆ ಸಾಗಿದವಳು. ತಾನು ತಿನ್ನುವುದಕ್ಕೆ ಏನೆಲ್ಲಾವನ್ನು ತಂದರು ಎಂದು ಕೊಡದೆ ತಿಂದವಳಲ್ಲ.

ಇದೆಲ್ಲ ಮನೆಮಂದಿಯ ನಮಗೆ ಆದರೆ ತನ್ನ ಗಂಡ ಅನ್ಯ ಆಹಾರ  ತಿನ್ನುವಾಗ, ಅನ್ಯ ಆಹಾರ ಮುಟ್ಟದೆ  ತನ್ನ  ನಂಬಿಕೆಯನ್ನು  ಬಿಡದೆ  ಒಲೆಯ ಮೇಲಿಟ್ಟು ಬೇಯಿಸುವರೆಗಿನ   ಎಲ್ಲ ಕೆಲಸ ಮಾಡಿ ಕೊಟ್ಟು, ಗಂಡನ ಭಾವನೆಗೆ ಅಷ್ಟರ ವರೆಗಿನ ಸತಿ ಧರ್ಮವನ್ನು ಪಾಲನೆ ಮಾಡಿದ್ದಾಳೆ.

 ಕೇರಿಯ ಯಾರದೇ ಬಾಯಲ್ಲೂ ತನ್ನ ಬಗ್ಗೆ ಬೇಡದೆ ಇರುವ  ಒಂದೇ  ಒಂದು ಮಾತನ್ನು ಆಡಿಸಿ ಕೊಳ್ಳದ ರೀತಿಯಲ್ಲಿ ಬದುಕಿದ್ದಾಳೆ. ಒಮ್ಮೆ ಕೆರೆಮನೆಯ ಅವರ ಸಂಬಂಧಿ ಸುಬ್ಬಟ್ಟರು ಮನೆಗೆ ಬಂದು  ಚಾ ಮಾಡಿಸಿ ಕುಡಿದು ಹೋಗಿದ್ದರು. ಭವಿಷ್ಯ ಅವರ ಅಂತರಂಗದ ಒಳಗೆ ಎಲ್ಲೋ ಇವಳ ಕುರಿತಾದ   ಪ್ರಜ್ಞೆಯ   ದೀಪವೊಂದು   ಬೆಳಗಿರಬೇಕು. ಹಾಗೆ ಅವರಿಗೆ ಇವಳ ಮೇಲಿರುವ ಪ್ರೀತಿಗೆ ಸಾಕ್ಷಿಯು ಹೌದು.

ಎಂತದೇ ಸಿಟ್ಟು ಬಂದಾಗಲು ಎಲ್ಲಿಯೂ ನಮಗ್ಯಾರಿಗೂ ಕೆಟ್ಟಪದ ಇಲ್ಲಿಯ ತನಕವೂ ಅವಳ ಬಾಯಿಂದ ಬಂದಿಲ್ಲ, ತನ್ನ ಮಕ್ಕಳಿಗೆ ಬೈದಿರಬಹುದು. ನಮ್ಮ ಮನೆಯ ಯಾವುದೇ ಕಾರ್ಯ ಇರಲಿ ಊರಿನ ಒಂದಿಷ್ಟು ಮನೆಗೆ ಹೋಗಿ ಹೇಳಿ ಬರಬೇಕು ಎಂದಾಗಲು ಎಲ್ಲಿಯೂ ಅನ್ಯತಾ ಭಾವಿಸದೆ, ಹೋಗಲಾರೆ ಎನ್ನದೇ, ತನ್ನ ಮನೆಯ ಕಾರ್ಯ ಎನ್ನುವ ಭಾವನೆಯಿಂದ ಮನೆಮನೆಗೆ ಕರೆಯುವುದಕ್ಕೆ ಹೋಗಿದ್ದಾಳೆ.

ಕುವೆಂಪು ಹೇಳುತ್ತಾರೆ,

ಯಾವ ಕಾಲದ ಶಾಸ್ತ್ರವೇನು ಹೇಳಿದರೇನು?

ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?

ಎಂದೋ ಮನು ಬರೆದಿಟ್ಟುದಿಂದೆಮಗೆ ಕಟ್ಟೇನು?

ನಿನ್ನೆದೆಯ ದನಿಯೆ ಋಷಿ! 

ಮನು ನಿನಗೆ ನೀನು!  ಎಂದು. 

ನಿಜ ಮನುಷ್ಯ ದೇವರಾಗುವುದು, ಮಹಾತ್ಮನಾಗುವುದು, ಎಲ್ಲವು ಅವನ ಅಂತರಂಗದಲ್ಲಿ ನೆಲೆನಿಂತ ಅನನ್ಯವಾದ ಮಾನವ ಪ್ರೇಮದಿಂದ, ನಾವು ಮಾಡಿಕೊಂಡ ಅಥವಾ ಮಾಡಿಟ್ಟ ಜಾತಿಗಿಂತ ಮಿಗಿಲಾಗಿ ನಿಂತಿರುವುದು ಅಂತರಂಗದಲ್ಲಿ ನೆಲೆ ನಿಂತ ಮಿಗಿಲಾದ ಮಾನವೀಯತೆಯಿಂದ. ತನ್ನ ಹೃದಯದೊಳಗಿನ ಶ್ರೇಷ್ಠತೆಗೆ ಮಹತ್ವ ಕೊಟ್ಟವರು, ಸತ್ತರು, ಸಾಯದೇ ನಿಂತಿದ್ದಾರೆ. ಎಲ್ಲಿಯ ತನಕ ?   ಸೂರ್ಯಚಂದ್ರರು ಇರುವ ತನಕ.!

ಪುರಂದರ ದಾಸರು ಹೇಳುವ ಹಾಗೆ "ಇಂಥ ಹೆಣ್ಣಿನ ಸಂತತಿ ಸಾವಿರವಾಗಲಿ "ಮಾನವತೆಯೇ ಮಿಗಿಲು ಎನ್ನುವುದನ್ನು ತನ್ನ ಬದುಕಿನಲ್ಲಿ ತೋರಿಸಿ ಕೊಟ್ಟ ನಿನಗೆ ನನ್ನದೊಂದು ಸಲಾಂ.

ಮನುಷ್ಯನ ಬದುಕು ಅರ್ಥಪೂರ್ಣ ಎನ್ನುವುದು ಯಾವಾಗ ಎನ್ನುವ ಪ್ರಶ್ನೆಗೆ ಇವಳು ಒಂದು ಉದಾಹರಣೆ.

ಹೆಣ್ಣಿನ ಗುಣ ಸಾಕ್ಷಿಗೆ ಈ ನೆಲ ಏನೆಲ್ಲಾವನ್ನು ಕೊಟ್ಟಿದೆಯೋ ಅವೆಲ್ಲವೂ ಅವಳ ಹೊಗಳಿಕೆ ಆಗಿರದೆ ವಾಸ್ತವದಲ್ಲಿ ಅವಳು ಅದೇ ಆಗಿದ್ದಾಳೆ ಎನ್ನುವುದನ್ನು ಈ ಪುರುಷ ಸಮಾಜ ಮರೆಯಬಾರದು.

ಹೆಣ್ಣಿಗೆ ಗೌರವ, ಮರ್ಯಾದೆ ಕೊಡದ ಯಾವ ನೆಲವು ಉದ್ದಾರ ಆದ ಇತಿಹಾಸ ಇಲ್ಲ. ನಾವು ಕಲಿಯೋಣ, ಮಾನವತೆಗೆ ಸಾಕ್ಷಿಯಾಗೋಣ. ಒಂದು ಅರ್ಥದಲ್ಲಿ ಇವಳ ಜೀವನ  ಸಾಧನೆಯು ಆಗಿ ನಿಲ್ಲುತ್ತದೆ. ಜೀವನ ಅಂದ್ರೆ ಏನು? ಅಂತ ಕೇಳಿದ್ರೆ ಹೇಳಲಿಕ್ಕೆ ಇವಳಿಗೆ ಬರದೆ ಇರಬಹುದು. ಆದರೆ ಜೀವನ ಅಂದ್ರೆ ಹೀಗೆ ಇರಬೇಕು ಅಂತ ನಡೆದು ತೋರಿಸಿದ್ದಾಳೆ. ಇದೆ ಶ್ರೇಷ್ಠ ಅಲ್ಲವೇ?

ಜನ್ಮದ  ಶ್ರೇಷ್ಠತೆ  ಹುಟ್ಟಿದ ಜಾತಿಯಿಂದ ಅಲ್ಲ. ನಡೆದ  ದಾರಿಯಿಂದ, ಬದುಕಿದ  ರೀತಿಯಿಂದ.


ಹಳ್ಳಿ (ಸುದ್ದಿ ) ನ್ಯೂಸ್

ಭಾವ ಶುದ್ಧಿ.

Share:

ಕೆಲಸ ಒತ್ತಡ ಎನಿಸಿದರೆ ಇದನ್ನೊಮ್ಮೆ ಓದಿಬಿಡಿ!!!

 ಕೆಲಸದ ಒತ್ತಡವನ್ನು  ಕಡಿಮೆ ಮಾಡುವ ಸುಲಭ ತಂತ್ರ

    ಸಾಮಾನ್ಯವಾಗಿ ನಾವು  ಕೆಲಸ ಮಾಡುವಾಗ ಕೆಲಸದ ಬಗ್ಗೆ ಯೋಚನೆಯನ್ನು ಮಾಡುತ್ತಾ ಸಮಯವನ್ನು ಕಳೆಯುವುದೇ ಜಾಸ್ತಿ, ಇಲ್ಲ ಆಮೇಲೆ ಮಾಡೋಣ ಎಂದು ಮುಂದೂಡುವ ಮನಸ್ಥಿತಿ ಎಲ್ಲರಲ್ಲಿಯೂ ಇರುತ್ತದೆ. ಇದಕ್ಕೆ ಕಾರಣ ಕೆಲಸ ದೊಡ್ಡದಿದ್ದಾಗ ಮುಗಿಸುವ ಸಮಯದ ಬಗ್ಗೆ ಆತ್ಮವಿಶ್ವಾಸದ ಕೊರತೆ ಇರುವುದು ,ಇಲ್ಲ ಅದರ ಬಗ್ಗೆ ಯೋಚಿಸಿ ಆಮೇಲೆ ಮಾಡೋಣ ಮತ್ತೆ ಮಾಡೋಣ ಎಂದು ಮುಂದೂಡುವ ಆಲಸ್ಯವೂ ಇರಹುದು.

    ಒಂದು ಪೊಮೋಡೋರೋ ಮುಗಿಸಿದ ನಂತರ ಐದು ನಿಮಿಷ  ವಿಶ್ರಾಂತಿ ಪಡೆದು, ಪ್ರತಿ ನಾಲ್ಕು ಪೊಮೋಡೋರೋ ಮುಗಿಸಿದ ನಂತರ 15 ರಿಂದ 20 ನಿಮಿಷ ವಿಶ್ರಾಂತಿ ಪಡೆದು ಆಯಾಸವಿಲ್ಲದೆ  ಎಲ್ಲಾ ಕೆಲಸವನ್ನು ಮುಗಿಸಬಹುದು.

ಪೋಮೋಡೋರೋ ಬಗ್ಗೆ ತಿಳಿಯಲು ಕ್ಲಿಕ್‌ ಮಾಡಿ

ಹೆಚ್ಚಿನ ಓದಿಗೆ ಕ್ಲಿಕ್‌ ಮಾಡಿ

Share:

ವಿದ್ಯಾರ್ಥಿಗಳಿಗಾಗಿ ಗಣರಾಜ್ಯೋತ್ಸವದ ಭಾಷಣ 

ನಮಸ್ಕಾರ,

    ಗಣರಾಜ್ಯೋತ್ಸವ ಸಮೀಪಿಸುತ್ತಿದೆ. ಹಬ್ಬದ ತಯಾರಿ ಜೋರಾಗುತ್ತದೆ. ನಮ್ಮ ವಿದ್ಯಾರ್ಥಿಗಳಿಗೆ ಭಾಷಣ ಮಾಡುವ ಆಸೆ ಹುಟ್ಟಿದರೆ ಅಂತ ಅವರಿಗಾಗಿ ನಮ್ಮ ತಂಡ ಭಾಷಣ ಸಿದ್ಧಪಡಿಸಿ ನಿಮಗಾಗಿ ಉಚಿತವಾಗಿ ನೀಡಿದೆ. ಅದನ್ನು ಬಳಸಿಕೊಂಡು ಶಾಲೆಯಲ್ಲಿ ಒಂದು ಉತ್ತಮ ಭಾಷಣ ಮಾಡಿ ಕ್ರಿಯಾಶೀಲ ವಿದ್ಯಾರ್ಥಿ ಎನಿಸಿಕೊಳ್ಳಿ. ನಿಮಗಾಗಿ ವಿವಿಧ ಸ್ತರಗಳ ವಿದ್ಯಾರ್ಥಿಗಳಿಗಾಗಿ ಬರೆದು ಕೊಟ್ಟಿದ್ದಾರೆ. ಅದನ್ನ ಪಡೆದು ತಯಾರಾಗಿ, ಕೃತಜ್ಞತೆ ಸಲ್ಲಿಸುವುದಿದ್ದರೆ ಈ ವೆಬ್ಸೈಟ್ಗೆ ಉಚಿತವಾಗಿ ಚಂದಾದಾರರಾಗಿ, ಫಾಲೋ ಮಾಡಿ ಹಾಗೆ ಒಂದು ಧನಾತ್ಮಕ ಕಾಮೆಂಟ್‌ ಮಾಡಿ.

ಧನ್ಯವಾದಗಳು

ಹೆಸರಿನ ಮೇಲೆ ಕ್ಲಿಕ್‌ ಮಾಡಿ

1. ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಗಣರಾಜ್ಯೋತ್ಸವದ ಭಾಷಣ ಕನ್ನಡದಲ್ಲಿ

2. Republic Day Speech for LKG/UKG/ 1st to 7th class, in English

3. Republic Day Speech for high school students and PU college students, in English

 

Share:

ಒಕ್ಕಲಿಗರ ಯುವ ವೇದಿಕೆಯ 6ನೇ ವರ್ಷದ ಕ್ಯಾಲೆಂಡರ ಬಿಡುಗಡೆ

ಹೊನ್ನಾವರ : ತಾಲೂಕ ಒಕ್ಕಲಿಗರ ಯುವ ವೇದಿಕೆಯ 6ನೇ ವರ್ಷದ ಕ್ಯಾಲೆಂಡರ್ ಇಂದು ಬಿಡುಗಡೆ ಗೊಂಡಿತು. ಕುಮಟಾ ಶಾಖಾ ಮಠದ ಶ್ರೀ ನಿಶ್ಚಲಾನಂದನಾಥ ಗುರುಗಳು ಶಾಖಾ ಮಠದಲ್ಲಿ ಬಿಡುಗಡೆ ಮಾಡಿ ಮಾತನಾಡಿದರು. 

ಬಿಡುಗಡೆಯ ಸಂದರ್ಭದಲ್ಲಿ ವೇದಿಕೆಯ ಅಧ್ಯಕ್ಷರಾದ ಶಂಕರ ಗೌಡ ಗುಣವಂತೆ, ಹಿಂದಿನ ಅಧ್ಯಕ್ಷರಾದ
ಸುಬ್ರಾಯ ಗೌಡ ಕಳಸಿನ ಮೋಟೆ, ಕಾರ್ಯದರ್ಶಿ ಜಗದೀಶ ಗೌಡ, ಸುರೇಶ್ ಗೌಡ ಮಾಳ್ಕೋಡ್, ಶೇಖರ್ ಗೌಡ ಚಿತ್ತಾರ.ಉಪಸ್ಥಿತರಿದ್ದರು.

 ಹಳ್ಳಿ ನ್ಯೂಸ್‌

ಗುಣವಂತೆ

Share:

Sankranti in Hiregutti took place with great pomp

Festival Of Sankranti held at Hiregutti is called Avala Habba

 Kumta: Avalahabba held every year at the time of Sankranti in Hiregutti took place with great pomp on Sunday. 


  The urns decorated with different kinds of flowers in the temple of Urn house at Hiregutti, Kumta in   Uttara Kannada District of Karnataka were carried by the priests to take a tour around the village all way. The urns of three deities of the village named, Sri Yajamana Bommaiah God, Sri Hirehosaba God and Sri Sannahosaba God were carried to the old urn house near Moraba which borders Hiregutti on the National Highway 66 which is 2 km away from the Urn house from Hiregutti. 


    They faced toward Hiregutti as the 3 Kalasas set off on their majestic walk on the highway. The sight of devotees and crowds of people walking with the Urns of God was a punching thrill. All over the road, the devotees offered fruit, coconut and aarti to the god and brought more joy to the Kalasotsavam or the festival of Urn. The three Kalasas left the house of old Urn, as soon as offering worship in the presence of Mahalingeswara of Hiregutti and gave orders these left for Sri Yajamana Bommaya temple. There God Bommaiah takes his seat and from there Hirehosaba, Sannahosabha goes to its place through Bolekeri area of the village. Then Hirehosaba and Sanharhosaba give orders in their presence and sit in their place. 

    Later, at 8 p.m., the Urn of God Bommaiah again waits for the arrival of his younger brothers Hirehosabha and Sannahosabha at Somaara Gadde. As soon as Hirehosaba-Sannahosaba rejoins Bommaiah God from his place got worshiped at Golibeera temple and offered pooja at the house of Urn in Bolekeri and Kalasotsava ends up there. Thousands of devotees gathered and offered worship to God and got darshan and became grateful. With the cooperation of priests, moktasadars, gaonkaras, katagadars, infantrymen and villagers, the festival of Sankranti (Avala festival) was held very neatly and with great pomp.

 

Article report 

  

N. Ramu Hiegutti

 

Photo Album: 






Share:

ಜನಮನ ಸೂರೆಗೊಂಡ ಹಿರೇಗುತ್ತಿ ಸಂಕ್ರಾಂತಿ ಕಳಸೋತ್ಸವ

ಸಂಪನ್ನಗೊಂಡ ಹಿರೇಗುತ್ತಿ ಸಂಕ್ರಾಂತಿ ಹಬ್ಬ (ಅವಲ ಹಬ್ಬ) 2023


 ಕುಮಟಾ: ಹಿರೇಗುತ್ತಿಯಲ್ಲಿ ಪ್ರತಿವರ್ಷ ಸಂಕ್ರಾಂತಿಯ ವೇಳೆಯಲ್ಲಿ ನಡೆಯುವ ಅವಲಹಬ್ಬ ರವಿವಾರ ಅತೀ ವಿಜೃಂಭಣೆಯಿಂದ ನಡೆಯಿತು. 

 
ಹಿರೇಗುತ್ತಿಯ ಕಳಸದ ಮನೆ ದೇವಸ್ಥಾನದಲ್ಲಿ ಬಗೆಬಗೆಯ ಹೂವುಗಳಿಂದ ಅಲಂಕೃತಗೊಂಡ ಕಳಸಗಳನ್ನು 2 ಕಿ.ಮೀ ದೂರವಿರುವ ರಾಷ್ಟ್ರೀಯ ಹೆದ್ದಾರಿ ರಸ್ತೆ 66 ರಲ್ಲಿರುವ ಹಿರೇಗುತ್ತಿಯ ಗಡಿ ಮೊರಬಾ ಹತ್ತಿರದಲ್ಲಿರುವ ಹಳೆ ಕಳಸದ ಮನೆಯಲ್ಲಿ ಅಲಂಕೃತವಾದ ಕಳಸಗಳಿಗೆ ಪೂಜೆ ಸಲ್ಲಿಸಿ ಹೇಳಿಕೆ ಮಾಡಿಕೊಂಡು ಶ್ರೀ ಯಜಮಾನ ಬೊಮ್ಮಯ್ಯ ದೇವರು, ಶ್ರೀ ಹಿರೇಹೊಸಬ, ಶ್ರೀ ಸಣ್ಣಹೊಸಬ ಮೂರು ದೇವರ ಕಳಸಗಳನ್ನು ಅರ್ಚಕರು ಹೊತ್ತುಕೊಂಡು ಆವೇಶಭರಿತವಾಗಿ ಹೈವೆ ರಸ್ತೆಯಲ್ಲಿ ಕಳಸದ ಮನೆಯಿಂದ ಹಿರೇಗುತ್ತಿಯತ್ತ ಮುಖ ಮಾಡಿದವು. 3 ಕಳಸಗಳು ಹೈವೆ ರಸ್ತೆಯಲ್ಲಿ ತಮ್ಮ ತಮ್ಮ ಗಾಂಭಿರ್ಯದ ನಡಿಗೆಯಲ್ಲಿ ಹೊರಟಾಗ ಭಕ್ತಾಧಿಗಳು ಮತ್ತು ಹಿರೇಗುತ್ತಿ ಜನಸ್ತೋಮ ದೇವರ ಕಳಸದ ಜೊತೆ ಹೆಜ್ಜೆ ಹಾಕಿದ ದೃಶ್ಯ ರೋಮಾಂಚನವಾಗಿತ್ತು. ರಸ್ತೆಯ ಅಲ್ಲಲ್ಲಿ ಭಕ್ತರು ದೇವರಿಗೆ ಹಣ್ಣು- ಕಾಯಿ ಆರತಿ ಬೆಳಗಿ ಕಳಸೋತ್ಸವಕ್ಕೆ ಇನ್ನೂ ಹೆಚ್ಚಿನ ಮೆರಗನ್ನು ತಂದರು. ಕಳಸದ ಮನೆಯಿಂದ ಹೊರಟ 3 ಕಳಸಗಳು ಹಿರೇಗುತ್ತಿಯ ಮಹಾಲಿಂಗೇಶ್ವರನ ಸನ್ನಿಧಿಯಲ್ಲಿ ಪೂಜೆಯನ್ನು ಸಲ್ಲಿಸಿಕೊಂಡು ಅಪ್ಪಣೆ ನೀಡಿ ಅಲ್ಲಿಂದ ಶ್ರೀ ಯಜಮಾನ ಬೊಮ್ಮಯ್ಯ ದೇವಸ್ಥಾನಕ್ಕೆ ಹೊರಟವು. ಅಲ್ಲಿ ಬೊಮ್ಮಯ್ಯ ದೇವರು ತನ್ನ ಸ್ಥಾನದಲ್ಲಿ ಆಸೀನನಾಗುತ್ತಾನೆ ನಂತರ ಅಲ್ಲಿಂದ ಹಿರೇಹೊಸಬ, ಸಣ್ಣಹೊಸಬ ಕಳಸಗಳು ಬೋಳೆಕೇರಿ ಮಾರ್ಗವಾಗಿ ತನ್ನ ಸ್ಥಾನಕ್ಕೆ ಹೊರಟವು. ನಂತರ ಹಿರೇಹೊಸಬ, ಸಣ್ಣಹೊಸಬ ಸನ್ನಿಧಿಯಲ್ಲಿ ಅಪ್ಪಣೆ ನೀಡಿ ತಮ್ಮ ಸ್ಥಾನದಲ್ಲಿ ಆಸೀನರಾಗುತ್ತವೆ. 
    

ನಂತರ ಸಂಜೆ 8 ಘಂಟೆ ಸಮಯಕ್ಕೆ ಪುನಃ ಬೊಮ್ಮಯ್ಯ ದೇವರ ಕಳಸವು ಸೋಮಾರ ಗದ್ದೆಯಲ್ಲಿ ತನ್ನ ತಮ್ಮಂದಿರ ಬರುವಿಕೆಗಾಗಿ ಕಾಯುತ್ತಿರುತ್ತದೆ. ನಂತರ ಹಿರೇಹೊಸಬ-ಸಣ್ಣಹೊಸಬ ತನ್ನ ಸ್ಥಾನದಿಂದ ಪುನಃ ಬೊಮ್ಮಯ್ಯ ದೇವರನ್ನು ಸೇರಿಕೊಂಡು ಗೋಳಿಬೀರ ದೇವಸ್ಥಾನದಲ್ಲಿ ಪೂಜೆ ಪಡೆದುಕೊಂಡು ಬೊಳೆಕೇರಿಯ ಕಳಸದ ಮನೆಯಲ್ಲಿ ಪೂಜೆ ಸಲ್ಲಿಸಿಕೊಂಡು ಕಳಸೋತ್ಸವವು ಅಲ್ಲಿಗೆ ಸಮಾಪ್ತಿ ಆಯಿತು. ನೆರೆದ ಸಹಸ್ರಾರು ಸಾವಿರ ಭಕ್ತರು ದೇವರಿಗೆ ಪೂಜೆ ಸಲ್ಲಿಸಿ ದರ್ಶನ ಪಡೆದು ಕೃತಾರ್ಥರಾದರು. ಅರ್ಚಕರು, ಮೊಕ್ತಸದಾರರು, ಗಾಂವಕರರು ಹಾಗೂ ಕಟಗದಾರರು, ಪದಾತಿ ದಳ, ಊರನಾಗರಿಕರು ಇವರೆಲ್ಲರ ಸಹಕಾರದಿಂದ ಸಂಕ್ರಾಂತಿಹಬ್ಬ (ಅವಲ ಹಬ್ಬ) ಅತೀ ಅಚ್ಚುಕಟ್ಟಾಗಿ ಅತೀ ವಿಜೃಂಭಣೆಯಿಂದ ನಡೆಯಿತು.






ವರದಿ: ಎನ್.‌ ರಾಮು, ಹಿರೇಗುತ್ತಿ



 

 





style="display:block"
data-ad-client="ca-pub-9205039580908152"
data-ad-slot="7519900395"
data-ad-format="auto"
data-full-width-responsive="true">

Share:

ಕರಾವಳಿ ಪ್ರೌಢ ಶಾಲೆ ಗುಣವಂತೆಯಲ್ಲಿ ಶ್ರೀ ಕ್ಷೇತ್ರಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

 ವಿದ್ಯಾರ್ಥಿಗಳ  ಭವಿತವ್ಯ ವರ್ತಮಾನದಲ್ಲಿದೆ- ಶಂಕರ ಗೌಡ, ಗುಣವಂತೆ.

    ಹೊನ್ನಾವರ : ತಾಲೂಕಿನ ಗುಣವಂತೆಯ ಕರಾವಳಿ ಪ್ರೌಢ ಶಾಲೆಯಲ್ಲಿ, ಶ್ರೀ ಕ್ಷೇತ್ರಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ  ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ನೆರವೇರಿತು. ಇದೊಂದು ವಿದ್ಯಾರ್ಥಿಗಳ ಉತ್ತಮ ಚಾರಿತ್ರ್ಯ ನಿರ್ಮಾಣದ ಕಾರ್ಯಕ್ರಮವಾಗಿದ್ದು, ಉದ್ಘಾಟನೆಯನ್ನು  ಸುಭಾಷ್ ಯುವಕ ಸಂಘದ ಅಧ್ಯಕ್ಷರು ಹಾಗೂ ಸಂಚಾರಿ ಡಾಟ್ ಕಾಮ್ ವೆಬ್ ನ ಸಂಪಾದಕರು ಆಗಿರುವ  ಶ್ರೀ ಶಂಕರ ಗೌಡ ಗುಣವಂತೆ  ನೆರವೇರಿಸಿ ಮಾತನಾಡುತ್ತ, ವಿದ್ಯಾರ್ಥಿಗ ಉತ್ತಮ ಭವಿತವ್ಯ  ವರ್ತಮಾನದಲ್ಲಿದೆ. ಬರದಿರುವ ನಾಳೆಯ ಬಗ್ಗೆ, ಹಾಗೆ ಕಳೆದು ಹೋದ ದಿನಗಳ ಬಗ್ಗೆ ಯೋಚಿಸದೆ ಎದುರಿಗೆ ಇರುವ ವರ್ತಮಾನವನ್ನು ಸರಿಯಾಗಿ ಬಳಸಿ ಕೊಂಡಾಗ ಉತ್ತಮ ಭವಿತವ್ಯ ಸಾಧ್ಯ ಎಂದರು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಪ್ರಭಾರೆ ಮುಖ್ಯೋಪಾಧ್ಯಾಯರಾದ ಶ್ರೀ ಎಸ್ ವಿ ಕಾಣೆಕರ್ ವಹಿಸಿದರು, ವಿಶೇಷ  ಸಂಪನ್ಮೂಲ ವ್ಯಕ್ತಿಗಳಾಗಿ  ಆರೋಗ್ಯ ಕೇಂದ್ರದ ಅಧಿಕಾರಿಗಳಾದ ಶ್ರೀ ಅನಿಲ್ ಗಣಾಚಾರ  ಇವರು ವಿದ್ಯಾರ್ಥಿಗಳಿಗೆ ದುಶ್ಚಟಗಳನ್ನು ಪ್ರಾಥಮಿಕವಾಗಿ ಹೇಗೆ ನಾವು ರೂಡಿಸಿಕೊಳ್ಳುತ್ತೇವೆ, ಹಾಗೂ ದುಶ್ಚಟಗಳು ಎಂದರೆ ಯಾವವು, ಅದರಿಂದ ನಾವು ಹೇಗೆ ದೂರವಿರಬೇಕು ನಮ್ಮ ಆರೋಗ್ಯವನ್ನ ಸ್ವಾಸ್ತ್ಯವಾಗಿ ಹೇಗೆ ಕಾಪಾಡಿಕೊಳ್ಳಬೇಕು ಎನ್ನುವುದರ ಬಗ್ಗೆ  ಉತ್ತಮವಾದ ಮಾಹಿತಿ ನೀಡಿದರು.

 

 ವಲಯದ ಮೇಲ್ವಿಚಾರಕರಾದ ಶ್ರೀ ಉದಯ್ ನಾಯ್ಕ  ಪ್ರಾಸ್ತಾವಿಕ ಮಾತನಾಡಿದರು, ಸೇವಾ ಪ್ರತಿನಿಧಿ ಉಷಾ ಗೌಡ  ನಿರೂಪಿಸಿದರು, ಶಿಕ್ಷಕರಾದ  ಎಸ್.ವಿ. ಕಾಣೆಕರ್  ಕಾರ್ಯಕ್ರಮದ ಸ್ವಾಗತ ಹಾಗೂ ವಂದನಾರ್ಪಣೆ ಮಾಡಿದರು

ಹಳ್ಳಿ ನ್ಯೂಸ್
ಗುಣವಂತೆ.

Share:

Okkaliga Kalashree award was given in memory of late Krishna Bhandari Gunavante to legendary artist of Yakshagana Mahadeva Patagara Hegade.

Sri Mantappa Upadhyaya's article on Mahadeva Patagara is for you.




From Memory Pages- 48
*Elite Artist Mahadev Patagara*



    A Peepul Tree seed fell on a stone can become an enormous. The seed of an interest on art is equally influential. There are few artists who can perform without practice, study or hard work just by their talent.”
     Mahadeva Patagar is an artist who learned Yakshagana1 by watching the open stage performance with enormous interest from early childhood, not by the trainer or a Guru, made theater of Yakshagana enriched by performing naturally.

     During 1976-77, the Kamalashile Troop was performing on that time under the direction of Mahabala Hegde for a limited time. The companion artist in that team was Mahadev Patagar. The artist was from an economically poor background then and still is. But the richness of a life lived out of poverty without being influenced by it should be learned from the artist Mr. Patagar. It is a great talent to live soberly, without any complaint or intensity of need or greed. What a reticence that can cover up the scarcity, the inevitability of life. Always fun. Take a step as if it represents the originality of the ground soil. It is always yes and yes to the stage as well as to live life. He takes innocent pleasure in the available things. He is a simple heart and can be melted by friendly words.
 
    Mr. Patagar, who can act out all the feminine guises of the mythological episodes is a great artist. Especially Satyabhame of Maruti Pratap was unique. No artist who has taken birth to this day to forget us about all impressions created by Mr. Patgar. Aha! Awesome! Today, it is the like a motion picture running in my mind. In the act, the performance, one can see and feel the way in which the arrogancy that which despises and rejectis Krishna totally, the bubble of ego that had grown slow as Narada comes and praises it, hides wisdom as it is in the act of Satyabhama.

  In another act, Medhavini, the wife of Kiratha Kulinda, is a minute minimum character in Chandrahasa Charite. After getting Chandrahasa, the attraction of the play lies in the dialogue between Kulinda and Medhavini which makes the audience held on their toes for about one and a half hours. The talk of desi style, a knack for enriching the context without the subject or theme, making people curious, and the art of knitting conversation on the spot are the narrations of the talent of Mr. Patagar, at that time there was no other artist like him.

 I think that if any of the enthusiastic people who Read this article, record the demonstration of these two above mentioned characters performed by Mahadev Patagar, those will remain as an element of an exemplary glorious event.

     Now about four years ago he had a heart attack and had a stent implanted. At that time, though Mr. Patagar had started for me to ask for assistance, returned back home thinking it would become meaningless if I had forgotten the acquaintance of the artist. What more can be said about an artist who knows that personal respect and self-respect are more important than health and life.

    It is my understanding that this self-respecting artist, who does not want to stretch hand towards anybody despite of the economic disadvantage, still performs in various Yalkshagana troops in order to run and keep his art life. I think the same pattern of life made the life of best artist hide out of the main stream. I hope that this society will support Mahadeva Patagar who has retired from Yakshagana about fifteen years ago and lives in his village silently.


---Mantapa Prabhakara Upadhyay.

Publish Curtsy:
Halli News
Gunavante.

You may like this:

Share:

 ಸೌಹಾರ್ದತೆಗೆ ಸಾಕ್ಷಿಯಾದ ಜಮಾತುಲ್ ಮುಸ್ಲಿಮಿನ್ ಸಹಸ್ರಮಾನೋತ್ಸವ 



style="display:block"
data-ad-client="ca-pub-9205039580908152"
data-ad-slot="7519900395"
data-ad-format="auto"
data-full-width-responsive="true">


    ಭಟ್ಕಳ : ತಾಲೂಕಿನ 1400 ವರ್ಷದಷ್ಟು ಹಿಂದೆ ಭಟ್ಕಳದ  ಮೊದಲ ಪ್ರಾರ್ಥನ ಮಂದಿರ "ಜಮಾತುಲ್ ಮುಸ್ಲಿಮಿನ್"  ಸಹಸ್ರಮಾನೋತ್ಸವ  ಇಂದು ನಡೆಯಿತು.ಇಡೀ ಸಭಾ ಮಂಡಳ ಸೌಹಾರ್ದತೆಗೆ ಸಾಕ್ಷಿಯಾಯಿತು. ವೇದಿಕೆಯ ಮೇಲಿನ ಗಣ್ಯರಿಗೆ ದೊರೆತ ಉಪಚಾರ ವೇದಿಕೆಯ ಕೊನೆಯ ಕುರ್ಚಿಯ ಮೇಲೆ ಕುಂತವನಿಗೂ ಒಂದೇ ರೀತಿಯಾಗಿ ಕಂಡು ಬಂತು. ವೇದಿಕೆಯ ಹಿಂಭಾಗದಲ್ಲಿ ಇದ್ದ ಭಿಕ್ಷುಕನಿಗೂ ವೇದಿಕೆ ಮೇಲಿದ್ದವರಿಗೆ ಮಾಡಿದ ಉಪಚಾರವೇ ಕಂಡು ಬಂದಿದ್ದು  ಸೌಹಾರ್ದ ಪದಕ್ಕೆ ನಿಜವಾದ ಅರ್ಥ ಕೊಟ್ಟಿತು. ಎಲ್ಲಾ ಧರ್ಮದ ಪ್ರತಿನಿಧಿಗಳಿಂದ ಜಮಾತುಲ್ ಮುಸ್ಲಿಮಿನ್ ಸಹಸ್ರಮಾನೋತ್ಸವಕ್ಕೆ ಸಾಕ್ಷಿಯಾಗಿ, ಕೋಮು ಸೌಹಾರ್ದ ಕಾರ್ಯಕ್ರಮಕ್ಕೆ ಮುನ್ನುಡಿ ಬರದಂತೆ ಕಂಡು ಬಂತು.

    ಕಾರ್ಯಕ್ರಮದ ಸಭಾಂಗಣವನ್ನು ( ಚಪ್ಪರ ) ನೆಯ್ದ ತೆಂಗಿನ ಗರಿಯಿಂದ  ಮಾಡಿದ್ದು, ನೂರಾರು ವರ್ಷಗಳ  ಹಿಂದಿನ  ಸಂಪ್ರದಾಯವೊಂದನ್ನು ನೆನಪಿಸುವಂತೆ ಮಾಡುತ್ತಿತ್ತು. ತಾವು ಮಾಡಿದ ಕಾರ್ಯಕ್ರಮ ಎನ್ನುವ ಅಹಂ ಭಾವ ಇಲ್ಲದೆ ಬಂದ ಎಲ್ಲರಿಗೂ ಪ್ರೀತಿಯಿಂದ ಕರೆದು ಕುರಿಸುತ್ತಿದ್ದ ರೀತಿ ಭಾರತೀಯ ಸಂಪ್ರದಾಯಸ್ತ ಮನೆಯ ಸಂಸ್ಕೃತಿ, ಸಂಸ್ಕಾರಕ್ಕೆ ಉದಾಹರಣೆಯಾಗಿ ಕಂಡುಬರುವಂತೆ ಮಾಡುತ್ತಿತ್ತು.




style="display:block"
data-ad-client="ca-pub-9205039580908152"
data-ad-slot="7519900395"
data-ad-format="auto"
data-full-width-responsive="true">



     ಸಮಾವೇಶದಲ್ಲಿ ಎಲ್ಲ ಜನಾಂಗದಿಂದ ಬಂದ ಅನೇಕ ಗಣ್ಯಮಾನ್ಯರ ಸಮಾಗಮವಾಗಿತ್ತು. ಜಮಾತುಲ್ ಮುಸ್ಲಿಮಿನ್ ಮಸೀದಿಯಲ್ಲಿ  ನಡೆಯುವ ನಮಾಜ್ ರೀತಿಯನ್ನು ವೀಕ್ಷಿಸಲು ಶ್ರೀ ಬಸವಪ್ರಕಾಶ ಸ್ವಾಮೀಜಿ, ಬಸವ ಧರ್ಮಪೀಠ ಕೂಡಲ ಸಂಗಮ ಹಾಗೂ ನೆರೆದ ಅನೇಕರ ಜೊತೆಗೆ ಬೇರೆ ಬೇರೆ ಧರ್ಮದ ಎಲ್ಲರಿಗೂ ಅವಕಾಶ ಮಾಡಿ ಕೊಟ್ಟರು.


ನಂತರ ಸಮಾವೇಶ ಸಭೆ ಮುಂದುವರಿದು, ಶ್ರೀ ಬಸವಪ್ರಕಾಶ ಸ್ವಾಮೀಜಿ ಧರ್ಮೋಪದೇಶ ಮಾಡಿದರು, ಸಭೆಯಲ್ಲಿ ಇದ್ದ ಶ್ರೀ ಜೆಡಿ ನಾಯ್ಕ, ಶ್ರೀ ಮಂಕಾಳ್ ವೈದ್ಯ, ಶ್ರೀ ಪ್ರದೀಪ್ ಜಿ.ಪೈ ಮಾತನಾಡಿದರು. ಅಂತಿಮವಾಗಿ ತಂಜಿಮ್ ಅಧ್ಯಕ್ಷರಾದ ಶ್ರೀ ಇನಾಯತುಲ್ ಶಾಬಂದ್ರಿ ವಂದನಾರ್ಪಣೆ ಮಾಡಿದರು.









style="display:block"
data-ad-client="ca-pub-9205039580908152"
data-ad-slot="7519900395"
data-ad-format="auto"
data-full-width-responsive="true">

Share:

ಮೃತ ಮಂಗನಿಗೆ ಅಂತ್ಯ ಸಂಸ್ಕಾರ; ಮಾನವತೆಗೆ ಸಾಕ್ಷಿಯಾದ ಕಾರ್ಯ

    ಭಟ್ಕಳ -  ಶಿರಾಲಿಯ ಮಾವಿನಕಟ್ಟೆಯ ಬಳಿ, ಹೃದಯ ನೋಯುವ ಘಟನೆಯೊಂದು ನಡೆಯಿತು. ರಾಷ್ಟ್ರಿಯ ಹೆದ್ದಾರಿಯ ಪಕ್ಕದ ಅಂಗಡಿಯೊಂದರ ಮೇಲೆ ಕುಳಿತಿದ್ದ ಮಂಗವೊಂದು ಇದ್ದಕ್ಕಿದ್ದಂತೆ ರಸ್ತೆ ದಾಟಲು ಮುಂದಾದ ಕಾರಣ ವಾಹನವೊಂದಕ್ಕೆ ತಾಗಿ ರಸ್ತೆಯ ಮೇಲೆ ಉಸಿರು ಚಲ್ಲಿತು. ಅದೇ ಸಮಯಕ್ಕೆ ಅಲ್ಲಿಗೆ ಬಂದ ಶಂಕರ ಗೌಡ, ಗುಣವಂತೆ ಹಾಗೂ ಆಲ್ವಿನ್ ಡಿಸಿಲ್ವಾರವರು ಮಂಗನ ಅಸಾಯಕ ಸ್ಥಿತಿಗೆ  ಮರುಗಿ ನೋವಿನಲ್ಲಿ ಒದ್ದಾಡುತ್ತಿದ್ದ  ಮಂಗನ  ರಕ್ಷಣೆಗೆ ಮುಂದಾದರೂ ಮಂಗನ ಉಸಿರು ನಿಂತಿತ್ತು. ಶಿರಾಲಿಯ  ಮಾವಿನ ಕಟ್ಟೆಯ ಸಹೃದಯರೊಬ್ಬರು  ರಕ್ಷಣೆಗೆ  ಕೈ ಜೋಡಿಸಿ ನೀರು  ತಂದರೂ  ಮಂಗನ  ಸಾವನ್ನು ತಡೆಯಲಾಗಲಿಲ್ಲ.

    ಈ ಘಟನೆಗೆ ಮರುಗಿ, ಸತ್ತ ಮಂಗನನ್ನು ಅಲ್ಲಿಯೇ ಬಿಡದೆ ಅದ್ಕಕ್ಕೊಂದು ಅಂತ್ಯಸಂಸ್ಕಾರಕ್ಕೆ ಮುಂದಾದ ಶಂಕರ ಗೌಡರು, ತನ್ನೂರಿನ ಪುರೋಹಿತರಿಂದ ಮಾಹಿತಿ ಪಡೆದು ಶಿರಾಲಿ ಮಾವಿನ ಕಟ್ಟೆಯ ಸಹೃದಯರ ಸಹಕಾರದೊಂದಿಗೆ ಹೂವು, ಬಾಳೆಹಣ್ಣು, ಊದಬತ್ತಿ  ತಂದು, ಪೂಜೆ ಸಲ್ಲಿಸಿ  ಅಂತ್ಯ ಸಂಸ್ಕಾರಕ್ಕೆ  ಹೊಂಡವೊಂದನ್ನು ತೆಗೆದು ಪುರೋಹಿತರು ಸೂಚಿಸಿದಂತೆ ಸತ್ತ ಮಂಗನಿಗೆ ಸಂಸ್ಕಾರ ಮಾಡುವ ಮೂಲಕ ಮಾನವೀಯತೆಗೆ ಸಾಕ್ಷಿಯಾದರು. ಮಾನವತೆ ಎನ್ನುವುದು  ಅವಕಾಶ ಬಂದಾಗ ಅನುಷ್ಠಾನಕ್ಕೆ ಮುಂದಾದಲೇ  ಮನುಷ್ಯನ  ಹೃದಯ  ಎಂತದ್ದು ಎನ್ನುವುದಕ್ಕೆ ಸಾಕ್ಷಿ ದೊರೆಯುವುದು.


    ತನ್ನ ಬೈಕಿನಲ್ಲಿ ಗುಣವಂತೆ ಬರುತ್ತಿದ್ದ ಶಂಕರ ಗೌಡ ಹಾಗೂ ಆಲ್ವಿನ್ ಡಿಸಿಲ್ವಾರ ಮಾನವೀಯ ಕಾರ್ಯಕ್ಕೆ ಕೈ ಜೋಡಿಸಿದ ಶಿರಾಲಿಯ ಮಾವಿನ ಕಟ್ಟೆಯ ಹೃದಯವಂತರ ಸಹಕಾರ  ರಸ್ತೆಯ ಮೇಲೆ ಸಾವು ಕಂಡ ಮಂಗ ಅಲ್ಲಿಯೇ ಅಪ್ಪಚ್ಚಿಯಾಗುವ ಬದಲು ಸದ್ಗತಿ ಕಾಣುವಂತೆ ಆಗಿದ್ದು ಮೆಚ್ಚುಗೆಗೆ ಪಾತ್ರವಾಯಿತು.

 

Share:

Girish Naik: who husks coconut with his teeth

Honnavara: Man glitters from his thoughts, achievements and the path chosen. There are many ways for those who want to achieve. If there is a mind there is will. There are few people who walk in the path of his own creation in the society. When such people get encouragement from the environment, they stand proud for the society as well as native. Girish Naik, the young heart of Talamakki of Manki the biggest Grama Panchayat in Karnataka, India, known in history as Manikya Pura.




http://

 



An adventurer who husks coconut with his teeth:



    He has already performed his stunts on 8 platforms, in 2019 his talent was presented at the Ram Kshatriya convention. He used the opportunity in places like Gudimakki, Balakur, Byndur and found support for his desire to achieve. He can peel a coconut in 15 to 30 seconds of time. So far, more than 80 coconuts have been husked off with his teeth. Now he is trying to achieve the rare feat of peeling off 3 coconuts in 1 minute.







This is not a magic, a mantra or a technique. In rural areas, iron nails are put on fingernails while harvesting betel nuts, whereas Girish Naik has achieved and continues to peel coconuts without any protection for his teeth.


 

A mine of versatile talent:



Mr. Girish, who has been self-employed, running a motor vehicle washing service center for nearly 20 years in Manki, has dreamt of a rare feat. Peeling off coconut husk is one facet of his feat, also Girish Naik is a public-theater artist. With his great skill who plays villain, protagonist role in social drama with equal vitality. Apart from playing a female role, he also took a step into Yakshagana theater as an amateur artist after learning Yakshagana from Gunavanthe Sri Krishna Bandhari. The multifaceted young youth of the palce is full of an inner sense that something should be achieved through acting and adventure, that life should not be wasted.






    Achievement is possible only after continuous effort. Only when the respective society stands by the achievement of Girish Naik who is moving in that way, the other will come to respect it. It is also getting identified as representative of the society. If the achievement of an individual is not supported by the society, then it will be wasted for whole. Girish Naik's spirit is the source of motivation for his achievement.





    If it gets recognised by local support and it will open the door to create history. Gifted people always exist in every society. If the home's rationality, culture and thinking power is low, the talent will languish. Once the plant is watered of encouragement, it grows like a tree and becomes immortal. Finally, those who were not recognised at home should be supported by community, society, association and organization consciously. Girish Naik needs such a support for his longing for achievement. Hence everyone consider his achievement be a model for the society and a lamp of motivation for the mind to achievers.



: 9986548305




Halli News
Gunavante, Honnavara.

Share:

 ಅಪರೂಪದ ಸಾಧನೆಯತ್ತ ಗಿರೀಶ್ ನಾಯ್ಕ ಮಂಕಿ

    ಹೊನ್ನಾವರ: ಮನುಷ್ಯ ಬೆಳಗುವುದು ತನ್ನ ಚಿಂತನೆ, ಸಾಧನೆ, ಸಾಗಿದ ದಾರಿಯಿಂದ. ಸಾಧನೆ ಮಾಡಬೇಕು ಎನ್ನುವವರಿಗೆ ಹಲವು ದಾರಿ. ಸಾಧಿಸಲೇ ಬೇಕು ಎನ್ನುವ ಮನಸಿಗೆ ಒಂದೇ ದಾರಿ. ಸಮಾಜದಲ್ಲಿ  ಅಪರೂಪದ ಸಾಧನೆಯ  ದಾರಿ  ಕ್ರಮಿಸುವವರು ಕೆಲವರು. ಅಂತವರಿಗೆ ಪರಿಸರದ ಪ್ರೋತ್ಸಾಹ ಸಿಕ್ಕಾಗ ಸಮಾಜ ಮತ್ತು ಊರಿಗೆ ಹೆಮ್ಮೆಯಾಗಿ ನಿಲ್ಲುತ್ತಾರೆ. ಇವರು ಮಾಣಿಕ್ಯ ಪುರವೆಂದು ಇತಿಹಾಸದಲ್ಲಿ ಗುರುತಿಸಲ್ಪಟ್ಟ ಮಂಕಿಯ ತಾಳಮಕ್ಕಿಯ ಯುವ ಹೃದಯಿ, ಗಿರೀಶ್ ನಾಯ್ಕ.

 



 ತನ್ನ ಹಲ್ಲಿನಿಂದಲೇ ತೆಂಗಿನ ಕಾಯಿ ಸೊಲಿಯುವ ಸಾಹಸಿಗ:

     ಈಗಾಗಲೇ 8 ವೇದಿಕೆಯಲ್ಲಿ ತನ್ನ ಸಾಹಸ ಪ್ರದರ್ಶನ ಮಾಡಿರುವ ಇವರು 2019ರಲ್ಲಿ ರಾಮ ಕ್ಷತ್ರಿಯ ಸಮಾವೇಶದಲ್ಲಿ ಇವರ ಪ್ರತಿಭೆಗೆ ವೇದಿಕೆ ಕಲ್ಪಿಸಲಾಗಿತ್ತು. ಹಾಗೆ ಗುಡಿಮಕ್ಕಿ, ಬಳಕೂರು, ಬೈಂದೂರು, ಮೊದಲಾದ ಊರುಗಳಲ್ಲಿ ಸಿಕ್ಕ ಅವಕಾಶವನ್ನು ಬಳಸಿಕೊಂಡು ಸಾಧನೆಯ ಹಂಬಲಕ್ಕೆ ಬೆಂಬಲ ಕಂಡರು. ಈಗಾಗಲೇ 15 ರಿಂದ 30 ಸೆಕೆಂಡಗಳಲ್ಲಿ ಒಂದು ತೆಂಗಿನ ಕಾಯಿಯ ಸಿಪ್ಪೆ ಬಿಡಿಸಬಲ್ಲರು. ಇಲ್ಲಿಯ ತನಕ ಸುಮಾರು 80ಕ್ಕೂ ಹೆಚ್ಚು ತೆಂಗಿನ ಕಾಯಿಯನ್ನು ಹಲ್ಲಿನಿಂದ ಸೊಲಿದವರು. ಈಗ 1 ನಿಮಿಷದಲ್ಲಿ 3 ತೆಂಗಿನಕಾಯಿ ಸೊಲಿಯುವ ಅಪರೂಪದ ಸಾಧನೆಯ ಪ್ರಯತ್ನದಲ್ಲಿ ಇದ್ದಾರೆ. 

http://

 ಇದೇನು ಜಾದು ಅಲ್ಲ, ಮಾಟ, ಮಂತ್ರ, ತಂತ್ರ ಅಲ್ಲ.  ಗ್ರಾಮೀಣ ಭಾಗದಲ್ಲಿ ವೀಳ್ಯದೆಲೆ ಕೊಯ್ಯುವಾಗ ಬೆರಳ ಉಗುರಿಗೇ ಕಬ್ಬಿಣದ ಉಗುರನ್ನು ಹಾಕಿಕೊಳ್ಳುತ್ತಾರೆ ಅಂತಹುದ್ದರಲ್ಲಿ ಗಿರೀಶ್ ನಾಯ್ಕರು ತನ್ನ ದಂತ ಪಂಕ್ತಿಗೆ ಯಾವುದೇ ರಕ್ಷಾ ಕವಚ ಇಲ್ಲದೆ ತೆಂಗಿನ ಕಾಯಿ ಸಿಪ್ಪೆ ತೆಗೆಯುವ ಸಾಧನೆ ಮಾಡಿದವರು, ಮಾಡುತ್ತಾ ಇರುವವರು.

 ಬಹುಮುಖ ಪ್ರತಿಭೆಯ ಖಣಿ:

    ಸುಮಾರು 20 ವರ್ಷದಿಂದ ಗಾಡಿ ವಾಶಿಂಗ್ ಸರ್ವಿಸ್ ಸೆಂಟರ್ ಸ್ವಉದ್ಯೋಗ  ಮಾಡುತ್ತಿರುವ ಗಿರೀಶ್ ಬಹು ಅಪರೂಪದ ಸಾಧನೆಯ ಕನಸು ಕಂಡವರು. ಇದು ಇವರ  ಸಾಹಸದ  ಸಾಧನೆ  ಒಂದು ಮುಖವಾದರೆ, ಗಿರೀಶ್ ನಾಯ್ಕರು  ಸಾಮಾಜಿಕ ರಂಗಭೂಮಿಯ ಕಲಾವಿದರು ಹೌದು. ಸಾಮಾಜಿಕ ನಾಟಕದಲ್ಲಿ ಖಳನಾಯಕ, ಕಥಾನಾಯಕ, ಪಾತ್ರವನ್ನು ಅಷ್ಟೇ ಜೀವಂತಿಕೆಯಿಂದ ಅಭಿನಯಿಸುವ ಕಲಾ ಪ್ರಜ್ಞ. ಸ್ತ್ರೀ ಪಾತ್ರವನ್ನು  ಮಾಡಿರುವುದು  ಮಾತ್ರವಲ್ಲದೆ , ಗುಣವಂತೆಯ  ಶ್ರೀ ಕೃಷ್ಣ ಭಂಡಾರಿಯವರಲ್ಲಿ ಯಕ್ಷಗಾನವನ್ನು  ಕಲಿತು ಹವ್ಯಾಸಿ ಕಲಾವಿದರೊಟ್ಟಿಗೆ ಯಕ್ಷಗಾನ ರಂಗಭೂಮಿಯಲ್ಲಿ ಹೆಜ್ಜೆಯನ್ನು ಸಹ ಇಟ್ಟವರು. ಬಹುಮುಖ ಆಸಕ್ತಿಯ  ಯುವ ಹೈದನಿಗೆ ಅಭಿನಯ ಹಾಗೂ ಸಾಹಸದ ಮೂಲಕ ಏನಾದರೊಂದು ಸಾಧನೆ ಆಗಬೇಕು, ಬದುಕು ಸುಮ್ಮನೆ ವ್ಯರ್ಥ ಆಗಬಾರದು ಎನ್ನುವ ಅಂತರಂಗಿಕ ಪ್ರಜ್ಞೆಯ ತುಡಿತ ಇದೆ.

    ಸಾಧನೆ ಎನ್ನುವುದು ನಿರಂತರ ಪ್ರಯತ್ನದ ಬೆನ್ನೇರಿದಾಗ ಮಾತ್ರ ಸಾಧ್ಯ. ಆ ದಾರಿಯಲ್ಲಿ ಸಾಗುವ, ಸಾಗುತ್ತಿರುವ ಗಿರೀಶ್ ನಾಯ್ಕರ ಸಾಧನೆಗೆ ಮೊದಲು ಆಯಾ ಸಮಾಜ ಜೊತೆಗೆ ನಿಂತಾಗ ಮಾತ್ರ ಮುಂದೆ ಇತರ ಸಮಾಜವು ಗೌರವಿಸುವುದಕ್ಕೆ ಬರುವಂತಾಗುತ್ತದೆ. ಹಾಗೆ ಬರುವುದು ಗಿರೀಶ್ ನಾಯ್ಕರ ಸಮಾಜಕ್ಕೂ ಸಿಗುವ ಗೌರವವಾಗಿ ಮಾರ್ಪಡುತ್ತದೆ. ವ್ಯಕ್ತಿಯ ಸಾಧನೆಯ ಹಿಂದೆ ಸಮಾಜದ ಬೆಂಬಲ ಇಲ್ಲದೆ ಹೋದರೆ ಮುಂದೆ ಕಳೆದು ಹೋದಾಗ ಮರುಗಿಯೂ ವ್ಯರ್ಥವೇ ಸರಿ. ಗಿರೀಶ್ ನಾಯ್ಕರ  ಮನೋ ಚೈತನ್ಯದ ಆತ್ಮಬಲವೇ ಇವರ ಸಾಧನೆಗೆ ಪ್ರೇರಣೆಯ ಮೂಲ.

     ಇದಕ್ಕೊಂದು ಪರಿಸರದ ಬೆಂಬಲ ಸಿಕ್ಕಿದರೆ ಮುಂದೆ ಅದು ಇತಿಹಾಸ ಆಗುವುದಕ್ಕೂ ಬಾಗಿಲು ತೆರೆಯುತ್ತದೆ. ಪ್ರತಿಭಾನ್ವಿತರು ಎಲ್ಲ ಸಮಾಜದಲ್ಲೂ ಇದ್ದಾರೆ. ಮನೆಯ ವೈಚಾರಿಕಕತೆ, ಸಂಸ್ಕೃತಿ ಚಿಂತನೆಯ ಬಲ ಕಡಿಮೆ ಇದ್ದಲ್ಲಿ ಪ್ರತಿಭೆ ಸೊರಗುತ್ತದೆ. ಪ್ರೋತ್ಸಾಹದ  ಜಲ  ಸದಾ ಇರುವಲ್ಲಿ ಅದು ಮರವಾಗಿ ಹುಲೂಸಾಗಿ ಬೆಳೆದು ಅಮರವಾಗುತ್ತದೆ.
ಕೊನೆಯ ಪಕ್ಷ  ಮನೆಯಲ್ಲಿ ಸಿಗದೇ ಇದ್ದರು ಪರಿಸರ, ಸಮಾಜ, ಸಂಘ, ಸಂಸ್ಥೆ  ಪ್ರಜ್ಞೆಯ  ಮನಸ್ಥಿತಿಯ ಬೆಂಬಲವಾದರು ಸಿಗಬೇಕು. ಗಿರೀಶ್ ನಾಯ್ಕರಿಗೆ ಅಂತದ್ದೊಂದು ಬೆಂಬಲ ಬೇಕಾಗಿದೆ ಅವರ ಸಾಧನೆಯ ಹಂಬಲಕ್ಕೆ.ಅಂತ ಬೆಂಬಲ ಸಿಗುವಂತಾಗಿ ಅವರ ಸಾಧನೆ ಸಮಾಜಕ್ಕೆ ಮಾದರಿಯಾಗಿ, ಸಾಧಿಸುವ ಮನಸಿಗೆ ಪ್ರೇರಣೆಯ ನಂದಾದೀಪವಾಗಲಿ.

:9986548305

 ಶಂಕರ ಗೌಡ, ಹಳ್ಳಿ ನ್ಯೂಸ್
ಗುಣವಂತೆ





Share:

ಭೂತನ ಹೀಗೂ ಓಡಿಸ್ತಾರಾ!!!

    ಭೂಮಿಯ ಮೇಲೆ ಬದುಕಲು ಜನ ಬೇರೆ ಬೇರೆ ದಾರಿಯನ್ನು ಕಂಡುಕೊಂಡಿರುತ್ತಾರೆ. ಭೂಮಿಯ ಮೇಲೆ ಮನೆಗಳನ್ನು ಕಟ್ಟಿಕೊಂಡು ವಾಸಿಸುತ್ತಿರುವ ಜನಗಳ ನಡುವೆ ಅನೇಕ ಸಮಸ್ಯೆಗಳು ಬಂದು ಎರುಗುತ್ತದೆ. ಬಡತನ, ಶಿಕ್ಷಣ, ಆರ್ಥಿಕ ಸ್ಥಿತಿ, ಉದ್ಯೋಗ... ಪಟ್ಟಿ ಮಾಡುತ್ತಾ ಹೋದರೆ ಸಾಲುಗಳು ನಿಲ್ಲುತ್ತಾ ಹೋಗುತ್ತವೆ. ಇವೆಲ್ಲವೂ ಕೂಡ ಮನುಷ್ಯನಿಗೆ ಒಂದು ರೀತಿಯಲ್ಲಿ ಗಂಭೀರವಾದ ಪರಿಣಾಮಗಳನ್ನು ಉಂಟುಮಾಡುತ್ತವೆ. 
 
    
 
ಇದರ ಹೊರತಾಗಿ ಮನುಷ್ಯನನ್ನು ಅನೇಕ ಕಾಡುವ ಸಮಸ್ಯೆಗಳು ಇದ್ದಾವೆ. ಅವುಗಳಲ್ಲಿ ಅನಿಷ್ಟ ವಿಚಾರಗಳ ಕೆಟ್ಟ ಶಕ್ತಿಗಳ ,ದುಷ್ಟಬಾದೆಗಳು, ದೆವ್ವ, ಭೂತ ಇತ್ಯಾದಿಗಳು ಮನುಷ್ಯನನ್ನ ಬಾಧಿಸುತ್ತದೆ.  ಅವುಗಳಿಗೆ ಅವನು ಪರಿಹಾರ ಕಂಡುಕೊಳ್ಳುವ ಪ್ರಯತ್ನಗಳನ್ನ, ದಾರಿಗಳನ್ನ ಹುಡುಕುತ್ತಲೇ ಇರುತ್ತಾನೆ. ಇದೆಲ್ಲದರ ನಡುವೆ ಇಲ್ಲೊಂದು ವಿಡಿಯೋ ಟ್ವಿಟರ್ ಖಾತೆಯಲ್ಲಿ ಹಂಚಿಕೆಯಾಗಿದ್ದು ಅನೇಕ ಜನರ ಜನರು ವಿಡಿಯೋವನ್ನು ನೋಡಿ ಗಾಬರಿಗೊಂಡು ಆಶ್ಚರ್ಯವನ್ನು ಕೂಡ ಪಟ್ಟಿದ್ದಾರೆ.


ವಾಸಿಂ ಆರ್. ಖಾನ್ ಎನ್ನುವ ವ್ಯಕ್ತಿಯು ತಮ್ಮ ಟ್ವಿಟರ್ ಖಾತೆಯಲ್ಲಿ ಭೂತವನ್ನ ಹೀಗೂ ಓಡಿಸುತ್ತಾರೆ ಎನ್ನುವ ವಿಡಿಯೋವನ್ನು ಭೂತ ಓಡಿಸುವ ಹೊಸ ವಿಧಾನ ಎನ್ನುವ ಟೈಟಲ್ ಅಡಿಯಲ್ಲಿ ತಮ್ಮ ಒಂದು ವಿಡಿಯೋ ಹಂಚಿಕೊಂಡಿದ್ದಾರೆ ಭೂತವನ್ನ ಓಡಿಸಲು ಹೊಸದೊಂದು ವಿಧಾನವನ್ನು ಕಂಡುಕೊಂಡಿದ್ದು ಎಲ್ಲಾ ಕಡೆ ವೈರಲಾಗುತ್ತಿದೆ. ವಿಡಿಯೋ ನೋಡಿ ನಿಮ್ಮ ಅನಿಸಿಕೆ ತಿಳಿಸಿ.

Share:

Teachers transfer link

Teachers Transfer Website-2022-23

ಶಿಕ್ಷಕರ ವರ್ಗಾವಣೆ ವೆಬ್‌ಸೈಟ್-2022-23

2022-23 ನೇ ಸಾಲಿನ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಡಿಯಲ್ಲಿ ಬರುವ ಶಿಕ್ಷಕರ ವರ್ಗಾವಣೆ ಪ್ರಾರಂಭವಾಗಿದ್ದು ವರ್ಗಾವಣೆಯ ಲಿಂಕ್‌ ಈ ಕೆಳಗಿನಂತೆ ಇದೆ.


 ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ  


ಶಿಕ್ಷಣ ಮಿತ್ರ ಮೊಬೈಲ್‌ ಎಪ್ಲಿಕೇಶನ್‌ ಡೌನ್‌ಲೋಡ್‌ ಮಾಡಲು ಈ ಕೆಳಗೆ ಕ್ಲಿಕ್‌ ಮಾಡಿ





ವರ್ಗಾವಣಾ ವೇಳಾ ಪತ್ರಿಕೆ ಈ ಕೆಳಗಿನಂತಿದೆ:


Share:

Subscribe Us

ನನ್ನ ನೆಚ್ಚಿನ ಸುದ್ಧಿ ಜಾಲಾ

Join Our Team

Labels

Blog Archive